ಆ್ಯಪ್ನಗರ

ನೆಲಕಚ್ಚಿದ ವಿದ್ಯುತ್ ಕಂಬ, ಮರಗಳು

ತಾಲೂಕಿನ ವಿವಿಧೆಡೆ ಸುರಿದ ಬಿರುಗಾಳಿ ಮಳೆಗೆ ವಿದ್ಯುತ್ ಕಂಬಗಳು ಹಾಗೂ ಮರಗಳು ನೆಲಕಚ್ಚಿವೆ. ಮನೆಯ ಹೆಂಚುಗಳು ಹಾರಿಹೋಗಿವೆ.

Vijaya Karnataka 22 Apr 2018, 8:41 pm
ಕೃಷ್ಣರಾಜನಗರ: ತಾಲೂಕಿನ ವಿವಿಧೆಡೆ ಸುರಿದ ಬಿರುಗಾಳಿ ಮಳೆಗೆ ವಿದ್ಯುತ್ ಕಂಬಗಳು ಹಾಗೂ ಮರಗಳು ನೆಲಕಚ್ಚಿವೆ. ಮನೆಯ ಹೆಂಚುಗಳು ಹಾರಿಹೋಗಿವೆ.
Vijaya Karnataka Web the fallen electric pole the trees
ನೆಲಕಚ್ಚಿದ ವಿದ್ಯುತ್ ಕಂಬ, ಮರಗಳು


ತಾಲೂಕಿನ ಶ್ರೀರಾಂಪುರ, ಮುದ್ದನಹಳ್ಳಿ, ಕುಪ್ಪೆ, ಸೇರಿದಂತೆ ಈ ಭಾಗದಲ್ಲಿ ಬಿರುಗಾಳಿ ಮಳೆ ಸುರಿದಿದ್ದು, ಬಿರುಗಾಳಿಗೆ ತೆಂಗು,ಅಡಿಕೆ, ತೇಗ, ಆಲ, ಬೇವು, ಸಿಲ್ವರ್, ನೀಲಗಿರಿ ಸೇರಿದಂತೆ ವಿವಿಧ ಮರಗಳು ಬುಡಸಮೇತ ನೆಲಕಚ್ಚಿವೆ.

ಮರಗಳು ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಧರೆಗುರುಳಿವೆ. ಮತ್ತೆ ಕೆಲವು ಕಂಬಗಳು ನೆಲಕ್ಕೆ ಬಾಗಿವೆ. ಸಾರ್ವಜನಿಕರು ಮಾಹಿತಿ ನೀಡಿದ ಹಿನ್ನೆಲೆ ಸೆಸ್ಕ್‌ನ ಅಧಿಕಾರಿಗಳು ಮುನ್ನೆಚ್ಚರಿಕೆಯಾಗಿ ಕೂಡಲೇ ವಿದ್ಯುತ್ ಸರಬರಾಜು ಕಡಿತಗೊಳಿಸಿದ ಕಾರಣ ಆಗುತ್ತಿದ್ದ ಭಾರಿ ಅನಾಹುತ ತಪ್ಪಿದೆ.

ಗ್ರಾಮಗಳ ಸುತ್ತಮುತ್ತ ಹತ್ತಾರು ಎಕರೆ ಬಾಳೆಗಿಡ ಬಿರುಗಾಳಿಗೆ ಸಿಲುಕಿ ನೆಲಕುರುಳಿದೆ. ಹಲವಾರು ತೋಟಗಾರಿಕೆ ಬೆಳೆಗಳು ಬಿರುಗಾಳಿ ಹೊಡೆತಕ್ಕೆ ಸಿಕ್ಕಿ ಸಂಪೂರ್ಣ ನೆಲಕಚ್ಚಿದೆ.
ತಾಲೂಕಿನ ಶ್ರೀರಾಂಪುರ ಗ್ರಾಮದ ಎಸ್.ಆರ್.ಶ್ರೀನಿವಾಸ್, ರಾಮರಾಜೇಗೌಡ, ರಾಮಸ್ವಾಮಿ ಸೇರಿದಂತೆ ಇನ್ನಿತರರ ಜಮೀನಿನಲ್ಲಿ ಇದ್ದ 25ಕ್ಕೂ ಹೆಚ್ಚು ತೆಂಗಿನ ಮರಗಳು ಬುಡಸಮೇತ ಬಿದ್ದಿವೆ. ಅಡಿಕೆ ಮರಗಳು ಅರ್ಧಕ್ಕೆ ಮುರಿದು ಹೋಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಮುದ್ದನಹಳ್ಳಿ ಗ್ರಾಮದ ಮೋಟಯ್ಯ ಎಂಬುವರ ಮನೆಯ ಮೇಲ್ಛಾವಣಿ ಗಾಳಿಯ ಬಡಿತಕ್ಕೆ ಸಿಕ್ಕಿ ಪೂರ್ಣ ಹಾರಿ ಹೋಗಿವೆ. ಕುಮಾರ್ ಎಂಬುವರ ಮನೆಯ ಶೀಟ್ ಸಂಪೂರ್ಣ ಹಾರಿಹೋಗಿದೆ. ಗ್ರಾಮದ ರಾಜಮ್ಮ, ಸೋಮಪ್ಪ, ಗೌರಮ್ಮ, ಧನಂಜಯ ಚಿಕ್ಕಪ್ಪಾಜಿ ಎಂಬುವರ ಮನೆಗಳ ಹೆಂಚು, ಸೀಟ್ ಹಾಗೂ ಮನೆಯ ಪಕ್ಕದಲ್ಲಿ ನಿರ್ಮಾಣ ಮಾಡಲಾಗಿದ್ದ ಸೆಡ್‌ಗಳು ಗಾಳಿಯ ಹೊಡೆತಕ್ಕೆ ನೆಲಕಚ್ಚಿವೆ. ಗ್ರಾಮದ ಸರಕಾರಿ ಶಾಲೆಯ ಆವರಣದಲ್ಲಿ ಇದ್ದ ಮರ ಬಿದ್ದು ಹೆಂಚುಗಳೆಲ್ಲ ಹೊಡೆದು ಹೋಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ