ಆ್ಯಪ್ನಗರ

ಸ್ವಾಮೀಜಿಗಳ ಜಾತಿ ವಕಾಲತಿಗೆ ಶಾಸಕ ವಿಶ್ವನಾಥ್‌ ತಕರಾರು

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪರ ಸ್ಫಟಿಕಪುರಿ ಮಹಾಸಂಸ್ಥಾನ ನಂಜಾವಧೂತ ಸ್ವಾಮೀಜಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಪರ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅವರು ನೀಡಿರುವ ಹೇಳಿಕೆಗಳನ್ನು ಹುಣಸೂರಿನ ಜೆಡಿಎಸ್‌ ಶಾಸಕ, ಮಾಜಿ ಸಚಿವ ಅಡಗೂರು ಎಚ್‌.ವಿಶ್ವನಾಥ್‌ ಬಲವಾಗಿ ವಿರೋಧಿಸಿದ್ದಾರೆ.

Vijaya Karnataka 30 Jun 2018, 7:31 am
ಮೈಸೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪರ ಸ್ಫಟಿಕಪುರಿ ಮಹಾಸಂಸ್ಥಾನ ನಂಜಾವಧೂತ ಸ್ವಾಮೀಜಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಪರ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅವರು ನೀಡಿರುವ ಹೇಳಿಕೆಗಳನ್ನು ಹುಣಸೂರಿನ ಜೆಡಿಎಸ್‌ ಶಾಸಕ, ಮಾಜಿ ಸಚಿವ ಅಡಗೂರು ಎಚ್‌.ವಿಶ್ವನಾಥ್‌ ಬಲವಾಗಿ ವಿರೋಧಿಸಿದ್ದಾರೆ.
Vijaya Karnataka Web the caste of the swamiji is unconstitutional h viswanath
ಸ್ವಾಮೀಜಿಗಳ ಜಾತಿ ವಕಾಲತಿಗೆ ಶಾಸಕ ವಿಶ್ವನಾಥ್‌ ತಕರಾರು


ಕುರುಬ ಸಮಾಜದ ಅಧಿಕಾರಿಗಳ ಪರ ನಿಂತ ಕರ್ನಾಟಕ ಪ್ರದೇಶ ಕುರುಬರ ಸಂಘದ ನಿಲುವನ್ನೂ ಕುರುಬ ಸಮಾಜದ ಹಿರಿಯ ನಾಯಕರೂ ಆಗಿರುವ ವಿಶ್ವನಾಥ್‌ ಕಟುವಾಗಿ ಟೀಕಿಸಿದ್ದಾರೆ.

ಶುಕ್ರವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ವಿಶ್ವನಾಥ್‌, ''ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ನನ್ನನ್ನು ತುಳಿದಾಗ ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ ಎಲ್ಲಿದ್ದರು? ಆಗ ಏಕೆ ಸಿದ್ದರಾಮಯ್ಯ ಅವರಿಗೆ ಬುದ್ಧಿವಾದ ಹೇಳಲಿಲ್ಲ? ಕಾಂಗ್ರೆಸ್‌ನಲ್ಲಿ ಕುರುಬ ಸಮಾಜದ ಒಬ್ಬ ಶಾಸಕರಿಗೂ ಮಂತ್ರಿ ಸ್ಥಾನ ನೀಡಲಿಲ್ಲ. ಇದನ್ನೇಕೆ ಪ್ರಶ್ನಿಸಲಿಲ್ಲ? ನನ್ನನ್ನು ರಾಜಕೀಯವಾಗಿ ಮುಗಿಸಲು ಸಿದ್ದರಾಮಯ್ಯ ಹೊರಟಾಗ ರಾಜ್ಯ ಕುರುಬರ ಸಂಘ ಏಕೆ ಸುಮ್ಮನಿತ್ತು? ಕುರುಬರಿಗೆ ಮಠ ಕಟ್ಟಿದವರು ಯಾರು? ಕುರುಬರ ಮಠಕ್ಕೆ ಸ್ವಾಮೀಜಿ ಮಾಡಿದವರು ಯಾರು? ಹೀಗಿದ್ದರೂ ರಾಜಕೀಯವಾಗಿ ನನ್ನನ್ನು ಸಿದ್ದರಾಮಯ್ಯ ತುಳಿದಾಗ ಅವರಿಗೆ ಬುದ್ಧಿವಾದ ಹೇಳಲೇ ಇಲ್ಲ ಏಕೆ?,'' ಎಂದು ಖಾರವಾಗಿ ಪ್ರಶ್ನಿಸಿದರು.

ಅನವಶ್ಯಕ ಚರ್ಚೆ: ''ರಾಜಕೀಯ ಬೆಳವಣಿಗೆಗಳ ಬಗ್ಗೆ ವಿವಿಧ ಜಾತಿಗಳ ಸ್ವಾಮೀಜಿಗಳು ಪ್ರತಿಕ್ರಿಯಿಸುವುದು ಕರ್ನಾಟಕದಲ್ಲಿ ಹೊಸ ಟ್ರೆಂಡ್‌ ಆಗಿದೆ. ಇದು ಸಮಾಜಕ್ಕೆ ಒಳ್ಳೆಯದಲ್ಲ. ಜಾತಿ ಸ್ವಾಮೀಜಿಗಳು ಆಯಾ ಜಾತಿಯ ಅಧಿಕಾರಿಗಳು, ರಾಜಕಾರಣಿಗಳ ಪರ ನಿಲ್ಲುವುದು ಜನತಂತ್ರ ವ್ಯವಸ್ಥೆಗೆ ಮಾರಕವಾದದ್ದು. ಜಾತಿ-ಜಾತಿಗಳನ್ನು ಎತ್ತಿಕಟ್ಟುವ ವಿಚಾರ ಇದು. ಒಬ್ಬರು ಸ್ವಾಮೀಜಿ ಕುಮಾರಸ್ವಾಮಿ ಪರ, ಮತ್ತೊಬ್ಬ ಸ್ವಾಮೀಜಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸುವುದು, ಇನ್ನೊಬ್ಬ ಸ್ವಾಮೀಜಿ ಬಿ.ಎಸ್‌.ಯಡಿಯೂರಪ್ಪ ಅವರ ಪರ ಹೇಳಿಕೆ ನೀಡುವುದು ಜನತಂತ್ರಕ್ಕೆ ಒಳ್ಳೆಯದಲ್ಲ. ಇದು ಅನವಶ್ಯಕವಾಗಿ ಚರ್ಚೆಗೆ ಎಡೆಮಾಡುತ್ತದೆ,'' ಎಂದು ವಿಶ್ವನಾಥ್‌ ಪ್ರತಿಕ್ರಿಯಿಸಿದರು.

ಟಾರ್ಗೆಟ್‌ ಮಾಡಿಲ್ಲ: ''ಹೊಸ ಸರಕಾರಗಳು ಬಂದಾಗ ಅಧಿಕಾರಿಗಳ ವರ್ಗಾವಣೆ ಸಹಜ. ಯಾವುದೇ ಒಂದು ಸಮಾಜದ ಅಧಿಕಾರಿಗಳನ್ನು ಟಾರ್ಗೆಟ್‌ ಮಾಡಿದರೆ ಅದು ತಪ್ಪು. ಅದು ಕುರುಬ ಸಮಾಜವೇ ಆಗಿರಲಿ, ಮತ್ತ್ಯಾವ ಸಮಾಜದ ಅಧಿಕಾರಿಗಳಾಗಿದ್ದರೂ ತಪ್ಪು. ಆದರೆ, ಕುಮಾರಸ್ವಾಮಿ ಅವರ ಸರಕಾರ ಹೀಗೆ ಕುರುಬ ಸಮಾಜದ ಅಧಿಕಾರಿಗಳನ್ನು ಟಾರ್ಗೆಟ್‌ ಮಾಡಿ ವರ್ಗಾವಣೆ ಮಾಡಿಲ್ಲ. ಅಷ್ಟಕ್ಕೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕೆಲವೇ ಕೆಲವು ಕುರುಬ ಸಮಾಜದ ಅಧಿಕಾರಿಗಳಿಗೆ ಮಣೆ ಹಾಕಿದರೇ ವಿನಾ ಎಷ್ಟೋ ಜನ ಕುರುಬ ಸಮಾಜದ ಅಧಿಕಾರಿಗಳು ತುಳಿತಕ್ಕೆ ಒಳಗಾದರು,'' ಎಂದು ವಿಶ್ವನಾಥ್‌ ನೆನಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ