ಆ್ಯಪ್ನಗರ

ದಸರಾ ಆಚರಣೆ ಅದ್ಧೂರಿಯಾಗಿರಲಿ: ತನ್ವೀರ್‌ ಸೇಠ್‌

ಟೆಲಿಫೋನ್‌ ಕದ್ದಾಲಿಕೆಗೆ ಹಲವು ನಿಯಮಗಳಿವೆ. ಭದ್ರತಾ ಕಾರಣಗಳಿಗಾಗಿ ಫೋನ್‌ ಟ್ಯಾಪಿಂಗ್‌ಗೆ ಅನುಮತಿಸಲಾಗಿದೆ. ಆದರೆ, ಜನಪ್ರತಿನಿಧಿಗಳ ಸಂಭಾಷಣೆಗಳನ್ನು ದಾಖಲಿಸುವುದು ತಪ್ಪು ಎಂದು ತನ್ವೀರ್ ಸೇಠ್‌ ಹೇಳಿದರು.

Vijaya Karnataka Web 15 Aug 2019, 7:19 pm
ಮೈಸೂರು: ರಾಜ್ಯದಲ್ಲಿನ ಭಾರಿ ಮಳೆ ಹಾಗೂ ಪ್ರವಾಹ ಹಿನ್ನೆಲೆಯಲ್ಲಿ ಸರಳ ದಸರಾ ಆಚರಣೆಗೆ ಮುಂದಾಗಿರುವ ರಾಜ್ಯ ಸರಕಾರದ ನಡೆ ಸರಿಯಲ್ಲ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
Vijaya Karnataka Web ತನ್ವೀರ್‌ ಸೇಠ್‌
ತನ್ವೀರ್‌ ಸೇಠ್‌


ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರಳ ದಸರಾ ಆಚರಣೆಯಿಂದ ಪ್ರವಾಸೋದ್ಯಮಕ್ಕೆ ಧಕ್ಕೆಯಾಗಲಿದ್ದು, ಅದಕ್ಕಾಗಿ ಅದ್ದೂರಿ ದಸರಾ ಆಚರಣೆಯನ್ನು ರಾಜ್ಯ ಸರಕಾರ ಮಾಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ನೇತೃತ್ವದ ಸರಕಾರ ಯಾವುದೇ ದಾಖಲೆಗಳನ್ನು ಹೊಂದಿದ್ದರೆ ಟೆಲಿಫೋನ್‌ ಕದ್ದಾಲಿಕೆ ಘಟನೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ)ಗೆ ಹಸ್ತಾಂತರಿಸಬೇಕು ಎಂದು ತನ್ವೀರ್‌ ಸೇಠ್‌ ಆಗ್ರಹಿಸಿದರು.

ಬಿಜೆಪಿ ನೇತೃತ್ವದ ಸರಕಾರ ಯಾವುದೇ ದಾಖಲೆಗಳನ್ನು ಹೊಂದಿದ್ದರೆ ಟೆಲಿಫೋನ್‌ ಕದ್ದಾಲಿಕೆ ಘಟನೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ)ಗೆ ಹಸ್ತಾಂತರಿಸಬೇಕು ಎಂದು ತನ್ವೀರ್‌ ಸೇಠ್‌ ಆಗ್ರಹಿಸಿದರು.

ನಗರದ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ನಡೆದ 73ನೇ ಸ್ವಾತಂತ್ರ್ಯೋತ್ಸವದಲ್ಲಿ ಕಾರ‍್ಯಕ್ರಮ ನಂತರ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.

''ಇದು ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಹಿಂದಿನ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರದ ವಿರುದ್ಧ ಮಾಡಿರುವ ಸುಳ್ಳು ಆರೋಪ. ಅಂತಹ ಯಾವುದೇ ಘಟನೆಗಳು ನಡೆದಿಲ್ಲ. ಸಮಗ್ರ ತನಿಖೆಗೆ ಸರಕಾರ ಆದೇಶ ನೀಡಲಿ ಅಥವಾ ಈ ವಿಷಯವನ್ನು ಸಿಬಿಐಗೆ ವಹಿಸಲಿ. ಸತ್ಯಕ್ಕೆ ಯಾವಾಗಲೂ ಜಯ ಸಿಕ್ಕೇ ಸಿಗುತ್ತದೆ'' ಎಂದು ಹೇಳಿದರು.

''ಜನರು ತೊಂದರೆಗಳನ್ನು ಎದುರಿಸಿದಾಗ ದೇವರನ್ನು ಪೂಜಿಸುತ್ತಾರೆ. ಇಂದು ಜನರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ನಾವು ಚಾಮುಂಡೇಶ್ವರಿ ದೇವಿಯನ್ನು ಪೂಜಿಸಬೇಕಾಗಿದೆ. ಆದ್ದರಿಂದ ಸರಕಾರ ದಸರಾವನ್ನು ಭವ್ಯವಾಗಿ ಆಚರಿಸಬೇಕು'' ಎಂದು ಆಗ್ರಹಿಸಿದರು.

''ದಸರಾವನ್ನು ವೈಭವವಾಗಿ ಆಚರಿಸದಿದ್ದರೆ ಅದು ಮೈಸೂರು ನಗರದ ಮುಖ್ಯ ಆದಾಯದ ಮೂಲವಾಗಿರುವ ಪ್ರವಾಸೋದ್ಯಮ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರವಾಸೋದ್ಯಮ ಚಟುವಟಿಕೆಗಳು ನಗರದ ಜೀವಸೆಲೆ. ಆದ್ದರಿಂದ ಸರಕಾರ ತನ್ನ ನಿರ್ಧಾರಗಳನ್ನು ಮರುಪರಿಶೀಲಿಸಬೇಕು'' ಎಂದು ಅವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ