ಆ್ಯಪ್ನಗರ

ಮೀನು ರಕ್ಷಣೆಗೆ ಟೆಂಡರ್‌: ಆಯೋಗ ಅಸ್ತು

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಸಾಲುಸಾಲಾಗಿ ಸಾಯುತ್ತಿರುವ ಮೀನುಗಳ ರಕ್ಷಣೆಗೆ ಟೆಂಡರ್‌ ಕರೆಯಲು ಚುನಾವಣಾ ಆಯೋಗ ಅನುಮತಿ ನೋಡಿದೆ.

Vijaya Karnataka 30 Apr 2018, 5:00 am

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಸಾಲುಸಾಲಾಗಿ ಸಾಯುತ್ತಿರುವ ಮೀನುಗಳ ರಕ್ಷಣೆಗೆ ಟೆಂಡರ್‌ ಕರೆಯಲು ಚುನಾವಣಾ ಆಯೋಗ ಅನುಮತಿ ನೋಡಿದೆ.

ಕೆರೆಯಲ್ಲಿ 20 ದಿನಗಳಿಂದ ಮೀನುಗಳು ನಿರಂತರವಾಗಿ ಸಾಯುತ್ತಿದ್ದವು. ಕೆರೆಯಲ್ಲಿ ನೀರಿನ ಮಟ್ಟ ಕ್ಷೀಣಿಸಿರುವುದು ಮತ್ತು ಹೂಳು ತೆಗೆಯದಿರುವುದು ಇದಕ್ಕೆ ಕಾರಣ ಎಂಬುದು ತಜ್ಞರ ಅಭಿಮತವಾಗಿತ್ತು. 9 ತಿಂಗಳು ಆದರೂ ಕೆರೆಯಲ್ಲಿ ಮೀನು ಹಿಡಿದಿರಲಿಲ್ಲ. ಮೈಸೂರು ವಿಶ್ವವಿದ್ಯಾನಿಲಯವು ಮೀನು ಹರಾಜು ಹಾಕಿ ಇ-ಟೆಂಡರ್‌ ಕರೆಯಲು ಚುನಾವಣೆಯ ನೀತಿ ಸಂಹಿತೆ ಅಡ್ಡಿಯಾಗಿದೆ ಎಂದಿತ್ತು. ಈ ಕುರಿತು ವಿಜಯ ಕರ್ನಾಟಕ ''ಕುಕ್ಕರಹಳ್ಳಿ ಕೆರೆ ಮೀನು ರಕ್ಷಣೆಗೆ ನೀತಿ ಸಂಹಿತೆ ಅಡ್ಡಿ!'' ಶೀರ್ಷಿಕೆಯಡಿ ವರದಿ ಪ್ರಕಟಿಸಿ ವಿಶ್ವವಿದ್ಯಾಲಯ ಮತ್ತು ಚುನಾವಣೆ ಆಯೋಗವನ್ನು ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ಕೆರೆಯಲ್ಲಿ ಗುತ್ತಿಗೆ ಮುಂದುವರಿಸುವಂತೆ ಅಥವಾ ಅವಕಾಶವಿಲ್ಲದೆ ಇದ್ದಲ್ಲಿ ಹೊಸ ಟೆಂಡರ್‌ ಮೂಲಕ ನಡೆಸುವಂತೆ ಮುಖ್ಯಚುನಾವಣೆ ಅಧಿಕಾರಿ ಅನುಮತಿ ನೀಡಿದ್ದಾರೆ. ಮಾದರಿ ನೀತಿ ಸಂಹಿತೆ ಜಾರಿಯಲಿದ್ದು, ಸಂಹಿತೆ ಉಲ್ಲಂಘನೆ ಆಗದಂತೆ ಗುತ್ತಿಗೆ ನಡೆಸಬಹುದು ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ, ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ