ಮೈಸೂರು : ಇತ್ತೀಚೆಗೆ ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ನಡೆದ ಗಲಭೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳ ನಿಷೇಧದ ವಿಚಾರವಾಗಿ ಶಾಸಕ ತನ್ವೀರ್ ಸೇಠ್ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಗಲಭೆ ಆಗಿರೋದು ನಿಜ. ಈ ನಡುವೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿರುವುದು ಸರ್ಕಾರದ ಜವಾಬ್ದಾರಿ. ಅದನ್ನ ಬಿಟ್ಟು ಎಲ್ಲದರಲ್ಲೂ ರಾಜಕೀಯ ಮಾಡಲು ಹೋಗಬಾರದು. ಈ ಬಗ್ಗೆ ಕೂಡಲೇ ಸೂಕ್ತ ತನಿಖೆಯೂ ನಡೆಯಬೇಕು ಎಂದರು.
ಬಿಜೆಪಿಯದ್ದು ರಾಜ್ಯ ಮತ್ತು ಕೇಂದ್ರದಲ್ಲೂ ನಿಮ್ಮದೇ ಸರ್ಕಾರ ಇದೆ. ಹೀಗಾಗಿ ತಾವೇ ತಿಳಿಸಿದಂತೆ ಎಸ್ಡಿಪಿಐ ನಿಷೇಧಿಸಬೇಕು ಎನ್ನುವುದಾದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಿ. ಸುಮ್ಮನೆ ಮಾತಾಡುವುದರಿಂದ ಏನೂ ಪ್ರಯೋಜನ ಇಲ್ಲ. ಆದರೆ, ಎಸ್ಡಿಪಿಐ ಒಂದು ರಾಜಕೀಯ ಪಕ್ಷ. ನನಗೂ ಅದು ವಿರೋಧ ಪಕ್ಷವೇ ನಿಜ. ತತ್ವ ಸಿದ್ದಾಂತಗಳ ಆಧಾರದ ಮೇಲೆ ಅವರವರು ರಾಜಕೀಯ ಮಾಡುತ್ತಾರೆ. ಆದರೇ ಅದನ್ನೆ ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಬೇಡ ಎಂದರು.
ತುಮಕೂರಲ್ಲಿ ಕ್ಷಮೆ ಯಾಚಿಸಿದ ಸಚಿವ ಮಾಧುಸ್ವಾಮಿ! ಇವರು ಮಾಡಿದ ತಪ್ಪೇನು?
ಈ ನಡುವೆ ತಮ್ಮ ಮೇಲೆ ನಡೆದ ಹಲ್ಲೆ ವಿಚಾರ ಪ್ರಸ್ತಾಪಿಸಿರುವ ಕುರಿತು ಪ್ರತಿಕ್ರಿಯಿಸಿ, ಗಲಭೆ ವೇಳೆ ನನ್ನ ಮೇಲೆ ನಡೆದಿರುವ ಹಲ್ಲೆ ವಿಚಾರವನ್ನು ರಾಜಕೀಯಕ್ಕೆ ತಳುಕು ಹಾಕಿದ್ದಾರೆ. ನನ್ನ ಮೇಲಿನ ಹಲ್ಲೆಗೂ ಎಸ್ ಡಿಪಿಐಗೂ ಸಂಬಂಧ ಇದೆಯಾ? ಎಂಬುದೇ ಖಚಿತವಾಗಿಲ್ಲ. ಇನ್ನು ಪೊಲೀಸರು ನನ್ನ ಮೇಲಿನ ಹಲ್ಲೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ 8 ಜನರನ್ನು ವಿಚಾರಣೆ ನಡೆಸಲಾಗಿತ್ತು.
ಅದರಲ್ಲಿ ಐವರು ಇದೀಗ ಬೇಲ್ ಮೇಲೆ ಹೊರಬಂದಿದ್ದಾರೆ. ಇನ್ನುಳಿದ ಮೂವರು ಜೈಲಿನಲ್ಲಿದ್ದಾರೆ. ನಾನು ಲಾಯರ್ ಇಟ್ಟು ಪ್ರಕರಣ ಮುಂದುವರೆಸುತ್ತಿದ್ದೇನೆ. ತನಿಖೆಯ ಸತ್ಯಾಂಶ ಹೊರಬರುವವರೆಗೂ ಏನನ್ನು ಮಾತನಾಡುವುದು ಸರಿಯಲ್ಲ ಎಂದರು.
ಗುಪ್ತಚರ ಇಲಾಖೆಯ ವೈಫಲ್ಯವೇ ಬೆಂಗಳೂರು ಗಲಭೆಗೆ ಕಾರಣ: ಶಾಸಕ ತನ್ವೀರ್ ಸೇಠ್
ಎಲ್ಲ ಪಕ್ಷದ ಸಿದ್ದಾಂತಗಳು ಬೇರೆ ಬೇರೆ ಆಗಿರಬಹುದು. ಆದರೆ, ಮನುಷ್ಯತ್ವ ದೇಶ ಭದ್ರತೆ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು. ಡಿಜೆ ಹಳ್ಳಿ ವಿಚಾರದಲ್ಲಿ ಯಾವುದೇ ರಾಜಕಾರಣ ಮಾಡಬಾರದು. ಈ ಪ್ರಕರಣ ನ್ಯಾಯಯುತವಾಗಿ ತಪಿತಸ್ಥರಿಗೆ ಶಿಕ್ಷೆಯಾಗಬೇಕು. ಇದನ್ನೇ ನಾನು ಸೇರಿದಂತೆ ಪ್ರತಿಯೊಬ್ಬರು ಹೇಳುತ್ತಿದ್ದಾರೆ. ನಾನೂ ಸಹ ಎಲ್ಲರನ್ನು ಭೇಟಿಯಾಗಿ ಈ ಬಗ್ಗೆ ಮಾತಾಡುತ್ತೇನೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಗಲಭೆ ಆಗಿರೋದು ನಿಜ. ಈ ನಡುವೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿರುವುದು ಸರ್ಕಾರದ ಜವಾಬ್ದಾರಿ. ಅದನ್ನ ಬಿಟ್ಟು ಎಲ್ಲದರಲ್ಲೂ ರಾಜಕೀಯ ಮಾಡಲು ಹೋಗಬಾರದು. ಈ ಬಗ್ಗೆ ಕೂಡಲೇ ಸೂಕ್ತ ತನಿಖೆಯೂ ನಡೆಯಬೇಕು ಎಂದರು.
ಬಿಜೆಪಿಯದ್ದು ರಾಜ್ಯ ಮತ್ತು ಕೇಂದ್ರದಲ್ಲೂ ನಿಮ್ಮದೇ ಸರ್ಕಾರ ಇದೆ. ಹೀಗಾಗಿ ತಾವೇ ತಿಳಿಸಿದಂತೆ ಎಸ್ಡಿಪಿಐ ನಿಷೇಧಿಸಬೇಕು ಎನ್ನುವುದಾದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಿ. ಸುಮ್ಮನೆ ಮಾತಾಡುವುದರಿಂದ ಏನೂ ಪ್ರಯೋಜನ ಇಲ್ಲ. ಆದರೆ, ಎಸ್ಡಿಪಿಐ ಒಂದು ರಾಜಕೀಯ ಪಕ್ಷ. ನನಗೂ ಅದು ವಿರೋಧ ಪಕ್ಷವೇ ನಿಜ. ತತ್ವ ಸಿದ್ದಾಂತಗಳ ಆಧಾರದ ಮೇಲೆ ಅವರವರು ರಾಜಕೀಯ ಮಾಡುತ್ತಾರೆ. ಆದರೇ ಅದನ್ನೆ ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಬೇಡ ಎಂದರು.
ತುಮಕೂರಲ್ಲಿ ಕ್ಷಮೆ ಯಾಚಿಸಿದ ಸಚಿವ ಮಾಧುಸ್ವಾಮಿ! ಇವರು ಮಾಡಿದ ತಪ್ಪೇನು?
ಈ ನಡುವೆ ತಮ್ಮ ಮೇಲೆ ನಡೆದ ಹಲ್ಲೆ ವಿಚಾರ ಪ್ರಸ್ತಾಪಿಸಿರುವ ಕುರಿತು ಪ್ರತಿಕ್ರಿಯಿಸಿ, ಗಲಭೆ ವೇಳೆ ನನ್ನ ಮೇಲೆ ನಡೆದಿರುವ ಹಲ್ಲೆ ವಿಚಾರವನ್ನು ರಾಜಕೀಯಕ್ಕೆ ತಳುಕು ಹಾಕಿದ್ದಾರೆ. ನನ್ನ ಮೇಲಿನ ಹಲ್ಲೆಗೂ ಎಸ್ ಡಿಪಿಐಗೂ ಸಂಬಂಧ ಇದೆಯಾ? ಎಂಬುದೇ ಖಚಿತವಾಗಿಲ್ಲ. ಇನ್ನು ಪೊಲೀಸರು ನನ್ನ ಮೇಲಿನ ಹಲ್ಲೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ 8 ಜನರನ್ನು ವಿಚಾರಣೆ ನಡೆಸಲಾಗಿತ್ತು.
ಅದರಲ್ಲಿ ಐವರು ಇದೀಗ ಬೇಲ್ ಮೇಲೆ ಹೊರಬಂದಿದ್ದಾರೆ. ಇನ್ನುಳಿದ ಮೂವರು ಜೈಲಿನಲ್ಲಿದ್ದಾರೆ. ನಾನು ಲಾಯರ್ ಇಟ್ಟು ಪ್ರಕರಣ ಮುಂದುವರೆಸುತ್ತಿದ್ದೇನೆ. ತನಿಖೆಯ ಸತ್ಯಾಂಶ ಹೊರಬರುವವರೆಗೂ ಏನನ್ನು ಮಾತನಾಡುವುದು ಸರಿಯಲ್ಲ ಎಂದರು.
ಗುಪ್ತಚರ ಇಲಾಖೆಯ ವೈಫಲ್ಯವೇ ಬೆಂಗಳೂರು ಗಲಭೆಗೆ ಕಾರಣ: ಶಾಸಕ ತನ್ವೀರ್ ಸೇಠ್
ಎಲ್ಲ ಪಕ್ಷದ ಸಿದ್ದಾಂತಗಳು ಬೇರೆ ಬೇರೆ ಆಗಿರಬಹುದು. ಆದರೆ, ಮನುಷ್ಯತ್ವ ದೇಶ ಭದ್ರತೆ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು. ಡಿಜೆ ಹಳ್ಳಿ ವಿಚಾರದಲ್ಲಿ ಯಾವುದೇ ರಾಜಕಾರಣ ಮಾಡಬಾರದು. ಈ ಪ್ರಕರಣ ನ್ಯಾಯಯುತವಾಗಿ ತಪಿತಸ್ಥರಿಗೆ ಶಿಕ್ಷೆಯಾಗಬೇಕು. ಇದನ್ನೇ ನಾನು ಸೇರಿದಂತೆ ಪ್ರತಿಯೊಬ್ಬರು ಹೇಳುತ್ತಿದ್ದಾರೆ. ನಾನೂ ಸಹ ಎಲ್ಲರನ್ನು ಭೇಟಿಯಾಗಿ ಈ ಬಗ್ಗೆ ಮಾತಾಡುತ್ತೇನೆ ಎಂದರು.