ಆ್ಯಪ್ನಗರ

ಆನೆ ಹಿಂಡನ್ನು ಅರಣ್ಯಕ್ಕೆ ಅಟ್ಟಿದ ಇಲಾಖೆ

ಸರಗೂರು ತಾಲೂಕಿನ ಶ್ರೀ ಚಿಕ್ಕದೇವಮ್ಮ ಬೆಟ್ಟದ ಬಳಿ ಬೀಡುಬಿಟ್ಟಿದ್ದ ಆತಂಕ ಸೃಷ್ಟಿಸಿದ್ದ 10ರಿಂದ 15 ಕಾಡಾನೆಗಳಿದ್ದ ಹಿಂಡನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

Vijaya Karnataka 4 Oct 2018, 5:00 am
ಎಚ್‌.ಡಿ.ಕೋಟೆ : ಸರಗೂರು ತಾಲೂಕಿನ ಶ್ರೀ ಚಿಕ್ಕದೇವಮ್ಮ ಬೆಟ್ಟದ ಬಳಿ ಬೀಡುಬಿಟ್ಟಿದ್ದ ಆತಂಕ ಸೃಷ್ಟಿಸಿದ್ದ 10ರಿಂದ 15 ಕಾಡಾನೆಗಳಿದ್ದ ಹಿಂಡನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
Vijaya Karnataka Web the elephant to the forest
ಆನೆ ಹಿಂಡನ್ನು ಅರಣ್ಯಕ್ಕೆ ಅಟ್ಟಿದ ಇಲಾಖೆ


ಮುಳ್ಳೂರು ಗುಡ್ಡ ಮತ್ತು ಶ್ರೀ ಚಿಕ್ಕದೇವಮ್ಮ ಬೆಟ್ಟದ ಕಡೆಯಿಂದ ಬಂದಿದ್ದ ಕಾಡಾನೆಗಳನ್ನು ಅಟ್ಟುವ ಸಂದರ್ಭದಲ್ಲಿ ಹುಣಸೂರು-ಬೇಗೂರು ರಸ್ತೆಯನ್ನು ದಾಟಿ ತೆರಳಿದ ಕಾಡಾನೆಗಳು, ನುಗು ಜಲಾಶಯದ ಹಿನ್ನೀರನ್ನು ಸೇರಿ ಬೀಡುಬಿಟ್ಟಿದ್ದವು. ಆದರೆ ಎಡೆಬಿಡದೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ಅಷ್ಟೂ ಆನೆಗಳನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನುಗು ವನ್ಯಜೀವಿ ವಲಯದತ್ತ ಅಟ್ಟಿದ್ದಾರೆ.

ಚಿಕ್ಕದೇವಮ್ಮ ಬೆಟ್ಟದ ತಪ್ಪಲಿನಿಂದ ನುಗು ಜಲಾಶಯ ಹಾಗೂ ಅಲ್ಲಿಂದ ಕಾಡಿಗೆ ಅಟ್ಟುವ ಸಂದರ್ಭದಲ್ಲಿ ಕಾಡಾನೆಗಳು ಅಲ್ಲಲ್ಲಿ ಜಮೀನುಗಳಲ್ಲಿ ಬೆಳೆಗಳನ್ನು ತುಳಿದು ನಾಶಪಡಿಸಿವೆ.

ಕಾರ್ಯಾಚರಣೆಯಲ್ಲಿ ನುಗು ವನ್ಯಜೀವಿ ವಲಯದ ಅರಣ್ಯಾಧಿಕಾರಿ ಮಂಜುನಾಥ್‌, ಸರಗೂರು ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ ಪಾಷಾ, ಎಸ್‌ಟಿಪಿಎಸ್‌ ಅರಣ್ಯಾಧಿಕಾರಿ ಸಂತೋಷ್‌ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಇದು ಹಿಂದೆ ಆನೆಗಳ ಕಾರಿಡಾರ್‌ ಆಗಿತ್ತು. ಆಗಿಂದಾಗ್ಗೆ ಆನೆಗಳು ಇಲ್ಲಿಗೆ ಬರುತ್ತಿರುತ್ತವೆ. ಆನೆಗಳನ್ನು ಕಾಡಿಗೆ ಅಟ್ಟುವ ಸಂದರ್ಭದಲ್ಲಿ ರೈತರ ಬೆಳೆ ನಷ್ಟವಾಗಿದೆ. ಒಟ್ಟಾರೆ ಯಶಸ್ವಿಯಾಗಿ ಆನೆಗಳನ್ನು ಕಾಡಿಗೆ ಅಟ್ಟಲಾಗಿದೆ. ರಾತ್ರಿ ಬಂದಿದ್ದ ಆನೆಗಳನ್ನು ಮುಂಜಾನೆ ವೇಳೆಗೆ ಕಾಡಿಗೆ ಅಟ್ಟಲಾಗಿದೆ.

-ಪರಮೇಶ್‌, ಸಹಾಯಕ ಅರಣ್ಯ ಸಂರಕ್ಷ ಣಾಧಿಕಾರಿ, ಹೆಡಿಯಾಲ
.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ