ಆ್ಯಪ್ನಗರ

ಸಿಎಂ ಸ್ಥಾನದಲ್ಲಿ ಸಿದ್ದು ನೋಡುವ ಆಸೆ: ಪುಟ್ಟರಂಗಶೆಟ್ಟಿ

ಈಗಲೂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವ ಆಸೆ ಇದೆ ಎಂದು ಸಚಿವ ಪುಟ್ಟರಂಗಶೆಟ್ಟಿ ಪುನರುಚ್ಚರಿಸಿದ್ದಾರೆ.

Vijaya Karnataka 20 May 2019, 5:00 am
ಮೈಸೂರು: ಈಗಲೂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವ ಆಸೆ ಇದೆ ಎಂದು ಸಚಿವ ಪುಟ್ಟರಂಗಶೆಟ್ಟಿ ಪುನರುಚ್ಚರಿಸಿದ್ದಾರೆ.
Vijaya Karnataka Web the desire to see siddaramaiah in the cm seat puttarangashetti
ಸಿಎಂ ಸ್ಥಾನದಲ್ಲಿ ಸಿದ್ದು ನೋಡುವ ಆಸೆ: ಪುಟ್ಟರಂಗಶೆಟ್ಟಿ


ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ವಿಧಾನ ಸಭೆ ವಿಸರ್ಜಿಸಲಿ ಎಂದು ಬಸವರಾಜ ಹೊರಟ್ಟಿ ಏಕೆ ಹಾಗೆ ಹೇಳಿದರು ಗೊತ್ತಿಲ್ಲ. ಅವರು ಹೇಳಿದಂತೆ ಏನೂ ನಡೆಯಲ್ಲ. ಹೇಳಬೇಕಾದವರು ಬೇರೆಯವರಿದ್ದು, ಅವರು ಹೇಳಿದಂತೆ ನಡೆಯುತ್ತದೆ. ದೇವೇಗೌಡರು, ಸಿದ್ದರಾಮಯ್ಯ ಇಲ್ಲವೇ ಕುಮಾರಸ್ವಾಮಿ ಹೇಳಿದರೆ ಅದಕ್ಕೆ ಅರ್ಥ ಇರುತ್ತದೆ. ಹೊರಟ್ಟಿ ಹೇಳಿರುವುದು ಅವರ ವೈಯಕ್ತಿಕ ವಿಚಾರ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಪ್ರತಿಪಕ್ಷದವರು ಗೊಂದಲ ಇದೆ ಎಂದು ಹೇಳುತ್ತಾರೆ. ಹೊರಟ್ಟಿಯವರು ನೇರವಾಗಿ ಚುನಾವಣೆಯಲ್ಲಿ ಭಾಗವಹಿಸಿದರೆ ತಾನೆ ಅವರಿಗೆ ಗೊತ್ತಾಗುವುದು,'' ಎಂದರು.

''ಸಿದ್ದರಾಮಯ್ಯ ಎಲ್ಲಿಯೂ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಲಿಲ್ಲ. ಅವಕಾಶ ಬಂದರೆ ಆಗಬಹುದು ಎಂದು ಅವರ ಆಪ್ತರು ಹೇಳಿರಬಹುದು. ಹಾಗೆಂದ ಮಾತ್ರಕ್ಕೆ ಈಗ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರೇ ಮುಂದುವರಿಯುತ್ತಾರೆ,'' ಎಂದು ಹೇಳಿದರು.

''ಮೊದಲು ಶುರು ಮಾಡಿದವರೇ ನೀವಲ್ಲವೇ'' ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ''ಹೌದು, ಆ ಸ್ಥಾನದಲ್ಲಿ ಅವರನ್ನು ನೋಡುತ್ತೇನೆ ಎಂದು ಹೇಳಿದ್ದೆ. ಈಗಲೂ ನನ್ನ ಆಸೆ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವುದು. ಈಗ ಕುಮಾರಸ್ವಾಮಿ ಇದ್ದಾರೆ. ಅವರ ಸ್ಥಾನದಲ್ಲಿ ಸಿದ್ದರಾಮಯ್ಯ ಅವರನ್ನು ನೋಡಬೇಕು ಎನ್ನುವ ಆಸೆ ಇರುತ್ತದೆ,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ