ಆ್ಯಪ್ನಗರ

ಜಿ.ಟಿ.ದೇವೇಗೌಡರು ಮಾತನಾಡುವಾಗ ಪದಬಳಕೆ ಸರಿಯಿರಲಿ: ಶಾಸಕ ಸಾ.ರಾ.ಮಹೇಶ್

ಶಾಸಕ ಜಿ.ಟಿ.ದೇವೇಗೌಡರು ನನ್ನ ಬಗ್ಗೆ ಬಹಿರಂಗವಾಗಿ ಮಾತನಾಡುವಾಗ ಪದ ಬಳಕೆಯ ಬಗ್ಗೆ ನಿಗಾವಹಿಸಿ ಎಂದು ಶಾಸಕ ಸಾ.ರಾ.ಮಹೇಶ್‌ ಹೇಳಿದ್ದಾರೆ. ನನ್ನನ್ನು ಕೂಡ ನನ್ನ ಕ್ಷೇತ್ರದ ಜನ ಆಯ್ಕೆ ಮಾಡಿ ಕಳುಹಿಸಿದ್ಡಿದಾರೆ. ಅವರ ಮಾತಿನಿಂದ ನನ್ನ ಕ್ಷೇತ್ರದ ಜನತೆಗೆ ಬೇಸರವಾಗುತ್ತದೆ ಎಂದು ತಿಳಿಸಿದ್ದಾರೆ.

Vijaya Karnataka Web 25 May 2020, 8:46 pm
ಮೈಸೂರು: ಶಾಸಕ ಜಿ.ಟಿ.ದೇವೇಗೌಡರು ನನ್ನ ಬಗ್ಗೆ ಬಹಿರಂಗವಾಗಿ ಮಾತನಾಡುವಾಗ ಪದ ಬಳಕೆಯ ಬಗ್ಗೆ ಎಚ್ಚರವಹಿಸಬೇಕು ಎಂದು ಶಾಸಕ ಸಾ.ರಾ.ಮಹೇಶ್‌ ತಿಳಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಕೂಡ ನನ್ನ ಕ್ಷೇತ್ರದ ಜನ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಆದರೆ ಅವರು ಬಹಿರಂಗವಾಗಿ ಪದಬಳಕೆ ಮಾಡುವಾಗ ಸ್ವಲ್ಪ ಗಮನದಲ್ಲಿ ಇರಲಿ ಎಂದು ಹೇಳಿದರು.
Vijaya Karnataka Web ಜಿಟಿಡಿ ಮಾತಾಡುವಾಗ ಪದಬಳಕೆ ಮೇಲೆ ಎಚ್ಚರವಿರಲಿ: ಸಾ.ರಾ.ಮಹೇಶ್‌
ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್‌


ಜಿ.ಟಿ.ದೇವೇಗೌಡರು ನನ್ನ ಬಗ್ಗೆ ಬಹಿರಂಗ ಹೇಳಿಕೆ ನೀಡುವಾಗ ಸ್ವಲ್ಪ ಎಚ್ಚರವಿರಲಿ. ಯಾಕೆಂದರೆ, ನನ್ನ ಕ್ಷೇತ್ರದ ಜನರಿಗೆ ಬೇಸರವಾಗುತ್ತದೆ. ನನ್ನನ್ನು ಕರೆದು ಏನು ಬೇಕಾದರು ಮಾತಾಡಲಿ. ಅವರಿಗೆ ನನ್ನ ಬಗ್ಗೆ ಮಾತಾನಾಡುವ ಹಕ್ಕಿದೆ. ಬಹಿರಂಗವಾಗಿ ಮಾತನಾಡುವಾಗ ಪದಬಳಕೆ ಸರಿಯಾಗಿರಲಿ ಅಷ್ಟೇ ಎಂದು ಹೇಳಿದರು.

ಸಚಿವ ಎಸ್‌.ಟಿ.ಸೋಮಶೇಖರ್‌, ಮೈಮುಲ್‌ ತನಿಖೆ ವಿಚಾರವಾಗಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಹೇಳಿದ ಹಾಗೆ ತನಿಖೆ ಮಾಡಿ ಅಂತ ಹೇಳಿಲ್ಲ. ಆದರೆ ನೀವು ತನಿಖೆ ಮಾಡಿಸುತ್ತಿರುವ ರೀತಿ ಸರಿಯಲ್ಲ. ಪಾರದರ್ಶಕ ತನಿಖೆ ಆಗಿಲ್ಲ. ಅಭ್ಯರ್ಥಿಗಳಿಗೆ ಒಎಂಆರ್ ಶೀಟ್ ಕೊಟ್ಟಿಲ್ಲ. ಪರೀಕ್ಷೆ ಬರೆಯಲು ಪ್ರಶ್ನೆ ಪ್ರತ್ರಿಕೆ ಕೊಟ್ಟಿಲ್ಲ. ಪರೀಕ್ಷೆ ಮುಗಿದರು ಕೀ ಉತ್ತರ ಈವರೆಗೂ ಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಮೈಮುಲ್‌ ತನಿಖೆ ಸಾ.ರಾ.ಮಹೇಶ್‌ರನ್ನ ಕೇಳಿ ಮಾಡಿಸುವುದಲ್ಲ: ಎಸ್‌.ಟಿ.ಸೋಮಶೇಖರ್

ಸಚಿವ ಸೋಮಶೇಖರ್ಗೆ ಹೋರಾಟ ಯಾವುದು? ಎಚ್ಚರಿಕೆ ಯಾವುದು? ಬೆದರಿಸುವ ತಂತ್ರ ಯಾವುದು? ಎಂಬ ಬಗ್ಗೆ ಗೊತ್ತಿದೆ ಅಂದುಕೊಳ್ಳುತ್ತೇನೆ. ಕಾನೂನು ಸಾ.ರಾ.ಮಹೇಶ್‌ದಲ್ಲ. ಉಸ್ತುವಾರಿ ಸಚಿವ ಸೋಮಶೇಖರ್ ಅವರದ್ದೂ ಅಲ್ಲ, ಪಾರದರ್ಶಕ ಪ್ರಕ್ರಿಯೆ ಆಗಿಲ್ಲ. ಏಜೆನ್ಸಿಗೆ ಟೆಂಡರ್ ಕೊಡುವಾಗ ಅವರಿಗೆ ವಹಿಸುವಂತ ಸಂದರ್ಭ ಇರಲಿಲ್ಲ. ನಮ್ಮ ಸರಕಾರ ಇದೆ, ನಾವು ಮಾಡಿದ್ದೇ ಸರಿ ಎಂಬಂತೆ ಮಾತನಾಡುವುದು ಸರಿಯಲ್ಲ ಎಂದರು.

ಸಾ.ರಾ.ಮಹೇಶ್‌ ವಿದ್ವತ್‌ ಅಗಾಧವಾಗಿದೆ: ಜಿ.ಟಿ.ದೇವೇಗೌಡ ವ್ಯಂಗ್ಯ

ಇನ್ನು ಜಿ.ಟಿ.ದೇವೇಗೌಡ ಅವರು ಮೈಮುಲ್ ತಂಟೆಗೆ ಹೋಗಬೇಡ ಎಂದು ಬಹಿರಂಗವಾಗಿ ಹೇಳಲಿ. ನಾನು ನಮ್ಮ ಹಿರಿಯ ನಾಯಕರ ಮಾತನ್ನು ಮೀರುವುದಿಲ್ಲ. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದು ಮುಂದಿನ ನಿರ್ಧಾರ ಮಾಡುತ್ತೇನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ