ಆ್ಯಪ್ನಗರ

Terrorists in Mysuru: ಮೈಸೂರಲ್ಲಿ ಉಗ್ರರ ಸ್ಲೀಪಿಂಗ್‌ ಸೆಲ್‌; ಮನೆ ಬಾಡಿಗೆ ನೀಡುವಾಗ ಇರಲಿ ಎಚ್ಚರ!

ಮಂಗಳೂರು ಸ್ಫೋಟಕ್ಕೂ ಸಾಂಸ್ಕೃತಿಕ ನಗರಿ ಮೈಸೂರಿಗೂ ಸಂಪರ್ಕ ಇರುವ ಹಿನ್ನೆಲೆ ಮೈಸೂರಲ್ಲಿ ಉಗ್ರರ ಸ್ಲೀಪರ್‌ ಸೆಲ್‌ ಸಕ್ರಿಯ ಆಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ನ್ಯಾಯಾಲಯದ ಶೌಚಾಲಯದಲ್ಲಿ ಬಾಂಬ್‌ ಸ್ಫೋಟ ಸೇರಿ ಕೆಲವೊಂದು ಆತಂಕಕಾರಿ ಚಟುವಟಿಕೆಗಳಾಗಿದ್ದವು. ಈಗ ಮತ್ತೆ ಮೈಸೂರು ಉಗ್ರರ ಹಡಗುತಾಣ ಆಗಿರುವುದು ಸಾಂಸ್ಕೃತಿಕ ನಗರಿ ಮೈಸೂರು ಸೇಫಾ ಎಂಬ ಅನುಮಾನ ಮೂಡಿಸಿದೆ.

Edited byಅವಿನಾಶ ವಗರನಾಳ | Vijaya Karnataka Web 22 Nov 2022, 8:18 am

ಹೈಲೈಟ್ಸ್‌:


  • ಉಗ್ರರ ಹಡಗುತಾಣವಾದ ಸಾಂಸ್ಕೃತಿಕ ನಗರಿ ಮೈಸೂರು
  • ಅಪರಿಚತರಿಗೆ ಮನೆ ಬಾಡಿಗೆ ನೀಡುವಾಗ ಇರಲಿ ಎಚ್ಚರ!
  • ಮಂಗಳೂರು ಕುಕ್ಕರ್‌ ಸ್ಫೋಟಕ್ಕೂ ಇದೆ ಮೈಸೂರು ಲಿಂಕ್‌
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web mysuru palace
ಐತಿಚಂಡ ರಮೇಶ್‌ ಉತ್ತಪ್ಪ ಮೈಸೂರು
ಶಾಂತಿಪ್ರಿಯರ ನಾಡು ಹಾಗೂ ಸಾಂಸ್ಕೃತಿಕ ರಾಜಧಾನಿಯಾಗಿರುವ ಅರಮನೆ ನಗರಿ ಮೈಸೂರು ಉಗ್ರರ ಅಡಗುತಾಣವೂ ಆಗಿರುವುದು ಹಲವರನ್ನು ಬೆಚ್ಚಿಬೀಳಿಸಿದೆ. ಈ ಹಿಂದೆ ಇಲ್ಲಿನ ನ್ಯಾಯಾಲಯದ ಶೌಚಾಲಯದಲ್ಲಿ ಬಾಂಬ್‌ ಸ್ಫೋಟ ಸೇರಿ ಕೆಲವೊಂದು ಆತಂಕಕಾರಿ ಚಟುವಟಿಕೆಗಳಾಗಿದ್ದವು.
ಮೈಸೂರಿನಲ್ಲಿ ದುಷ್ಕರ್ಮಿಗಳು ಅಡಗಿಕೊಳ್ಳಲು ಸುಲಭವಾಗಿ ಬಾಡಿಗೆ ಮನೆಗಳು ಸಿಗುತ್ತಿರುವುದು ಕೂಡ ಇದಕ್ಕೆ ಕಾರಣವಾಗಿದ್ದು, ಇದೀಗ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮಂಗಳೂರಿನ ಗರೋಡಿಯಲ್ಲಿ ಆಟೋವೊಂದರಲ್ಲಿ ಸ್ಫೋಟಿಸಿದ ಕುಕ್ಕರ್‌ ಬಾಂಬ್‌ ಮೈಸೂರಿನಲ್ಲಿ ತಯಾರಾಗಿರುವುದು ಎನ್ನುವುದನ್ನು ಮೈಸೂರಿಗರಿಗೆ ನಂಬಲು ಸಾಧ್ಯವಾಗುತ್ತಿಲ್ಲ.

ಇದೀಗ ಪೊಲೀಸರು ಮೈಸೂರಿನಲ್ಲಿ ಶಂಕಿತ ಉಗ್ರನ ಪೂರ್ವಾಪರವನ್ನು ಜಾಲಾಡುತ್ತಿದ್ದಾರೆ. ನಗರದ ಮೇಟಗಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಲೋಕ ನಾಯಕ ನಗರದ 10ನೇ ಕ್ರಾಸ್‌ನಲ್ಲಿ ಮನೆ ಬಾಡಿಗೆ ಪಡೆದಿದ್ದ. ಅಲ್ಲಿ ಸಾಕಷ್ಟು ಆತಂಕಕಾರಿ ವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ. ಅಲ್ಲದೆ,ಆತ ನಗರದ ಹೃದಯ ಭಾಗವಾದ ಅಗ್ರಹಾರದಲ್ಲಿನ ಮೊಬೈಲ್‌ ಅಂಗಡಿಯಲ್ಲಿ ಮೊಬೈಲ್‌ ದುರಸ್ತಿ ತರಬೇತಿ ಪಡೆದಿರುವುದರ ಕುರಿತೂ
ಚುರುಕಿನ ತನಿಖೆ ನಡೆಯುತ್ತಿದೆ.

ಈ ಹಿಂದೆಯೂ ಇತ್ತುಆತಂಕ
2016ರ ಆಗಸ್ಟ್‌ 1ರಂದು ನಗರದ ನ್ಯಾಯಾಲಯ ಆವರಣದ ಶೌಚಾಲಯದಲ್ಲಿ ಬಾಂಬ್‌ ಸ್ಫೋಟವಾಗಿತ್ತು. ತಮಿಳುನಾಡಿನ ಮಧುರೈಯಲ್ಲಿ ವಾಸವಿದ್ದ ಮೂವರು ಉಗ್ರರು ಈ ಕೃತ್ಯ ನಡೆಸಿದ್ದರು. ಇವರು ಅಲ್‌ಖೈದಾ ಉಗ್ರರೊಂದಿಗೆ ಸಂಬಂಧ ಹೊಂದಿದ್ದರು. ನಂತರ ಉಗ್ರರಿಗೆ ಶಿಕ್ಷೆಯೂ ಆಗಿತ್ತು.

Mangaluru Blast: ಮಂಗಳೂರು ಆಟೋ ಸ್ಫೋಟಕ್ಕೆ ಮೈಸೂರು ಲಿಂಕ್! ಶಂಕಿತ ಉಗ್ರನ ಜಾಡು ಹಿಡಿದ ಪೊಲೀಸರು!
ಅಮೆರಿಕ ಕೃತ್ಯಕ್ಕೂ ನಂಟು!
ಅಮೆರಿಕದ ವಿಶ್ವ ವಾಣಿಜ್ಯ ವ್ಯಾಪಾರ ಮಳಿಗೆಯ ಅವಳಿ ಕಟ್ಟಡಕ್ಕೆ ವಿಮಾನ ಅಪ್ಪಳಿಸಿ ಧ್ವಂಸ ಮಾಡಿದ ಕೃತ್ಯದ ಮೂರನೇ ಪ್ರಮುಖ ಆರೋಪಿ ಸೆರೆ ಸಿಕ್ಕ ನಂತರ ಮೈಸೂರನ್ನು ಬೆಚ್ಚಿ ಬೀಳಿಸಿತು. ಏಕೆಂದರೆ, ಈತ ಮೈಸೂರಿನಲ್ಲಿ ಶಿಕ್ಷಣ ಪಡೆದಿದ್ದಎನ್ನುವುದು. ಪರಿಣಾಮ,ಮೈಸೂರಿನಲ್ಲಿಯೂ ತನಿಖೆ ನಡೆಯಿತು.

ಮೈಸೂರು ಏಕೆ ಸೇಫ್‌?
ಮೈಸೂರಿನಲ್ಲಿ ಇಂತಹ ಕೆಲವೊಂದು ಘಟನೆಗಳು ಈಹಿಂದೆ ನಡೆದಿವೆ. ಬೇರೆಡೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಮೈಸೂರಿನಲ್ಲಿ ಅಡಗಿಕೊಂಡಿದ್ದವರನ್ನು ಪತ್ತೆಹೆಚ್ಚಲಾಗಿದೆ. 2006ರಲ್ಲಿ ಹೆಬ್ಬಾಳು ರಿಂಗ್‌ ರಸ್ತೆಯಲ್ಲಿ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಆರೋಪದಲ್ಲಿ ಇಬ್ಬರು ಉಗ್ರರನ್ನು ಬಂಧಿಸಲಾಗಿತ್ತು. ಇವರು ರಾಜೀವ್‌ ನಗರದ ಬಾಡಿಗೆ ಮನೆಯಲ್ಲಿದ್ದರು. ಮೇಲ್ನೋಟಕ್ಕೆ ದುಷ್ಕರ್ಮಿಗಳಿಗೆ ಮೈಸೂರು ಸೇಫ್‌ ಎನ್ನುವಂತೆ ಕಾಣುತ್ತಿದೆ. ಇದಕ್ಕೆ ಮೈಸೂರಿನಲ್ಲಿ ಅವರಿಗೆ ವಾಸಕ್ಕೆ ಸುಲಭವಾಗಿ ಅವಕಾಶಗಳು ದೊರೆಯುತ್ತಿರುವುದು ಕಾರಣ. ಇಲ್ಲಿ ಸಾಕಷ್ಟು ಬಾಡಿಗೆ ಮನೆಗಳು ಅಪರಿಚಿತರಿಗೆ ಸಿಗುತ್ತವೆ.

Mohammed Shariq: ಮಂಗಳೂರು ಸ್ಫೋಟದ ಮಾಸ್ಟರ್‌ ಮೈಂಡ್‌ ಮೊಹಮದ್‌ ಶಾರೀಕ್‌ ಯಾರು? ಈ ಹಿಂದೆ ಏನೆಲ್ಲಾ ಮಾಡಿದ್ದ?
ಬಾಡಿಗೆ ಕಾನೂನು ಜಾರಿಯಾಗದ ಹಿನ್ನೆಲೆಯಲ್ಲಿ ಇಂತಹವರಿಗೇ ಬಾಡಿಗೆ ಕೊಡಬೇಕು ಎನ್ನುವ ನಿರ್ಬಂಧ ಕಾಣುತ್ತಿಲ್ಲ. ಮನೆ ಮಾಲೀಕರು ಕೂಡ ಹೆಚ್ಚು ಬಾಡಿಗೆ ನೀಡುವವರಿಗೆ ಕಟ್ಟಡಗಳನ್ನು ನೀಡುತ್ತಿದ್ದಾರೆ. ಹೆಚ್ಚು ಬಾಡಿಗೆ ಆಸೆಗಾಗಿ ಅವರ ಪೂರ್ವಾಪರ ವಿಚಾರಿಸದೆ ಮನೆ ನೀಡಿ ನಂತರ ಸಂಕಷ್ಟಕ್ಕೆ ಒಳಗಾಗುತ್ತಾರೆ.

Mangaluru Blast: ತೀರ್ಥಹಳ್ಳಿಯ ಶಾರೀಕ್‌ ಮನೆ ಮೇಲೆ ಪೊಲೀಸರ ದಾಳಿ; ಸಂಬಂಧಿಕರ ಮನೆಯಲ್ಲೂ ತಲಾಶ್‌
ಬಾಡಿಗೆ ನೀತಿ ಅಗತ್ಯ!ಯಾವ ಏರಿಯಾದಲ್ಲಿ ಯಾವ ಮನೆಗೆ ಎಷ್ಟು ಬಾಡಿಗೆ ನೀಡಬೇಕು ಎನ್ನುವ ನಿಯಮ ಇಲ್ಲದ ಕಾರಣ ಮಾಲೀಕರು ಹಣದ ಆಸೆಗೆ ಬಲಿಯಾಗುತ್ತಿದ್ದಾರೆ. ಕಟ್ಟಡ ಕಟ್ಟಿದ ಸಾಲದ ಕಂತು ಪಾವತಿ ಹಿನ್ನೆಲೆಯಲ್ಲಿ ಹೆಚ್ಚು ಬಾಡಿಗೆ ನಿರೀಕ್ಷಿಸುತ್ತಿದ್ದಾರೆ. ಆಗಾಗ ಬಾಡಿಗೆದಾರರನ್ನು ಖಾಲಿ ಮಾಡಿಸಿ ಬೇರೆಯವರಿಗೆ ಹೆಚ್ಚು ಹಣಕ್ಕೆ ನೀಡುವವರೂ ಇದ್ದಾರೆ. ಇದರಿಂದಾಗಿ ಮತ್ತೆ ಅಪರಿಚಿತರು ಮನೆಗೆ ಬರುವುದರಿಂದ ಅಪಾಯಕ್ಕೆ ಸಿಲುಕಿಕೊಳ್ಳುತ್ತಾರೆ.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ