ಸಿಎ-ಸಿಪಿಟಿ ಪರೀಕ್ಷೆಯಲ್ಲಿ ದೇಶಕ್ಕೆ ದ್ವಿತೀಯ ಸ್ಥಾನ ಪಡೆದ ಜಿಲ್ಲೆಯ ತವಿಶಿ ದೇಚಮ್ಮ
ಮಡಿಕೇರಿ: ಸತತ ಪರಿಶ್ರಮಕ್ಕೆ ಬೆಲೆ ಸಿಕ್ಕಿದೆ. ಕನಸೊಂದನ್ನು ಸಾಧಿಸಿದ ಖುಷಿ ಇದೆ. ಮುಂದಿನ ಎರಡು ಹಂತಗಳನ್ನು ಮೊದಲ ಯತ್ನದಲ್ಲಿಯೇ ಸಾಧಿಸುವ ಛಲವಿದೆ.
- ಇದು ಇನ್ಸಿಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ರಾಷ್ಟ್ರಮಟ್ಟದಲ್ಲಿ ನಡೆಸಿದ ಸಿಎ-ಸಿಪಿಟಿ( ಕಾಮನ್ ಪ್ರೊಫಿಸಿಯೆನ್ಸಿ ಟೆಸ್ಟ್) ಪರೀಕ್ಷೆಯಲ್ಲಿ ದೇಶಕ್ಕೆ ದ್ವಿತೀಯ ಹಾಗೂ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಕೊಡಗು ಜಿಲ್ಲೆಯ ತವಿಶಿ ದೇಚಮ್ಮ ಅವರ ಮನದಾಳದ ಮಾತು.
ತಮ್ಮ ಫಲಿತಾಂಶ ಹಾಗೂ ಅದರ ಹಿಂದಿನ ಪ್ರಯತ್ನದ ಕುರಿತು ವಿಜಯ ಕರ್ನಾಟಕದೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸಿಎ-ಸಿಪಿಟಿ ಪರೀಕ್ಷೆಯನ್ನು ಗಮನ ದಲ್ಲಿಟ್ಟುಕೊಂಡು ದಿನನಿತ್ಯ ಓದುತ್ತಿದೆ. ಪಿಯುಸಿ ಮುಖ್ಯ ಪರೀಕ್ಷೆ ನಂತರ ದಿನನಿತ್ಯ ಮೂರರಿಂದ ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಅಭ್ಯಾಸ ನಡೆಸಿದ್ದೇನೆ. ರಜೆ ದಿನ ಎಂದೇನೂ ಇರಲಿಲ್ಲ. ವಾರದ ಎಲ್ಲ ದಿನಗಳಲ್ಲೂ ಅಭ್ಯಾಸದಲ್ಲಿ ತೊಡಗಿಕೊಂಡಿದ್ದೆ ಎಂದು ತಿಳಿಸಿದರು.
ಕನಸಿಗೆ ಇಂಬು ನೀಡಿದ ಅಳ್ವಾಸ್ ಸಂಸ್ಥೆ: ಸಿಎ-ಸಿಪಿಟಿ ಪರೀಕ್ಷೆಯಲ್ಲಿ ರಾರಯಂಕ್ ಪಡೆಯಲು ಮೂಡಬಿದಿರೆಯ ಆಳ್ವಾಸ್ ಶಿಕ್ಷ ಣ ಪ್ರತಿಷ್ಠಾನವೇ ಕಾರಣ. ಆ ಸಂಸ್ಥೆಯ ತರಬೇತಿಯಿಂದಲೇ ರಾರಯಂಕ್ ಗಳಿಸಿದ್ದೇನೆ. ಪರೀಕ್ಷೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಸಂಸ್ಥೆ ಮ್ವಾಕ್ ಟೆಸ್ಟ್, ಆನ್ ಲೈನ್ ಟೆಸ್ಟ್ ಗಳನ್ನು ನಡೆಸಿತು. ಜೊತೆಗೆ ಉಡುಪಿ, ಬೆಂಗಳೂರು
ಸೇರಿದಂತೆ ವಿವಿಧೆಡೆಯಿಂದ ಪರಿಣಿತರನ್ನು ಕರೆಸಿ ಕೋಚಿಂಗ್ ನೀಡಿದ್ದು, ಮಾತ್ರವಲ್ಲದೇ ಶಿಕ್ಷ ಣ ಸಂಸ್ಥೆಯ ವಾತಾ ವರಣ ಕೂಡ ಕಲಿಕೆಗೆ ಪೂರಕವಾಯಿತು. ಆಳ್ವಾಸ್ ಶಿಕ್ಷ ಣ ಸಂಸ್ಥೆಯ ಪ್ರೋತ್ಸಾಹ ನನ್ನನ್ನು ಈ ಮಟ್ಟಿಗೆ ಬೆಳೆಸಿದೆ ಎಂದರು.
ಗೊಂದಲ ಬಗೆಹರಿಸಿಕೊಳ್ಳಿ: ಸಿಎ- ಸಿಪಿಟಿ ಪರೀಕ್ಷೆಯಲ್ಲಿ ಗೊಂದಲಗಳಿದ್ದಾಗ ಸ್ನೇಹಿತರೊಂದಿಗೆ ಚರ್ಚಿಸಿ ಗೊಂದಲವನ್ನು ಬಗೆಹರಿಸಿಕೊಳ್ಳುತ್ತಿದೆ. ಸಾಕಷ್ಟು ವಿಷಯ ಗಳು ಕೂಡ ನಮಗೆ ತಿಳಿದಿರುದಿಲ್ಲ. ಇಂತಹ ಸಂದರ್ಭ ಮಾಹಿತಿಯನ್ನು ವಿನಿ ಮಯ ಮಾಡಿಕೊಳ್ಳುದರಿಂದ ಗೊಂದಲ ಬಗೆಹರಿಯುತ್ತದೆ. ಇದು ಕೂಡ ನನಗೆ ಪೂರಕವಾಯಿತು ಎಂದು ತಿಳಿಸಿದರು.
ಕೋಚಿಂಗ್ ಅನಿವಾರ್ಯವಲ್ಲ: ಸಿಎ- ಸಿಪಿಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕೋಚಿಂಗ್ ಅನಿವಾರ್ಯವಲ್ಲ. ಕೋಚಿಂಗ್ ಇಲ್ಲದೇಯೂ ಹಲವು ಮಂದಿ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆದರೆ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಲು ಕೋಚಿಂಗ್ ಸಹಕಾರಿ. ಪರೀಕ್ಷೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಕೋಚಿಂಗ್ ಒದಗಿಸುತ್ತದೆ.
ಮುಂದೆ ಐಪಿಸಿಸಿ ಹಾಗೂ ಸಿಎ ಫೈನಲ್ ಎಕ್ಸಾಂನ್ನು ಮೊದಲ ಯತ್ನ ದಲ್ಲಿಯೇ ರಾರಯಂಕ್ನೊಂದಿಗೆ ಪಡೆಯುವ ಕನಸು ಇದೆ ಎಂದ ತವಿಶಿ ಈ ನಿಟ್ಟಿನಲ್ಲಿ ಕೋಚಿಂಗ್ ಪಡೆಯುತ್ತಿದ್ದೇನೆ.
ಜೊತೆಗೆ ಬೆಂಗಳೂರಿನಲ್ಲಿ ಬಿ.ಕಾಂ ಮಾಡುತ್ತಿರುದಾಗಿ ತಿಳಿಸಿದರು.
ಇದೇ ಸಂದರ್ಭ ಸಾಧನೆಯ ಕನಸು ಕಾಣುವ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ತವಿಶಿ, ಅತೀ ಬುದ್ದಿವಂತರು ಮಾತ್ರ ಈ ಪರೀಕ್ಷೆಯನ್ನು ಪಾಸು ಮಾಡಲು ಸಾಧ್ಯ ಎಂದೇನೂ ಇಲ್ಲ. ಸತತ ಪರಿಶ್ರಮದಿಂದ ಎಲ್ಲರೂ ಎಲ್ಲವನ್ನು ಸಾಧಿಸಲು ಸಾಧ್ಯ ಎಂದರು.
2014 ರ ಸಾಲಿನಲ್ಲಿ ತವಿಶಿ ಕೊಡಗು ಜಿಲ್ಲೆಗೆ ಎಸ್ಎಸ್ಎಲ್ಸಿಯಲ್ಲಿ ಪ್ರಥಮ ಸ್ಥಾನ ಹಾಗೂ 2017 ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದರು. ಈಕೆ ಕೊಡಗು ಜಿಲ್ಲೆಯ ನಿವಾಸಿ ವಕೀಲ ಪಾಸುರ ಪ್ರೀತಂ ಹಾಗೂ ಹೇಮಾ ಪ್ರೀತಂ ದಂಪತಿ ಪುತ್ರಿ.
ತವಿಶಿ ತಾಯಿ ಹೇಮಾ ಪ್ರೀತಂ ಮಾತನಾಡಿ, ಮಗಳ ಸಾಧನೆ ನಮಗೆ ಹೆಮ್ಮೆ ತಂದಿದೆ. ಆಕೆಯನ್ನು ಪ್ರತಿಹಂತ ದಲ್ಲೂ ನಾವು ಬೆಂಬಲಿಸುತ್ತಿದ್ದೇವೆ. ಅಳ್ವಾಸ್ ಸಂಸ್ಥೆ ಆಕೆಯ ಸಾಧನೆಗೆ ಪ್ರೋತ್ಸಾಹ ನೀಡಿದೆ ಎಂದರು.
ಮಡಿಕೇರಿ: ಸತತ ಪರಿಶ್ರಮಕ್ಕೆ ಬೆಲೆ ಸಿಕ್ಕಿದೆ. ಕನಸೊಂದನ್ನು ಸಾಧಿಸಿದ ಖುಷಿ ಇದೆ. ಮುಂದಿನ ಎರಡು ಹಂತಗಳನ್ನು ಮೊದಲ ಯತ್ನದಲ್ಲಿಯೇ ಸಾಧಿಸುವ ಛಲವಿದೆ.
- ಇದು ಇನ್ಸಿಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ರಾಷ್ಟ್ರಮಟ್ಟದಲ್ಲಿ ನಡೆಸಿದ ಸಿಎ-ಸಿಪಿಟಿ( ಕಾಮನ್ ಪ್ರೊಫಿಸಿಯೆನ್ಸಿ ಟೆಸ್ಟ್) ಪರೀಕ್ಷೆಯಲ್ಲಿ ದೇಶಕ್ಕೆ ದ್ವಿತೀಯ ಹಾಗೂ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಕೊಡಗು ಜಿಲ್ಲೆಯ ತವಿಶಿ ದೇಚಮ್ಮ ಅವರ ಮನದಾಳದ ಮಾತು.
ತಮ್ಮ ಫಲಿತಾಂಶ ಹಾಗೂ ಅದರ ಹಿಂದಿನ ಪ್ರಯತ್ನದ ಕುರಿತು ವಿಜಯ ಕರ್ನಾಟಕದೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸಿಎ-ಸಿಪಿಟಿ ಪರೀಕ್ಷೆಯನ್ನು ಗಮನ ದಲ್ಲಿಟ್ಟುಕೊಂಡು ದಿನನಿತ್ಯ ಓದುತ್ತಿದೆ. ಪಿಯುಸಿ ಮುಖ್ಯ ಪರೀಕ್ಷೆ ನಂತರ ದಿನನಿತ್ಯ ಮೂರರಿಂದ ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಅಭ್ಯಾಸ ನಡೆಸಿದ್ದೇನೆ. ರಜೆ ದಿನ ಎಂದೇನೂ ಇರಲಿಲ್ಲ. ವಾರದ ಎಲ್ಲ ದಿನಗಳಲ್ಲೂ ಅಭ್ಯಾಸದಲ್ಲಿ ತೊಡಗಿಕೊಂಡಿದ್ದೆ ಎಂದು ತಿಳಿಸಿದರು.
ಕನಸಿಗೆ ಇಂಬು ನೀಡಿದ ಅಳ್ವಾಸ್ ಸಂಸ್ಥೆ: ಸಿಎ-ಸಿಪಿಟಿ ಪರೀಕ್ಷೆಯಲ್ಲಿ ರಾರಯಂಕ್ ಪಡೆಯಲು ಮೂಡಬಿದಿರೆಯ ಆಳ್ವಾಸ್ ಶಿಕ್ಷ ಣ ಪ್ರತಿಷ್ಠಾನವೇ ಕಾರಣ. ಆ ಸಂಸ್ಥೆಯ ತರಬೇತಿಯಿಂದಲೇ ರಾರಯಂಕ್ ಗಳಿಸಿದ್ದೇನೆ. ಪರೀಕ್ಷೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಸಂಸ್ಥೆ ಮ್ವಾಕ್ ಟೆಸ್ಟ್, ಆನ್ ಲೈನ್ ಟೆಸ್ಟ್ ಗಳನ್ನು ನಡೆಸಿತು. ಜೊತೆಗೆ ಉಡುಪಿ, ಬೆಂಗಳೂರು
ಸೇರಿದಂತೆ ವಿವಿಧೆಡೆಯಿಂದ ಪರಿಣಿತರನ್ನು ಕರೆಸಿ ಕೋಚಿಂಗ್ ನೀಡಿದ್ದು, ಮಾತ್ರವಲ್ಲದೇ ಶಿಕ್ಷ ಣ ಸಂಸ್ಥೆಯ ವಾತಾ ವರಣ ಕೂಡ ಕಲಿಕೆಗೆ ಪೂರಕವಾಯಿತು. ಆಳ್ವಾಸ್ ಶಿಕ್ಷ ಣ ಸಂಸ್ಥೆಯ ಪ್ರೋತ್ಸಾಹ ನನ್ನನ್ನು ಈ ಮಟ್ಟಿಗೆ ಬೆಳೆಸಿದೆ ಎಂದರು.
ಗೊಂದಲ ಬಗೆಹರಿಸಿಕೊಳ್ಳಿ: ಸಿಎ- ಸಿಪಿಟಿ ಪರೀಕ್ಷೆಯಲ್ಲಿ ಗೊಂದಲಗಳಿದ್ದಾಗ ಸ್ನೇಹಿತರೊಂದಿಗೆ ಚರ್ಚಿಸಿ ಗೊಂದಲವನ್ನು ಬಗೆಹರಿಸಿಕೊಳ್ಳುತ್ತಿದೆ. ಸಾಕಷ್ಟು ವಿಷಯ ಗಳು ಕೂಡ ನಮಗೆ ತಿಳಿದಿರುದಿಲ್ಲ. ಇಂತಹ ಸಂದರ್ಭ ಮಾಹಿತಿಯನ್ನು ವಿನಿ ಮಯ ಮಾಡಿಕೊಳ್ಳುದರಿಂದ ಗೊಂದಲ ಬಗೆಹರಿಯುತ್ತದೆ. ಇದು ಕೂಡ ನನಗೆ ಪೂರಕವಾಯಿತು ಎಂದು ತಿಳಿಸಿದರು.
ಕೋಚಿಂಗ್ ಅನಿವಾರ್ಯವಲ್ಲ: ಸಿಎ- ಸಿಪಿಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕೋಚಿಂಗ್ ಅನಿವಾರ್ಯವಲ್ಲ. ಕೋಚಿಂಗ್ ಇಲ್ಲದೇಯೂ ಹಲವು ಮಂದಿ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆದರೆ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಲು ಕೋಚಿಂಗ್ ಸಹಕಾರಿ. ಪರೀಕ್ಷೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಕೋಚಿಂಗ್ ಒದಗಿಸುತ್ತದೆ.
ಮುಂದೆ ಐಪಿಸಿಸಿ ಹಾಗೂ ಸಿಎ ಫೈನಲ್ ಎಕ್ಸಾಂನ್ನು ಮೊದಲ ಯತ್ನ ದಲ್ಲಿಯೇ ರಾರಯಂಕ್ನೊಂದಿಗೆ ಪಡೆಯುವ ಕನಸು ಇದೆ ಎಂದ ತವಿಶಿ ಈ ನಿಟ್ಟಿನಲ್ಲಿ ಕೋಚಿಂಗ್ ಪಡೆಯುತ್ತಿದ್ದೇನೆ.
ಜೊತೆಗೆ ಬೆಂಗಳೂರಿನಲ್ಲಿ ಬಿ.ಕಾಂ ಮಾಡುತ್ತಿರುದಾಗಿ ತಿಳಿಸಿದರು.
ಇದೇ ಸಂದರ್ಭ ಸಾಧನೆಯ ಕನಸು ಕಾಣುವ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ತವಿಶಿ, ಅತೀ ಬುದ್ದಿವಂತರು ಮಾತ್ರ ಈ ಪರೀಕ್ಷೆಯನ್ನು ಪಾಸು ಮಾಡಲು ಸಾಧ್ಯ ಎಂದೇನೂ ಇಲ್ಲ. ಸತತ ಪರಿಶ್ರಮದಿಂದ ಎಲ್ಲರೂ ಎಲ್ಲವನ್ನು ಸಾಧಿಸಲು ಸಾಧ್ಯ ಎಂದರು.
2014 ರ ಸಾಲಿನಲ್ಲಿ ತವಿಶಿ ಕೊಡಗು ಜಿಲ್ಲೆಗೆ ಎಸ್ಎಸ್ಎಲ್ಸಿಯಲ್ಲಿ ಪ್ರಥಮ ಸ್ಥಾನ ಹಾಗೂ 2017 ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದರು. ಈಕೆ ಕೊಡಗು ಜಿಲ್ಲೆಯ ನಿವಾಸಿ ವಕೀಲ ಪಾಸುರ ಪ್ರೀತಂ ಹಾಗೂ ಹೇಮಾ ಪ್ರೀತಂ ದಂಪತಿ ಪುತ್ರಿ.
ತವಿಶಿ ತಾಯಿ ಹೇಮಾ ಪ್ರೀತಂ ಮಾತನಾಡಿ, ಮಗಳ ಸಾಧನೆ ನಮಗೆ ಹೆಮ್ಮೆ ತಂದಿದೆ. ಆಕೆಯನ್ನು ಪ್ರತಿಹಂತ ದಲ್ಲೂ ನಾವು ಬೆಂಬಲಿಸುತ್ತಿದ್ದೇವೆ. ಅಳ್ವಾಸ್ ಸಂಸ್ಥೆ ಆಕೆಯ ಸಾಧನೆಗೆ ಪ್ರೋತ್ಸಾಹ ನೀಡಿದೆ ಎಂದರು.