ರಾಜೇಂದ್ರ ಕೃಷ್ಣರಾಜನಗರ
ತಾಲೂಕಿನ ಬಡಜನತೆಗೆ ಸಾವಿರಾರು ಸೂರು ನೀಡುವ ತಾಲೂಕು ಪಂಚಾಯಿತಿ ಅಧಿಕಾರಿಗಳೇ ಸರಿಯಾದ ಸೂರಿಲ್ಲದೆ ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಹಾಸನ ರಸ್ತೆಯಲ್ಲಿರುವ ತಾಲೂಕು ಪಂಚಾಯಿತಿ ಕಟ್ಟಡ ನಿರ್ಮಾಣಗೊಂಡು ಸುಮಾರು ಎಂಟು ದಶಕಗಳೇ ಕಳೆದಿದೆ. ಸಮರ್ಪಕ ದುರಸ್ತಿ ಕಾರ್ಯ ಹಾಗೂ ಸುಣ್ಣ ಬಣ್ಣ ಕಾಣದ ಕಾರಣ ಇಡೀ ಕಟ್ಟಡ ಶಿಥಿಲಗೊಂಡು ಅಲ್ಲಲ್ಲಿ ಆರ್ಸಿಸಿ ಕುಸಿದು ಬೀಳುತ್ತಿದ್ದು, ಇಲ್ಲಿನ ಸಿಬ್ಬಂದಿ ಯಾವಾಗ ಯಾರ ತಲೆ ಮೇಲೆ ಸಿಮೆಂಟ್ ಕುಸಿದು ಬೀಳುತ್ತದೋ ಎಂಬ ಆತಂಕದಲ್ಲಿ ಕರ್ತವ್ಯ ನಿರ್ವಹಿಸುವ ಸ್ಥಿತಿ ಇದೆ.
ಕಟ್ಟಡ ದುರಸ್ತಿ: ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಅಧ್ಯಕ್ಷ ರ ಹಾಗೂ ಶಾಸಕರ ಕೊಠಡಿಗಳನ್ನು ಮಾತ್ರ ಲಕ್ಷಾಂತರ ರೂ. ವೆಚ್ಚದಲ್ಲಿ ಕೆನಪಿ ಕೋಟಿಂಗ್(ಕೃತಕ ಅಲಂಕಾರ) ಮಾಡಿಸಲಾಗಿದೆ. ಆದರೆ, ಕಟ್ಟಡ ತೋರ್ಪಡಿಕೆಗೆ ಮಾತ್ರ ಅಲಂಕಾರ ಮಾಡಲಾಗಿದ್ದು, ಕಚೇರಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ನಾಲ್ಕು ಕೊಠಡಿಗಳು ಮಾತ್ರ ಸುಣ್ಣ ಬಣ್ಣ ಕಂಡು ಅದೆಷ್ಟೋ ವರ್ಷಗಳು ಕಳೆದಿವೆ. ಸಿಬ್ಬಂದಿ ಕೆಲಸ ಮಾಡುವ ಕಡೆಯೇ ಆರ್ಸಿಸಿ ಕುಸಿದು ಬಿದ್ದು ಮಣ್ಣು ತಿಂದ ಕಬ್ಬಿಣ ಕಾಣುತ್ತಿದ್ದರೂ ದುರಸ್ತಿಗೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಮುಂದಾಗಿಲ್ಲ. ಇನ್ನು ಸಾರ್ವಜನಿಕರು ಆತಂಕದಲ್ಲೇ ಕಚೇರಿಗೆ ಬರುವ ವಾತಾವರಣ ನಿರ್ಮಾಣವಾಗಿದೆ.
ಚಾವಣಿಗೆ ರೈಲ್ವೆ ಕಂಬಿ ತಡೆ: ಆರ್ಸಿಸಿ ಸೀಲಿಂಗ್ ಕಿತ್ತು ಬಂದಾಗ ಒಂದಷ್ಟು ದುರಸ್ತಿ ಕಾರ್ಯ ನಡೆಸಿರುವ ಅಧಿಕಾರಿಗಳು ಕಟ್ಟಡವನ್ನು ಪೂರ್ಣ ದುರಸ್ತಿಗೊಳಿಸುವ ಇಲ್ಲವೆ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ಸರಕಾರಕ್ಕೆ ಯಾವುದೇ ಮಾಹಿತಿ ನೀಡದ ಕಾರಣ ಕಚೇರಿಯು ಹೀನಾಯ ಸ್ಥಿತಿ ತಲುಪಿದೆ. ಈಗಾಗಲೇ ಹಲವು ಕೊಠಡಿಗಳಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುವಾಗಲೇ ಆರ್ಸಿಸಿ ಸೀಲಿಂಗ್ ಕುಸಿದು ಬಿದ್ದು ಸ್ವಲ್ಪದರಲ್ಲಿ ಪಾರಾಗಿದ್ದಾರೆ. ಚಾವಣಿ ಕುಸಿಯುವ ಭೀತಿ ಇದ್ದ ಕಾರಣ ರೈಲ್ವೆ ಕಂಬಿ ಕೊಟ್ಟು ಆರ್ಸಿಸಿ ಕುಸಿಯದಂತೆ ತಡೆಯೊಡ್ಡಲಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ತಾಪಂ ಕಚೇರಿ ಕಟ್ಟಡ ದುರಸ್ತಿಗೆ ತಲುಪಿದರೂ ಕಟ್ಟಡ ಸರಿಪಡಿಸಲು ಯಾವುದೇ ಕ್ರಮಕೈಗೊಂಡಿಲ್ಲ ಎನ್ನುವುದು ಸ್ಥಳೀಯರ ಆರೋಪ. ಕಚೇರಿಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಇದ್ದಾರೆಯೇ ಎಂದು ಕೇಳಿಕೊಂಡು ಬರುವ ಬದಲು ಕಟ್ಟಡದ ಆರ್ಸಿಸಿ ನೋಡಿಕೊಂಡು ಬರುವ ಸ್ಥಿತಿ ಉಂಟಾಗಿದೆ. ತಾಪಂ ಕಚೇರಿ ಕಟ್ಟಡ ದುರಸ್ತಿ ಸರಿಪಡಿಸಿ ಕಚೇರಿ ಸಿಬ್ಬಂದಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.
ಸಾರ್ವಜನಿಕರಿಗೆ ಸೌಲಭ್ಯ ವಿತರಿಸುವ ಇಲಾಖೆ ಇರುವ ಕಚೇರಿಯ ಮಾಳಿಗೆಯೇ ಸೋರುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಸಾರ್ವಜನಿಕರ, ಸಿಬ್ಬಂದಿ ವರ್ಗ ಭಯದಲ್ಲಿ ಕಚೇರಿಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಗಿದೆ. ಈ ನಡುವೆ ಜನತೆಗೆ ಯಾವ ರೀತಿಯಲ್ಲಿ ಸರಕಾರಿ ಸವಲತ್ತು ಸಮರ್ಪಕವಾಗಿ ತಲುಪಿಸುತ್ತಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
-ಆಟೋಶಂಕರ್ ಲಾಳನಹಳ್ಳಿ ಕೃಷ್ಣರಾಜನಗರ
ಅಧ್ಯಕ್ಷ ರು ಓಡಾಡಲೆಂದು ಇರುವ ಒಂದು ಜೀಪನ್ನು ನಮ್ಮ ಅಧಿಕಾರಿಗಳು ದುರಸ್ತಿಗೊಳಿಸಿ ನಮಗೆ ನೀಡಲಾಗಿಲ್ಲ, ಇನ್ನು ಕಟ್ಟಡ ದುರಸ್ತಿ ಬಗ್ಗೆ ನಮ್ಮ ಬಳಿ ಮಾತನಾಡಿಯಾರೆ, ಈ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಿ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು.
-ಮಲ್ಲಿಕಾ ರವಿಕುಮಾರ್ ಅಧ್ಯಕ್ಷ ರು ತಾ.ಪಂ.ಕೃಷ್ಣರಾಜನಗರ.
ಇಡೀ ಕಟ್ಟಡ ದುರಸ್ತಿಗೊಳಿಸಲು ಹೆಚ್ಚಿನ ಹಣ ಬೇಕು. ಅದು ನಮ್ಮ ಬಳಿ ಇಲ್ಲ. ಆದ್ದರಿಂದ ಕಡಿಮೆ ಹಣದಲ್ಲಿ ತುರ್ತಾಗಿ ಆಗಬೇಕಾದ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಈ ಬಗ್ಗೆ ನೂತನ ಕಟ್ಟಡ ನಿರ್ಮಾಣಕ್ಕೆ ಸರಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗುವುದು.
-ಲಕ್ಷ್ಮೀ ಮೋಹನ್ ತಾ.ಪಂ. ಇಒ ಕೃಷ್ಣರಾಜನಗರ.
ತಾಲೂಕಿನ ಬಡಜನತೆಗೆ ಸಾವಿರಾರು ಸೂರು ನೀಡುವ ತಾಲೂಕು ಪಂಚಾಯಿತಿ ಅಧಿಕಾರಿಗಳೇ ಸರಿಯಾದ ಸೂರಿಲ್ಲದೆ ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಹಾಸನ ರಸ್ತೆಯಲ್ಲಿರುವ ತಾಲೂಕು ಪಂಚಾಯಿತಿ ಕಟ್ಟಡ ನಿರ್ಮಾಣಗೊಂಡು ಸುಮಾರು ಎಂಟು ದಶಕಗಳೇ ಕಳೆದಿದೆ. ಸಮರ್ಪಕ ದುರಸ್ತಿ ಕಾರ್ಯ ಹಾಗೂ ಸುಣ್ಣ ಬಣ್ಣ ಕಾಣದ ಕಾರಣ ಇಡೀ ಕಟ್ಟಡ ಶಿಥಿಲಗೊಂಡು ಅಲ್ಲಲ್ಲಿ ಆರ್ಸಿಸಿ ಕುಸಿದು ಬೀಳುತ್ತಿದ್ದು, ಇಲ್ಲಿನ ಸಿಬ್ಬಂದಿ ಯಾವಾಗ ಯಾರ ತಲೆ ಮೇಲೆ ಸಿಮೆಂಟ್ ಕುಸಿದು ಬೀಳುತ್ತದೋ ಎಂಬ ಆತಂಕದಲ್ಲಿ ಕರ್ತವ್ಯ ನಿರ್ವಹಿಸುವ ಸ್ಥಿತಿ ಇದೆ.
ಕಟ್ಟಡ ದುರಸ್ತಿ: ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಅಧ್ಯಕ್ಷ ರ ಹಾಗೂ ಶಾಸಕರ ಕೊಠಡಿಗಳನ್ನು ಮಾತ್ರ ಲಕ್ಷಾಂತರ ರೂ. ವೆಚ್ಚದಲ್ಲಿ ಕೆನಪಿ ಕೋಟಿಂಗ್(ಕೃತಕ ಅಲಂಕಾರ) ಮಾಡಿಸಲಾಗಿದೆ. ಆದರೆ, ಕಟ್ಟಡ ತೋರ್ಪಡಿಕೆಗೆ ಮಾತ್ರ ಅಲಂಕಾರ ಮಾಡಲಾಗಿದ್ದು, ಕಚೇರಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ನಾಲ್ಕು ಕೊಠಡಿಗಳು ಮಾತ್ರ ಸುಣ್ಣ ಬಣ್ಣ ಕಂಡು ಅದೆಷ್ಟೋ ವರ್ಷಗಳು ಕಳೆದಿವೆ. ಸಿಬ್ಬಂದಿ ಕೆಲಸ ಮಾಡುವ ಕಡೆಯೇ ಆರ್ಸಿಸಿ ಕುಸಿದು ಬಿದ್ದು ಮಣ್ಣು ತಿಂದ ಕಬ್ಬಿಣ ಕಾಣುತ್ತಿದ್ದರೂ ದುರಸ್ತಿಗೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಮುಂದಾಗಿಲ್ಲ. ಇನ್ನು ಸಾರ್ವಜನಿಕರು ಆತಂಕದಲ್ಲೇ ಕಚೇರಿಗೆ ಬರುವ ವಾತಾವರಣ ನಿರ್ಮಾಣವಾಗಿದೆ.
ಚಾವಣಿಗೆ ರೈಲ್ವೆ ಕಂಬಿ ತಡೆ: ಆರ್ಸಿಸಿ ಸೀಲಿಂಗ್ ಕಿತ್ತು ಬಂದಾಗ ಒಂದಷ್ಟು ದುರಸ್ತಿ ಕಾರ್ಯ ನಡೆಸಿರುವ ಅಧಿಕಾರಿಗಳು ಕಟ್ಟಡವನ್ನು ಪೂರ್ಣ ದುರಸ್ತಿಗೊಳಿಸುವ ಇಲ್ಲವೆ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ಸರಕಾರಕ್ಕೆ ಯಾವುದೇ ಮಾಹಿತಿ ನೀಡದ ಕಾರಣ ಕಚೇರಿಯು ಹೀನಾಯ ಸ್ಥಿತಿ ತಲುಪಿದೆ. ಈಗಾಗಲೇ ಹಲವು ಕೊಠಡಿಗಳಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುವಾಗಲೇ ಆರ್ಸಿಸಿ ಸೀಲಿಂಗ್ ಕುಸಿದು ಬಿದ್ದು ಸ್ವಲ್ಪದರಲ್ಲಿ ಪಾರಾಗಿದ್ದಾರೆ. ಚಾವಣಿ ಕುಸಿಯುವ ಭೀತಿ ಇದ್ದ ಕಾರಣ ರೈಲ್ವೆ ಕಂಬಿ ಕೊಟ್ಟು ಆರ್ಸಿಸಿ ಕುಸಿಯದಂತೆ ತಡೆಯೊಡ್ಡಲಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ತಾಪಂ ಕಚೇರಿ ಕಟ್ಟಡ ದುರಸ್ತಿಗೆ ತಲುಪಿದರೂ ಕಟ್ಟಡ ಸರಿಪಡಿಸಲು ಯಾವುದೇ ಕ್ರಮಕೈಗೊಂಡಿಲ್ಲ ಎನ್ನುವುದು ಸ್ಥಳೀಯರ ಆರೋಪ. ಕಚೇರಿಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಇದ್ದಾರೆಯೇ ಎಂದು ಕೇಳಿಕೊಂಡು ಬರುವ ಬದಲು ಕಟ್ಟಡದ ಆರ್ಸಿಸಿ ನೋಡಿಕೊಂಡು ಬರುವ ಸ್ಥಿತಿ ಉಂಟಾಗಿದೆ. ತಾಪಂ ಕಚೇರಿ ಕಟ್ಟಡ ದುರಸ್ತಿ ಸರಿಪಡಿಸಿ ಕಚೇರಿ ಸಿಬ್ಬಂದಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.
ಸಾರ್ವಜನಿಕರಿಗೆ ಸೌಲಭ್ಯ ವಿತರಿಸುವ ಇಲಾಖೆ ಇರುವ ಕಚೇರಿಯ ಮಾಳಿಗೆಯೇ ಸೋರುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಸಾರ್ವಜನಿಕರ, ಸಿಬ್ಬಂದಿ ವರ್ಗ ಭಯದಲ್ಲಿ ಕಚೇರಿಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಗಿದೆ. ಈ ನಡುವೆ ಜನತೆಗೆ ಯಾವ ರೀತಿಯಲ್ಲಿ ಸರಕಾರಿ ಸವಲತ್ತು ಸಮರ್ಪಕವಾಗಿ ತಲುಪಿಸುತ್ತಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
-ಆಟೋಶಂಕರ್ ಲಾಳನಹಳ್ಳಿ ಕೃಷ್ಣರಾಜನಗರ
ಅಧ್ಯಕ್ಷ ರು ಓಡಾಡಲೆಂದು ಇರುವ ಒಂದು ಜೀಪನ್ನು ನಮ್ಮ ಅಧಿಕಾರಿಗಳು ದುರಸ್ತಿಗೊಳಿಸಿ ನಮಗೆ ನೀಡಲಾಗಿಲ್ಲ, ಇನ್ನು ಕಟ್ಟಡ ದುರಸ್ತಿ ಬಗ್ಗೆ ನಮ್ಮ ಬಳಿ ಮಾತನಾಡಿಯಾರೆ, ಈ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಿ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು.
-ಮಲ್ಲಿಕಾ ರವಿಕುಮಾರ್ ಅಧ್ಯಕ್ಷ ರು ತಾ.ಪಂ.ಕೃಷ್ಣರಾಜನಗರ.
ಇಡೀ ಕಟ್ಟಡ ದುರಸ್ತಿಗೊಳಿಸಲು ಹೆಚ್ಚಿನ ಹಣ ಬೇಕು. ಅದು ನಮ್ಮ ಬಳಿ ಇಲ್ಲ. ಆದ್ದರಿಂದ ಕಡಿಮೆ ಹಣದಲ್ಲಿ ತುರ್ತಾಗಿ ಆಗಬೇಕಾದ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಈ ಬಗ್ಗೆ ನೂತನ ಕಟ್ಟಡ ನಿರ್ಮಾಣಕ್ಕೆ ಸರಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗುವುದು.
-ಲಕ್ಷ್ಮೀ ಮೋಹನ್ ತಾ.ಪಂ. ಇಒ ಕೃಷ್ಣರಾಜನಗರ.