ಆ್ಯಪ್ನಗರ

ಶುಲ್ಕ ವಿಧಿಸದಂತೆ ಪಾಲಿಕೆ ನೀಡಿದ ಆದೇಶಕ್ಕೆ ನ್ಯಾಯಾಲಯ ತಡೆಯಾಜ್ಞೆ

ಮಾಲ್‌ಗಳಲ್ಲಿ ವಾಹನಗಳ ನಿಲುಗಡೆಗೆ ಗ್ರಾಹಕರಿಂದ ಯಾವುದೇ ಶುಲ್ಕ ವಿಧಿಸುವಂತಿಲ್ಲ ಎಂದು ಮೈಸೂರು ಮಹಾನಗರ ಪಾಲಿಕೆ ಹೊರಡಿಸಿದ್ದ ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಬಿ.ಎಂ.ಹ್ಯಾಬಿಟೆಟ್‌ ಮಾಲ್‌ನ ದೀಪಕ್‌ ಲುಲ್ಲಾ ತಿಳಿಸಿದರು.

Vijaya Karnataka 30 May 2018, 5:00 am
ಮೈಸೂರು : ಮಾಲ್‌ಗಳಲ್ಲಿ ವಾಹನಗಳ ನಿಲುಗಡೆಗೆ ಗ್ರಾಹಕರಿಂದ ಯಾವುದೇ ಶುಲ್ಕ ವಿಧಿಸುವಂತಿಲ್ಲ ಎಂದು ಮೈಸೂರು ಮಹಾನಗರ ಪಾಲಿಕೆ ಹೊರಡಿಸಿದ್ದ ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಬಿ.ಎಂ.ಹ್ಯಾಬಿಟೆಟ್‌ ಮಾಲ್‌ನ ದೀಪಕ್‌ ಲುಲ್ಲಾ ತಿಳಿಸಿದರು.
Vijaya Karnataka Web the court stays the order ordered by the court to pay no fees
ಶುಲ್ಕ ವಿಧಿಸದಂತೆ ಪಾಲಿಕೆ ನೀಡಿದ ಆದೇಶಕ್ಕೆ ನ್ಯಾಯಾಲಯ ತಡೆಯಾಜ್ಞೆ


ಸರಕಾರಿ ಸ್ವಾಮ್ಯದ ಬಹುತೇಕ ಸಂಸ್ಥೆಗಳಲ್ಲಿ ವಾಹನಗಳ ಪಾರ್ಕಿಂಗ್‌ಗೆ ಶುಲ್ಕ ವಿಧಿಸಲಾಗುತ್ತಿದೆ. ಅಲ್ಲದೇ ಬೆಂಗಳೂರು ಸೇರಿದಂತೆ ದೇಶದ ಅನೇಕ ನಗರಗಳಲ್ಲಿ ಮಾಲ್‌ಗಳು ವಾಹನಗಳ ನಿಲುಗಡೆಗೆ ಶುಲ್ಕ ತೆಗೆದುಕೊಳ್ಳುತ್ತಿವೆ. ಹೀಗಿರುವಾಗ ನಾವು ಯಾಕೆ ಶುಲ್ಕ ವಿಧಿಸುವುದರಲ್ಲಿ ವಿಶೇಷವಿಲ್ಲ. ಗ್ರಾಹಕರ ವಾಹನಗಳ ಭದ್ರತೆಯ ಜತೆಗೆ, ವಿದ್ಯುತ್‌, ಮಾನವ ಸಂಪನ್ಮೂಲದ ಬಳಕೆ ಹಾಗೂ ಪಾರ್ಕಿಂಗ್‌ ಸ್ಥಳದ ವ್ಯವಸ್ಥೆಗೆ ಪಾರ್ಕಿಂಗ್‌ ಶುಲ್ಕ ಅನಿವಾರ್ಯವಾಗಿದೆ. ಗ್ರಾಹಕರ ಹಿತದೃಷ್ಟಿಯಿಮದ ವಾಹನಗಳ ಪಾರ್ಕಿಂಗ್‌ಗೆ ಶುಲ್ಕ ವಿಧಿಸಲಾಗುತ್ತಿದ್ದು, ಪ್ರಸ್ತುತ 3 ಗಂಟೆ ವಾಹನ ನಿಲುಗಡೆಗೆ ದ್ವಿಚಕ್ರ ವಾಹನಗಳಿಗೆ 20 ರೂ., ನಾಲ್ಕು ಚಕ್ರದ ವಾಹನಕ್ಕೆ 40 ರೂ. ತೆಗೆದುಕೊಳ್ಳಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2017ರ ನ.20ರಂದು ಮಹಾನಗರಪಾಲಿಕೆ ಪಾರ್ಕಿಂಗ್‌ ಶುಲ್ಕ ತೆಗೆದುಕೊಳ್ಳುವಂತಿಲ್ಲ ಎಂದು ದಿಢೀರ್‌ ಆದೇಶ ನೀಡಿ ನೋಟಿಸ್‌ ನೀಡಿತ್ತು. ಈ ಸಂಬಂಧ ಮಹಾನಗರಪಾಲಿಕೆಯ ಆಯುಕ್ತರಿಗೆ ಪರಿಸ್ಥಿತಿ ವಿವರಿಸಲು ಸಾಕಷ್ಟು ಬಾರಿ ಪ್ರಯತ್ನಿಸಲಾದರೂ ಏನೂ ಪ್ರಯೋಜನವಾಗಲಿಲ್ಲ. ಹಾಗಾಗಿ ಬೇರೆ ದಾರಿ ಕಾಣದೆ ನಾವು ನ್ಯಾಯಾಲಯದ ಮೊರೆ ಹೋಗಬೇಕಾಯಿತು. ವಾದ, ವಿವಾದ ಆಲಿಸಿದ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು, ಏ.13ರಂದು ಪಾಲಿಕೆ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಆದರೂ, ಇದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ನಗರಪಾಲಿಕೆ ಅಧಿಕಾರಿಗಳು ಮಾಧ್ಯಮಗಳ ಮೂಲಕ ತಿಳಿಸಿರುವುದು ಅಶ್ಚರ್ಯವಾಗಿದೆ ಎಂದಧಿರು.

ಮಾಲ್‌ ಆಫ್‌ ಮೈಸೂರ್‌ನ ವ್ಯವಸ್ಥಾಪಕ ಕರ್ನಲ್‌ ಸಿ.ಪಿ.ಮೇದಪ್ಪ, ಹ್ಯಾಬಿಟೇಟ್‌ ಮಾಲ್‌ನ ವ್ಯವಸ್ಥಾಪಕ ವಿನಯ್‌, ಜಯಂತ್‌ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ