ಆ್ಯಪ್ನಗರ

ದಿಢೀರ್‌ ಅಸ್ವಸ್ಥ: ಪೊಲೀಸ್‌ ಪೇದೆ ಸಾವು

ರಜೆ ಮೇಲೆ ಬಂದಿದ್ದ ಪೊಲೀಸ್‌ ಪೇದೆಯೊಬ್ಬರು ಹುಣಸೂರು ನಗರದಲ್ಲಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.

Vijaya Karnataka 3 Jul 2019, 5:00 am
ಹುಣಸೂರು : ರಜೆ ಮೇಲೆ ಬಂದಿದ್ದ ಪೊಲೀಸ್‌ ಪೇದೆಯೊಬ್ಬರು ಹುಣಸೂರು ನಗರದಲ್ಲಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.
Vijaya Karnataka Web sudden illness policeman death
ದಿಢೀರ್‌ ಅಸ್ವಸ್ಥ: ಪೊಲೀಸ್‌ ಪೇದೆ ಸಾವು


ನಂಜನಗೂಡು ಟ್ರಾಫಿಕ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ ಮಹೇಶ್‌(26) ಮೃತರು. ಅವಿವಾಹಿತರಾಗಿರುವ ಇವರು ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಮೋದೂರು ಪಿ.ಕೊಪ್ಪಲಿನ ಕೃಷ್ಣೇಗೌಡ-ಕೆಂಪಮ್ಮ ದಂಪತಿ ಪುತ್ರರಾಗಿದ್ದು, ಇಬ್ಬರು ಸಹೋದರರಿದ್ದಾರೆ.

ಎರಡು ದಿನಗಳ ಹಿಂದೆ ರಜೆ ಮೇಲೆ ಸ್ವಗ್ರಾಮಕ್ಕೆ ಬಂದಿದ್ದ ಮಹೇಶ್‌ ಸೋಮವಾರ ರಾತ್ರಿ ಹುಣಸೂರಿನ ಹೋಟೆಲೊಂದರಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿ, ಹೊರ ಬಂದು ಬೀಡಾ ಅಂಗಡಿಯಲ್ಲಿ ಬೀಡಾ ಸೇವಿಸಿದ್ದಾರೆ. ಈ ವೇಳೆ ಅಲ್ಲಿಯೇ ಅಸ್ವಸ್ಥರಾಗಿ ಕುಸಿದು ಬಿದ್ದ ಮಹೇಶರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಮಂಗಳವಾರ ಮೈಸೂರಿನ ಕೆ.ಆರ್‌.ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಶವವನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಮೈಸೂರಿನಲ್ಲಿ ಎಸ್‌ಪಿ ರಿಷ್ಯಂತ್‌ ಅಂತಿಮ ದರ್ಶನ ಪಡೆದರೆ, ನಂಜನಗೂಡು ಠಾಣೆ ಎಸ್‌.ಐ.ಶಿವಮ್ಮ ಹಾಗೂ ಸಹೋದ್ಯೋಗಿಗಳು ಮಹೇಶ್‌ ಸ್ವಗ್ರಾಮ ಮೋದೂರಿನಲ್ಲಿ ಅಂತಿಮ ದರ್ಶನ ಪಡೆದರು. ಪೊಲೀಸ್‌ ಇಲಾಖೆ ವತಿಯಿಂದ ಗ್ರಾಮಾಂತರ ಠಾಣೆ ಎಸ್‌.ಐ.ಶಿವಪ್ರಕಾಶ್‌ ನೇತೃತ್ವದಲ್ಲಿ ಸಿಬ್ಬಂದಿ ಕುಶಲುತೋಪು ಹಾರಿಸಿ ಗೌರವ ವಂದನೆ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ