ಆ್ಯಪ್ನಗರ

31ರವರೆಗಿನ ಸ್ವಚ್ಛ ಸರ್ವೇಕ್ಷಣೆಗೆ ಮೈಸೂರು ಸಿದ್ಧ

ಸ್ವಚ್ಛ ನಗರಿ ಮೈಸೂರು ಮತ್ತೊಮ್ಮೆ ಸ್ವಚ್ಛ ಸರ್ವೇಕ್ಷಣೆಗೆ ಸಿದ್ಧವಾಗಿದೆ.

Vijaya Karnataka 8 Jan 2019, 5:00 am
ಮೈಸೂರು : ಸ್ವಚ್ಛ ನಗರಿ ಮೈಸೂರು ಮತ್ತೊಮ್ಮೆ ಸ್ವಚ್ಛ ಸರ್ವೇಕ್ಷಣೆಗೆ ಸಿದ್ಧವಾಗಿದೆ.
Vijaya Karnataka Web svaccha sarveksanege mysuru siddha
31ರವರೆಗಿನ ಸ್ವಚ್ಛ ಸರ್ವೇಕ್ಷಣೆಗೆ ಮೈಸೂರು ಸಿದ್ಧ


ಪ್ರಸಕ್ತ ಸಾಲಿನ ಸರ್ವೇಕ್ಷಣೆ ಜ.4 ರಿಂದ 31 ರವರೆಗೆ ನಡೆಯಲಿದೆ. ಈ ನಡುವೆ ಸರ್ವೇಕ್ಷ ಣಾ ತಂಡ ಮೈಸೂರಿಗೆ ಭೇಟಿ ನೀಡಲಿದೆ. 20015 ಮತ್ತು 2016ರಲ್ಲಿ ಸ್ವಚ್ಛ ಸರ್ವೇಕ್ಷ ಣೆಯಲ್ಲಿ ದೇಶದಲ್ಲೇ ನಂ.1 ಸ್ಥಾನದಲ್ಲಿದ್ದ ಮೈಸೂರು ನಗರ 2017ರಲ್ಲಿ ಐದನೇ ಸ್ಥಾನ ಮತ್ತು 2018ರಲ್ಲಿ 3ರಿಂದ 10 ಲಕ್ಷದೊಳಗಿನ ಜನಸಂಖ್ಯೆ ಹೊಂದಿದ ನಗರಗಳ ಪೈಕಿ ಮೈಸೂರು ಪ್ರಥಮ ಸ್ಥಾನಗಳಿಸಿತ್ತು. ಅದರಂತೆ 2019ರ ಸರ್ವೇಕ್ಷ ಣೆ ಆರಂಭÜವಾಗಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸುವಂತೆ ಮೇಯರ್‌ ಪುಷ್ಪಲತಾ ಜಗನ್ನಾಥ್‌ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

20ಕ್ಕೆ ಮೈಸೂರಿಗೆ: ಆರೋಗ್ಯಾಧಿಕಾರಿ ಡಾ. ಎಚ್‌.ನಾಗರಾಜು ಮಾತನಾಡಿ, ''ಜ.20ರಂದು ಸರ್ವೇಕ್ಷ ಣೆ ತಂಡದ ಅಧಿಕಾರಿಗಳು ಮೈಸೂರಿಗೆ ಭೇಟಿ ನೀಡುವ ಸಾಧ್ಯತೆ ಇದೆ. 1,250 ಅಂಕಗಳಿಗೆ ಸಾರ್ವಜನಿಕರ ಅಭಿಪ್ರಾಯ ನೀಡುವ ಅಗತ್ಯವಿದೆ. ಸಾರ್ವಜನಿಕರು ಟೋಲ್‌ ಫ್ರೀ ಸಂಖ್ಯೆ 1969ಕ್ಕೆ ಕರೆ ಮಾಡಿ ಏಳು ಪ್ರಶ್ನೆಗಳಿಗೆ ಉತ್ತರಿಸಬೇಕು. ಕರೆ ಮಾಡಿದಾಗ ತಾವು ಸ್ವಚ್ಛತಾ ಸರ್ವೇಕ್ಷ ಣೆಯಲ್ಲಿ ಪಾಲ್ಗೊಂಡಿದ್ದೀರಾ? ಎಂಬ ಪ್ರಶ್ನೆಗೆ ಹೌದು ಎಂದು ಉತ್ತರಿಸಿದ ಕೂಡಲೇ ಫೋನ್‌ ಕಟ್‌ ಆಗುತ್ತದೆ. ಬಳಿಕ ಸರ್ವೇಕ್ಷ ಣೆಯಿಂದಲೇ ಕರೆ ಬರುತ್ತದೆ. ಆಗ ಸ್ಥಳೀಯ ಎಸ್‌ಟಿಡಿ ಕೋಡ್‌ ನಮೂದಿಸಿದರೆ ಅವರು ನಗರದ ಸರ್ವೇಕ್ಷ ಣೆಗೆ ಸಂಬಂಧಿಸಿದಂತೆ ಏಳು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಸೂಕ್ತ ಉತ್ತರ ನೀಡಬೇಕು,'' ಎಂದು ಅವರು ತಿಳಿಸಿದರು.

''ಇದಲ್ಲದೆ 1250 ಅಂಕಗಳಿಗೆ ನಗರದ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ. ಈ ಖುದ್ದು ಪರಿಶೀಲನೆಯ ಸಂದರ್ಭದಲ್ಲಿ ಛಾಯಾಚಿತ್ರದೊಡನೆ ಎಲ್ಲಾ ಮಾಹಿತಿಯನ್ನು ಕಲೆಹಾಕುತ್ತಾರೆ. ಉಳಿದ 1250 ಅಂಕಗಳಿಗೆ ಅಗತ್ಯ ದಾಖಲೆ ಸಲ್ಲಿಸಬೇಕಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ನಗರ ಪಾಲಿಕೆಯು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ,'' ಎಂದು ವಿವರಿಸಿದರು.

''ಸರ್ವೇಕ್ಷ ಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕರಪತ್ರ ಹಂಚಲಾಗುತ್ತಿದೆ. 'ಧ್ವನಿವಧÜರ್‍ಕದ ಮೂಲಕ ಪ್ರಚಾರ ಮಾಡಲಾಗುತ್ತಿದೆ. ನಂತರ ಕಸವನ್ನು ಮೂಲೆಯಲ್ಲಿ ಬೇರ್ಪಡಿಸಲಾಗುತ್ತಿದೆ. ಪೌರ ಕಾರ್ಮಿಕರು ಬೆಳಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಈ ಸರ್ವೇಕ್ಷ ಣೆ ಕಾರ್ಯಕ್ಕಾಗಿ ಸಂಜೆ 5 ರವರೆಗೆ ಅವರ ವಿಸ್ತರಿಸಲಾಗುತ್ತಿದೆ ಎಂದರು.

52 ಸಾವಿರ ಮಂದಿಯಿಂದ ಆ್ಯಪ್‌ ಡೌನ್‌ಲೋಡ್‌:

ಪ್ರಸ್ತುತ ಮೊಬೈಲ್‌ ಸುಮಾರು 52 ಸಾವಿರ ಮಂದಿ ಮೊಬೈಲ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದು, ಆ ಮೂಲಕವೂ ಸರ್ವೇಕ್ಷ ಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಫೀಡ್‌ಬ್ಯಾಕ್‌ ನೀಡಬಹುದು ಎಂದರು. ಮೇಯರ್‌ ಅಧ್ಯಕ್ಷತೆಯಲ್ಲಿ ಈಗಾಗಲೇ ನಗರದ ಎಲ್ಲಾ ವಾರ್ಡ್‌ನ ನಗರ ಪಾಲಿಕೆ ಸದಸ್ಯರ ಸಭೆ ನಡೆಸಿದ್ದು, ಅವರಿಗೆ ಸ್ವಚ್ಛ ಸರ್ವೇಕ್ಷ ಣೆ ಕುರಿತು ಅರಿವು ಮೂಡಿಸಲಾಗಿದೆ.ಜತೆಗೆ ಅವರೂ ಸಾರ್ವಜನಿಕರಿಂದ ಅಗತ್ಯ ಫೀಡ್‌ಬ್ಯಾಕ್‌ ಕೊಡಿಸುವುದಾಗಿ ಒಪ್ಪಿದ್ದಾರೆ ಎಂದು ಹೇಳಿದರು.

ಉಪ ಮೇಯರ್‌ ಶಫಿ ಅಹಮದ್‌, ನಗರ ಪಾಲಿಕೆ ಆಯುಕ್ತ ಕೆ.ಎಚ್‌. ಜಗದೀಶ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ