ಆ್ಯಪ್ನಗರ

ತನ್ವೀರ್ ಸೇಠ್ ಗುಣಮುಖರಾಗಲೆಂದು ಶಬರಿಮಲೆಗೆ ಕಟ್ಟಿಕೊಂಡಿದ್ದ ಹರಕೆ ತೀರಿಸಿದ ಅಭಿಮಾನಿ

ಮೈಸೂರು ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಶೀಘ್ರದಲ್ಲಿ ಗುಣಮುಖರಾಗಲೆಂದು ಹರಕೆ ಹೊತ್ತಿದ್ದ ಅಭಿಮಾನಿ ಓರ್ವ ಅದನ್ನು ವಿಶೇಷ ರೀತಿಯಲ್ಲಿ ಪೂರೈಸಿದ್ದಾನೆ. ಅಭಿಮಾನಿ ಕುರಿಮಂಡಿ ಚಂದ್ರು ಎಂಬಾತ ಶಬರಿಮಲೆಗೆ ತಾನು ಕಟ್ಟಿಕೊಂಡಿದ್ದ ಹರಕೆ ತೀರಿಸಿದ್ದಾನೆ.

Vijaya Karnataka Web 18 Jan 2020, 3:07 pm
ಮೈಸೂರು: ಮೈಸೂರು ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಶೀಘ್ರದಲ್ಲಿ ಗುಣಮುಖರಾಗಲೆಂದು ಹರಕೆ ಹೊತ್ತಿದ್ದ ಅಭಿಮಾನಿ ಓರ್ವ ಅದನ್ನು ವಿಶೇಷ ರೀತಿಯಲ್ಲಿ ಪೂರೈಸಿದ್ದಾನೆ.
Vijaya Karnataka Web tanveer sait


ಶಾಸಕ ತನ್ವೀರ್ ಸೇಠ್ ಅವರ ಅಭಿಮಾನಿ ಕುರಿಮಂಡಿ ಚಂದ್ರು ಎಂಬುವವರು ಶಬರಿಮಲೆಗೆ ತಾವು ಕಟ್ಟಿಕೊಂಡಿದ್ದ ಹರಕೆ ತೀರಿಸಿದ್ದಾರೆ. ಸಂಬಂಧಿಕರ ಸಮಾರಂಭದಲ್ಲಿ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ತನ್ವೀರ್ ಚಿಕಿತ್ಸೆ ಪಡೆದು ವಿದೇಶಕ್ಕೆ ತೆರಳಿ ರೆಸ್ಟ್‌ ಮಾಡಿ ಮರಳಿದ್ದಾರೆ.

ತನ್ವೀರ್ ನಮ್ಮ ಕ್ಷೇತ್ರದ ಬಡವರ ಬಂಧು, ಅವರಿಗೆ ಧ್ವನಿ ಸಮಸ್ಯೆ ಇದೆ. ಬೇಗ ಗುಣಮುಖರಾಗಲಿ ಎಂದು ಅಭಿಮಾನಿ ಕುರಿ ಮಂಡಿ ಚಂದ್ರು ಹರಕೆ ಕಟ್ಟಿಕೊಂಡಿದ್ದರು. ಜತೆಗೆ ಚಂದ್ರು ಅವರು ತನ್ವೀರ್ಭಾವಚಿತ್ರ ಹಿಡಿದು ವಾಟ್ಸಾಪ್ ನಲ್ಲಿ ಈ ಸಂದೇಶವನ್ನು ಹರಿಯಬಟ್ಟಿದ್ದಾರೆ.

ತನ್ವೀರ್‌ ಆರೋಗ್ಯ ಬಹುತೇಕ ಚೇತರಿಕೆ ಕಂಡುಬಂದಿದ್ದು, ಕೆಲವು ದಿನಗಳ ಹಿಂದಷ್ಟೇ ತನ್ನ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಜೈಲಿಗೆ ಭೇಟಿ ಕೊಟ್ಟು ಗುರುತಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ