ಆ್ಯಪ್ನಗರ

ಟಿಎಪಿಸಿಎಂಎಸ್‌ಗೆ ತಹಸೀಲ್ದಾರ್‌ ದಾಳಿ: ಮಳಿಗೆಗೆ ಬೀಗ

ಪಟ್ಟಣದ ಟಿಎಪಿಸಿಎಂಎಸ್‌ ಸಗಟು ಮಳಿಗೆಗೆ ಗುರುವಾರ ಸಂಜೆ ತಹಸೀಲ್ದಾರ್‌ ನಾಗಪ್ರಶಾಂತ್‌ ದಾಳಿ ನಡೆಸಿದ ಸಂದರ್ಭದಲ್ಲಿ ಲೆಕ್ಕ ಹಾಗೂ ಸಗಟಿನಲ್ಲಿ ವ್ಯತ್ಯಾಸ ಕಂಡುಬಂದ ಕಾರಣ ಕಡತಗಳನ್ನು ವಶಕ್ಕೆ ಪಡೆದು, ಮಳಿಗೆಗೆ ಬೀಗ ಹಾಕಿ ಎಚ್ಚರಿಕೆ ನೀಡಿದ್ದಾರೆ.

Vijaya Karnataka 28 Dec 2018, 5:00 am
ಕೃಷ್ಣರಾಜನಗರ : ಪಟ್ಟಣದ ಟಿಎಪಿಸಿಎಂಎಸ್‌ ಸಗಟು ಮಳಿಗೆಗೆ ಗುರುವಾರ ಸಂಜೆ ತಹಸೀಲ್ದಾರ್‌ ನಾಗಪ್ರಶಾಂತ್‌ ದಾಳಿ ನಡೆಸಿದ ಸಂದರ್ಭದಲ್ಲಿ ಲೆಕ್ಕ ಹಾಗೂ ಸಗಟಿನಲ್ಲಿ ವ್ಯತ್ಯಾಸ ಕಂಡುಬಂದ ಕಾರಣ ಕಡತಗಳನ್ನು ವಶಕ್ಕೆ ಪಡೆದು, ಮಳಿಗೆಗೆ ಬೀಗ ಹಾಕಿ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web tahsildar attack on tapcms
ಟಿಎಪಿಸಿಎಂಎಸ್‌ಗೆ ತಹಸೀಲ್ದಾರ್‌ ದಾಳಿ: ಮಳಿಗೆಗೆ ಬೀಗ


ಪಟ್ಟಣದ ಹಾಸನ ರಸ್ತೆಯಲ್ಲಿರುವ ಟಿಎಪಿಸಿಎಂಎಸ್‌ ಸಗಟು ಮಳಿಗೆಗೆ ದಾಳಿ ನಡೆಸಿದ ತಹಸೀಲ್ದಾರ್‌, ಮಳಿಗೆಯಲ್ಲಿ ತೊಗರಿ ಬೇಳೆ ಮತ್ತು ಅಕ್ಕಿ ಮೂಟೆಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ. ಈ ಸಂದರ್ಭ ಟಿಎಪಿಸಿಎಂಸ್‌ನ ನೌಕರರು ಸಮರ್ಪಕ ಲೆಕ್ಕ ನೀಡುವಲ್ಲಿ ವಿಫಲರಾದ ಕಾರಣ ನೌಕರರು ಸೇರಿದಂತೆ ಆಹಾರ ಶಿರಸ್ತೇದಾರ್‌ ಹನುಮಂತೇಗೌಡರ ವಿರುದ್ಧ ಹರಿಹಾಯ್ದರು.

ಪಡಿತರದಾರರಿಗೆ ಚಿಲ್ಲರೆ ಮಳಿಗೆಯಲ್ಲಿ ಸಮರ್ಪಕವಾಗಿ ಪಡಿತರ ವಿತರಿಸದ ಬಗ್ಗೆ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡ ತಹಸೀಲ್ದಾರ್‌, ಇಲಾಖೆ ಕಾನೂನಿನ ಪ್ರಕಾರ ಸಂಜೆ 8 ಗಂಟೆವರೆಗೆ ಪಡಿತರ ವಿತರಣೆ ಮಾಡಬೇಕೆಂಬ ನಿಯಮವಿದೆ. ಇಲ್ಲಿ ನೋಡಿದರೆ 4 ಗಂಟೆಗೆ ಬೀಗ ಹಾಕಿ ಹೋಗಿದ್ದೀರಿ ಎಂದು ಕಿಡಿಕಾರಿದರು.

ಬಳಿಕ ಚಿಲ್ಲರೆ ಮಾರಾಟ ಮಳಿಗೆ ಬೀಗ ತೆಗೆಸಲು ಸುಮಾರು ಎರಡು ಗಂಟೆಗಳ ಕಾಲ ಕಾದರೂ ಸಂಬಂಧಪಟ್ಟ ನೌಕರ ಇಲ್ಲ ಎಂಬ ಸಬೂಬು ಹೇಳಿದಕ್ಕೆ ಕೆಂಡಾಮಂಡಲವಾದ ಅವರು, ನಿಮ್ಮ ಉತ್ತರ ಹಾಗೂ ಲೆಕ್ಕಾಚಾರ ಯಾವುದೂ ಸರಿಯಿಲ್ಲ. ಹಾಗಾಗಿ ಕಡತವನ್ನು ವಶಕ್ಕೆ ಪಡೆದು ಸಗಟು ಮಳಿಗೆಗೆ ಬೀಗ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಟಿಎಪಿಸಿಎಂಎಸ್‌ ಚಿಲ್ಲರೆ ಮಾರಾಟ ಮಳಿಗೆಯಲ್ಲಿ ಈಗಲೂ ತಕ್ಕಡಿ ಬಟ್ಟಿನಲ್ಲಿ ಪಡಿತರ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಳಿಗೆ ಬೀಗ ತೆರೆಸುವಂತೆ ಸೂಚಿಸಿದರೂ ಬೀಗ ತೆರೆಯಲಿಲ್ಲ. ಕೂಡಲೆ ಕ್ರಮ ಕೈಗೊಂಡು ಕಂಪ್ಯೂಟರ್‌ ಯಂತ್ರ ಅಳವಡಿಸುವಂತೆ ಆಹಾರ ಶಿರಸ್ತೇದಾರ್‌ ಹನುಮಂತೇಗೌಡರಿಗೆ ಸೂಚನೆ ನೀಡಿದರು.

ತಾಲೂಕಿನಲ್ಲಿ ಯಾವುದೇ ಪಡಿತರ ಅಂಗಡಿಗಳಲ್ಲಿ ಪ್ರತಿ ತಿಂಗಳು 20ರ ನಂತರ ಪಡಿತರ ನೀಡಲು ಆರಂಭಿಸುತ್ತಾರೆ. ನಂತರ ಐದಾರು ದಿನಗಳಲ್ಲಿ ಮಾತ್ರ ಪಡಿತರ ವಿತರಿಸುತ್ತಾರೆ. ನಂತರ ಸರಿಯಾಗಿ ವಿತರಣೆ ಮಾಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಕ್ರಮ ಯಾಕೆ ತೆಗೆದುಕೊಂಡಿಲ್ಲ ಎಂದು ತಹಸೀಲ್ದಾರ್‌ ಆಹಾರ ಶಿರಸ್ತೇದಾರ್‌ರನ್ನು ಪ್ರಶ್ನಿಸಿದರು. ಈ ಲೋಪವನ್ನು ಒಪ್ಪಿಕೊಂಡ ಆಹಾರ ಶಿರಸ್ತೇದಾರ್‌ ಹನುಮಂತೇಗೌಡ ವಿರುದ್ಧ ಹರಿಹಾಯ್ದು, ಮೊದಲು ನಿಮ್ಮ ವಿರುದ್ಧವೇ ಕ್ರಮ ಕೈಗೊಳ್ಳಬೇಕು ಎಂದು ತರಾಟೆಗೆ ತೆಗೆದುಕೊಂಡರು.

ತಹಸೀಲ್ದಾರರು ಸಗಟು ಮಳಿಗೆ ಬಳಿ ಬಂದು ಗಂಟೆ ಕಳೆದರೂ ಸಮರ್ಪಕವಾದ ಲೆಕ್ಕ ನೀಡುವಲ್ಲಿ ವಿಫಲರಾದ ಟಿಎಪಿಸಿಎಂಎಸ್‌ ನೌಕರರು, ಲೆಕ್ಕ ಹಾಕಲು ಮುಂದಾದಾಗ ಆಕ್ರೋಶಗೊಂಡ ತಹಸೀಲ್ದಾರ್‌, ಮಳಿಗೆಗೆ ಬೀಗ ಹಾಕಿ ಕಡತಗಳೊಂದಿಗೆ ಸ್ಥಳದಿಂದ ತೆರಳಿದರು.

ಈ ಸಂದರ್ಭದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಬೇಳೆ ಹಾಗೂ ಅಕ್ಕಿ ಸಗಟು ಹಾಗೂ ಲೆಕ್ಕದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದಿದ್ದು , ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಕಡತಗಳನ್ನು ವಶಕ್ಕೆ ಪಡೆದಿದ್ದು , ಸಗಟು ಮಳಿಗೆಗೆ ಬೀಗ ಹಾಕಿ ಸೀಜ್‌ ಮಾಡಿರುವುದಾಗಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ