ಆ್ಯಪ್ನಗರ

ರೈಲ್ವೆ ಹಳಿ ಬೇಲಿ ದಾಟಲಾಗದೆ ಪರಿತಪಿಸಿದ ಕಾಡಾನೆ: ದಾರಿ ತೋರಿಸಿದ ಸಾಕಾನೆಗಳು !

ಮೇವಿಗಾಗಿ ನಾಡಿಗೆ ಬಂದು, ರೈಲ್ವೆ ಹಳಿ ತಡೆಗೋಡೆ ದಾಟಿ ವಾಪಸ್‌ ಕಾಡಿಗೆ ಮರಳಲಾಗದೆ ಪರಿತಪಿಸುತ್ತಿದ್ದ ಒಂಟಿ ಸಲಗವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸಾಕಾನೆಗಳ ಸಹಾಯದಿಂದ ಕಾಡು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

Vijaya Karnataka 5 Oct 2018, 5:00 am
ಹುಣಸೂರು: ಮೇವಿಗಾಗಿ ನಾಡಿಗೆ ಬಂದು, ರೈಲ್ವೆ ಹಳಿ ತಡೆಗೋಡೆ ದಾಟಿ ವಾಪಸ್‌ ಕಾಡಿಗೆ ಮರಳಲಾಗದೆ ಪರಿತಪಿಸುತ್ತಿದ್ದ ಒಂಟಿ ಸಲಗವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸಾಕಾನೆಗಳ ಸಹಾಯದಿಂದ ಕಾಡು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
Vijaya Karnataka Web the elephant is a insuperability has crossed the fence
ರೈಲ್ವೆ ಹಳಿ ಬೇಲಿ ದಾಟಲಾಗದೆ ಪರಿತಪಿಸಿದ ಕಾಡಾನೆ: ದಾರಿ ತೋರಿಸಿದ ಸಾಕಾನೆಗಳು !


ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹುಣಸೂರು ವಲಯದ ಬಿಲ್ಲೇನಹೊಸಳ್ಳಿ ಬಳಿ ಘಟನೆ ನಡೆದಿದ್ದು, ಸಲಗವನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನೋಡಲು ಸಾವಿರಾರು ಮಂದಿ ಜಮಾಯಿಸಿದ್ದರು.

ಆಗಿದ್ದಿಷ್ಟು: ಈ ಒಂಟಿ ಸಲಗವು ರಾತ್ರಿ ಚಂದನಗಿರಿ ಹಾಡಿ ಬಳಿಯಿಂದ ನಾಡು ಪ್ರವೇಶಿಸಿದೆ. ಹಾಡಿಯಿಂದ ಮುಂದಕ್ಕೆ ಮತ್ತೊಂದು ಭಾಗದಲ್ಲಿ ಇತ್ತೀಚೆಗೆ ರೈಲ್ವೆ ಹಳಿ ಬೇಲಿ ನಿರ್ಮಿಸಿದ್ದು, ರಾತ್ರಿಯಿಡೀ ಮೇವು ತಿನ್ನುತ್ತಾ ಅಲ್ಲಿಗೆ ತಲುಪಿದ ಸಲಗವು, ಅಲ್ಲಿಂದಲೇ ವಾಪಸ್‌ ಕಾಡಿಗೆ ತೆರಳಲು ಪ್ರಯತ್ನಿಸಿದೆ. ಆದರೆ, ಬೇಲಿ ದಾಟಲಾರದೆ ಅಲ್ಲೇ ಕಂಬಿ ಮುಂದೆ ಓಡಾಡಿದೆ. ಅಷ್ಟರೊಳಗೆ ಬೆಳಕು ಹರಿದಿದ್ದು, ಮುಂಜಾನೆ ಗ್ರಾಮಸ್ಥರು ಕಾಡಾನೆ ಕಂಡು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ.

ಎಷ್ಟೇ ಪ್ರಯತ್ನ ಪಟ್ಟರೂ ಸಲಗ ಕಾಡಿನ ಕಡೆಗೆ ಹೋಗದ ಹಿನ್ನೆಲೆ ಆರ್‌ಎಫ್‌ಒ ಸುರೇಂದ್ರ ನೇತೃತ್ವದ ತಂಡವು ಬಿಲ್ಲೇನಹೊಸಹಳ್ಳಿ ಕೆರೆ ಬಳಿಯಲ್ಲಿ ರೈಲ್ವೆ ಹಳಿ ಬೇಲಿಯನ್ನು ತೆಗೆದು ಆನೆಯನ್ನು ಕಾಡು ಸೇರಿಸಲು ಪ್ರಯತ್ನಿಸಿದರು. ಆದರೆ ಈ ಪ್ರಯತ್ನ ಸಫಲವಾಗಲಿಲ್ಲ. ಕೊನೆಗೆ ಸಾಕಾನೆಗಳಾದ ಗೋಪಾಲಸ್ವಾಮಿ, ಗಣೇಶನನ್ನು ಕರೆತಂದು ತೆರೆದಿದ್ದ ಬೇಲಿ ಮೂಲಕ ಕಾಡಾನೆಯನ್ನು ಸಂಜೆ ವೇಳೆಗೆ ಕಾಡು ಸೇರಿಸಲಾಯಿತು.

ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ವೀರಭದ್ರಪ್ಪ, ರತ್ನಾಕರ, ಅರಣ್ಯ ರಕ್ಷ ಕರಾದ ಗೋಪಾಲ, ಆನಂದ, ಗಣೇಶ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ