ಆ್ಯಪ್ನಗರ

ಗಂಡ ಹೆಂಡಿರ ಜಗಳಕ್ಕೆ ಮಗು ಬಲಿ

ಗಂಡ ಹೆಂಡಿರ ಜಗಳದಲ್ಲಿ ಪೆಟ್ಟು ತಿಂದ ಎರಡು ವರ್ಷದ ಮಗು ಮೃತಪಟ್ಟ ಘಟನೆ ತಾಲೂಕಿನ ಬಿಳಿಕೆರೆ ಹೋಬಳಿಯ ಅಸ್ವಾಳು ಬಳಿಯ ತೋಟದ ಮನೆಯಲ್ಲಿ ನಡೆದಿದೆ.

Vijaya Karnataka 6 Jul 2019, 5:00 am
ಹುಣಸೂರು: ಗಂಡ ಹೆಂಡಿರ ಜಗಳದಲ್ಲಿ ಪೆಟ್ಟು ತಿಂದ ಎರಡು ವರ್ಷದ ಮಗು ಮೃತಪಟ್ಟ ಘಟನೆ ತಾಲೂಕಿನ ಬಿಳಿಕೆರೆ ಹೋಬಳಿಯ ಅಸ್ವಾಳು ಬಳಿಯ ತೋಟದ ಮನೆಯಲ್ಲಿ ನಡೆದಿದೆ.
Vijaya Karnataka Web the child sacrificed to the quarrel of the wife and husband
ಗಂಡ ಹೆಂಡಿರ ಜಗಳಕ್ಕೆ ಮಗು ಬಲಿ


ಮೂಲತಃ ಎಚ್‌.ಡಿ.ಕೋಟೆ ತಾಲೂಕಿನ ಸವ್ವೆ ಗ್ರಾಮದವರಾದ ಶಶಿಧರ-ಪರಿಮಳ ದಂಪತಿ ಪುತ್ರ ಕುಶಾಲ್‌(2) ಮೃತ ಮಗು. ಆರೋಪಿ ದಂಪತಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಆರೋಪಿಗಳಿಗೆ ನಾಲ್ಕು ವರ್ಷದ ಖುಷಿ ಎಂಬ ಹೆಣ್ಣು ಮಗುವಿದೆ.

ಆಗಿದ್ದಿಷ್ಟು: ಕಳೆದ ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಸವ್ವೆ ಗ್ರಾಮದ ಶಶಿಧರ್‌-ಪರಿಮಳ ದಂಪತಿ ಜೀವನಕ್ಕಾಗಿ ಹುಣಸೂರು ತಾಲೂಕಿನ ಅಸ್ವಾಳು ಗ್ರಾಮದ ಮಂಜುನಾಥ ಅವರಿಗೆ ಸೇರಿದ ತೋಟದ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಶಶಿಧರ್‌ ಪತ್ನಿಯ ಶೀಲ ಶಂಕಿಸಿ, ಮಗು ತನ್ನದಲ್ಲವೆಂದು ಆಗಾಗ್ಗೆ ಗಲಾಟೆ ಮಾಡುತ್ತಿದ್ದ, ಇದೇ ರೀತಿ ಬುಧವಾರ ರಾತ್ರಿ ಇಬ್ಬರ ನಡುವೆ ಗಲಾಟೆ ನಡೆಯುತ್ತಿದ್ದ ವೇಳೆ ಮಗುವು ಚಂಡಿ ಹಿಡಿದಿದೆ. ಇದರಿಂದ ಕೋಪಗೊಂಡ ಇಬ್ಬರೂ ಮಗುವಿನ ಮೇಲೆ ಹಲ್ಲೆ ನಡೆಸಿದ್ದರಿಂದ ತೀವ್ರ ಅಸ್ಪಸ್ಥಗೊಂಡ ಮಗುವು ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

ಈ ನಡುವೆ ಗಂಡ ಹೆಂಡಿರ ಗಲಾಟೆಯಿಂದ ಮಗು ಚಂಡಿ ಹಿಡಿದಿದ್ದನ್ನು ನೆಪವಾಗಿಸಿಕೊಂಡು ಇಬ್ಬರೂ ಹೊಡೆದಿದ್ದರಿಂದ ಮಗು ಸಾವನ್ನಪ್ಪಿದೆ ಎಂದು ಪರಿಮಳ ಸಹೋದರ ಸವ್ವೆ ಗ್ರಾಮದ ಗೋವಿಂದರಾಜು ಬಿಳಿಕೆರೆ ಠಾಣೆಗೆ ದೂರು ನೀಡಿದ ಮೇರೆಗೆ ಆರೋಪಿ ದಂಪತಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಡಿವೈಎಸ್‌ಪಿ ಭಾಸ್ಕರ ರೈ, ವೃತ್ತ ನಿರೀಕ್ಷ ಕ ಕೆ.ಸಿ.ಪೂವಯ್ಯ, ಎಸ್‌ಐ ಮಾದ್ಯನಾಯ್ಕ ಭೇಟಿ ನೀಡಿ ಪರಿಶೀಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ