ಆ್ಯಪ್ನಗರ

ಟಾಟಾ ಗ್ರೂಪ್‌‌ಗೆ ಸೇರುತ್ತಾ ಮೈಸೂರಿನ ಪ್ರತಿಷ್ಠಿತ ಲಲಿತ ಮಹಲ್ ಹೋಟೆಲ್..?

ಮೈಸೂರಿನ ಪ್ರತಿಷ್ಠಿತ ಲಲಿತ ಮಹಲ್‌ ಪ್ಯಾಲೆಸ್‌ ಹೋಟೆಲ್‌ ಟಾಟಾ ಗ್ರೂಪ್ಸ್‌ ತೆಕ್ಕೆಗೆ ಸೇರುತ್ತಾ ಎಂಬ ಚರ್ಚೆ ಜಿಲ್ಲೆಯಲ್ಲಿ ಹರಿದಾಡುತ್ತಿದೆ. ಈಗಾಗಲೇ ಟಾಟಾ ಸಂಸ್ಥೆ ಈ ವಿಚಾರವಾಗಿ ಬಿಎಸ್‌ ಯಡಿಯೂರಪ್ಪ ಅವರ ಜತೆ ಮಾತುಕತೆ ನಡೆಸಿದೆ ಎನ್ನಲಾಗಿದ್ದು, ಸರಕಾರದ ನಿರ್ಧಾರಕ್ಕೆ ಕಾಯುತ್ತಿದೆ.

Lipi 22 Jan 2021, 5:05 pm
ಮೈಸೂರು: ಶತಮಾನಗಳ ಇತಿಹಾಸವಿರುವ ಮೈಸೂರಿನ ಸುಪ್ರಸಿದ್ಧ ಲಲಿತ ಮಹಲ್‌ ಪ್ಯಾಲೆಸ್‌ ಹೋಟೆಲ್‌ ಸದ್ಯ ಟಾಟಾ ಗ್ರೂಪ್ಸ್‌ ತೆಕ್ಕೆಗೆ ಸೇರುತ್ತಿದೆ ಎಂಬ ಸುದ್ದಿ ಜಿಲ್ಲೆಯ ಹಲವೆಡೆ ಮಿಂಚಿನಂತೆ ಹರಿದಾಡುತ್ತಿದೆ. ಅಲ್ಲದೇ ಟಾಟಾ ಸಂಸ್ಥೆ ಈ ವಿಚಾರವಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ವರ್ಚುವಲ್ ಸಭೆಯಲ್ಲಿ ಮಾತುಕತೆ ನಡೆಸಿದೆ ಎನ್ನಲಾಗಿದೆ.
Vijaya Karnataka Web tatas offer to run mysurus iconic lalitha mahal palace hotel
ಟಾಟಾ ಗ್ರೂಪ್‌‌ಗೆ ಸೇರುತ್ತಾ ಮೈಸೂರಿನ ಪ್ರತಿಷ್ಠಿತ ಲಲಿತ ಮಹಲ್ ಹೋಟೆಲ್..?


ಹೌದು, ಇತ್ತೀಚೆಗೆ ಕರ್ನಾಟಕದ ಹೂಡಿಕೆ ಅವಕಾಶಗಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿತ್ತು. ಈ ವೇಳೆ ಖುದ್ದು ಟಾಟಾ ಸಮೂಹ ಮುನ್ನಡೆಸುತ್ತಿರುವ ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಮತ್ತು ಕಂಪನಿಯ ಇತರ ಉನ್ನತ ಅಧಿಕಾರಿಗಳು ಸಹ ಭಾಗಿಯಾಗಿದ್ದರು ಈ ವೇಳೆ ಪ್ರಸ್ತಾಪ ಬಂದಿದೆ ಎನ್ನಲಾಗಿದೆ.

ಸಭೆಯಲ್ಲಿ ಉದಯಪುರ, ಜೈಪುರ, ಜೋಧ್ಪುರ್, ಹೈದರಾಬಾದ್ ಮತ್ತು ಗ್ವಾಲಿಯರ್ ಮುಂತಾದ ಸ್ಥಳಗಳಲ್ಲಿ ಅರಮನೆಯ ಆಸ್ತಿಗಳನ್ನು ಎಲ್ಲರಿಗೂ ತಿಳಿಸುವಂತೆ ಮಾಡಲು ಹಾಗೂ ಅವುಗಳ ಪುರಾತತ್ವ ಹಿನ್ನೆಲೆಯನ್ನು ಹಾಗೆಯೇ ಕಾಪಾಡಿಕೊಳ್ಳಲು ತಾಜ್ ಗ್ರೂಪ್‌ ದಾಖಲೆಯ ಬಗ್ಗೆ ಸಿಎಂ ಯಡಿಯೂರಪ್ಪ ಅವರಿಗೆ ಟಾಟಾ ಗ್ರೂಪ್ಸ್‌ ವಿವರಿಸಿದೆ. ಜೊತೆಗೆ ಕೆಎಸ್‌ಟಿಡಿಸಿ ಒಂದು ಘಟಕವಾದ ಜಂಗಲ್ ಲಾಡ್ಜ್‌ ಮತ್ತು ರೆಸಾರ್ಟ್‌ಗಳು ಪ್ರಸ್ತುತ ನಡೆಸುತ್ತಿರುವ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ಅನ್ನು ಸ್ವಾಧೀನಪಡಿಸಿಕೊಳ್ಳಲು ಟಾಟಾ ಗ್ರೂಪ್ ಆಸಕ್ತಿ ತೋರಿಸಿದೆ ಎನ್ನಲಾಗಿದೆ. ಮೈಸೂರಿನ ಲಲಿತ್‌ ಮಹಲ್‌ ಹೋಟೆಲ್‌ಗೆ 100 ವರ್ಷ..! ನವೆಂಬರ್‌ನಲ್ಲಿ ಶತಮಾನೋತ್ಸವ ಆಚರಣೆಗೆ ನಿರ್ಧಾರಈ ವಿಚಾರವಾಗಿ ವಿವರಿಸಿದ ಎಲ್ಲಾ ಮಾಹಿತಿಯನ್ನು ಸಿಎಂ ಆಲಿಸಿದ್ದು, ಈ ಬಗ್ಗೆ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳಲು ಬರುವುದಿಲ್ಲವಾಗಿರುವುದರಿಂದ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ. ಇನ್ನು ಮಾನದಂಡಗಳ ಪ್ರಕಾರ ಸರ್ಕಾರವು ತನ್ನದೇ ಆದ ಸರ್ಕಾರಿ ಉದ್ಯಮವೊಂದನ್ನು ಖಾಸಗಿ ಪಕ್ಷಗಳಿಗೆ ಹಸ್ತಾಂತರಿಸಲು ನಿರ್ಧರಿಸಿದರೆ, ಸರ್ಕಾರವು ಅದನ್ನು ಮಾಡಲು ಜಾಗತಿಕ ಟೆಂಡರ್‌ಗಳ ಮೂಲಕ ಆಹ್ವಾನಿಸಬೇಕಿದೆ.
ಮಧ್ಯಮ ವರ್ಗದವರಿಗೂ ಕೈಗೆಟುಕಲಿದೆ ಮೈಸೂರಿನ ಲಲಿತ ಮಹಲ್‌..! ದರ ಕಡಿತಕ್ಕೆ ನಿರ್ಧಾರಹಾಗೊಮ್ಮೆ ಸರ್ಕಾರ ನಿರ್ಧರಿಸಿದರೂ ನಿಯಮನುಸಾರವಾಗಿಯೇ ಟೆಂಡರ್‌ ಕರೆದು ಗುತ್ತಿಗೆ ನೀಡಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಈ ಬಗ್ಗೆ ಪ್ರಸ್ತಾಪ ಹೊರಬಂದಿದೆಯೇ ಹೊರತು ಅದನ್ನು ನೀಡುವ ಬಗ್ಗೆ ನಿಖರ ಮಾಹಿತಿ ಮಾತ್ರ ತಿಳಿದುಬಂದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ