ಆ್ಯಪ್ನಗರ

ಕಳ್ಳಿಕೊಪ್ಪಲಲ್ಲಿ ಬೋನಿಗೆ ಬಿದ್ದ ಚಿರತೆ

ಅನೇಕ ದಿನಗಳಿಂದ ಸಾಕುಪ್ರಾಣಿಗಳನ್ನು ಬೇಟೆಯಾಡಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದ ಚಿರತೆಯೊಂದು ಕೊನೆಗೂ ಬೋನಿಗೆ ಬಿದ್ದಿದೆ.

Vijaya Karnataka 23 Jun 2018, 5:00 am
ಹುಣಸೂರು : ಅನೇಕ ದಿನಗಳಿಂದ ಸಾಕುಪ್ರಾಣಿಗಳನ್ನು ಬೇಟೆಯಾಡಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದ ಚಿರತೆಯೊಂದು ಕೊನೆಗೂ ಬೋನಿಗೆ ಬಿದ್ದಿದೆ.
Vijaya Karnataka Web the leopard that fell to the bow in kallikappal
ಕಳ್ಳಿಕೊಪ್ಪಲಲ್ಲಿ ಬೋನಿಗೆ ಬಿದ್ದ ಚಿರತೆ


ಹುಣಸೂರು ತಾಲೂಕು ಗಾವಡಗೆರೆ ಹೋಬಳಿಯ ಕಳ್ಳಿಕೊಪ್ಪಲಿನ ಆನಂದ್‌ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಇಟ್ಟಿದ್ದ ಬೋನಿನಲ್ಲಿ ಗುರುವಾರ ರಾತ್ರಿ ಬಂಧಿಯಾಗಿದೆ.

ಆನಂದ್‌ ಅವರಿಗೆ ಸೇರಿದ ಕರುವನ್ನು ಚಿರತೆಯು ಬುಧವಾರ ಕೊಟ್ಟಿಗೆಗೆ ನುಗ್ಗಿ ಕೊಂದು ಹಾಕಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬೋನಿರಿಸಿ, ಬೋನಿನೊಳಗೆ ಕರುವಿನ ಮಾಂಸವನ್ನು ಇಡಲಾಗಿತ್ತು. ಇದನ್ನು ತಿನ್ನಲು ಬಂದ ಚಿರತೆಯು ಸೆರೆ ಸಿಕ್ಕಿದೆ.

ಸುಮಾರು ಎರಡು ವರ್ಷದ ಗಂಡು ಚಿರತೆ ಇದಾಗಿದ್ದು, ಇದನ್ನು ಪ್ರಾದೇಶಿಕ ಅರಣ್ಯ ವಲಯದ ಪಿರಿಯಾಪಟ್ಟಣ ತಾಲೂಕು ಬೂದಿತಿಟ್ಟು ಅರಣ್ಯ ಪ್ರದೇಶದಲ್ಲಿ ಬಂಧಮುಕ್ತಗೊಳಿಸಲಾಯಿತು. ಇದೇ ಸ್ಥಳದಲ್ಲಿ 15 ದಿನದ ಹಿಂದೆ ನಾಯಿಗಳ ದಾಳಿಯಿಂದ ಮರವೇರಿದ್ದ ಚಿರತೆಯನ್ನು ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿತ್ತು,

ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಶಾಂತಕುಮಾರ್‌, ಆರ್‌ಎಫ್‌ಒ ರಿಜ್ವಾನ್‌, ಫಾರೆಸ್ಟರ್‌ ಪ್ಯಾರೆಜಾನ್‌, ದೇವಯ್ಯ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ತಡೆಯೊಡ್ಡಿದ ಗ್ರಾಮಸ್ಥರು: ಗ್ರಾಮದ ಸುತ್ತಮುತ್ತಲಿನಲ್ಲಿ ಮತ್ತೊಂದು ದೊಡ್ಡ ಚಿರತೆ ಇದ್ದು, ಅದನ್ನು ಹಿಡಿಯಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದು, ಸ್ಥಳದಿಂದ ಚಿರತೆಯನ್ನು ಕೊಂಡೊಯ್ಯದಂತೆ ಸುಮಾರು 3 ಗಂಟೆ ಕಾಲ ಪ್ರತಿಭಟನೆ ನಡೆಸಿ ತಡೆಯೊಡ್ಡಿದರು, ಕೊನೆಗೆ ಎಸ್‌ಐ ಆನಂದ್‌ ಮನವಿ ಮಾಡಿದರೂ ಜಗ್ಗದಿದ್ದಾಗ, ಆರ್‌ಎಫ್‌ಒ ಶಾಂತಕುಮಾರ್‌ ಅವರು ಮತ್ತೊಂದು ಬೋನ್‌ ತರಿಸಿ ಜಮೀನಿನಲ್ಲಿರಿಸಿದ ಮೇಲಷ್ಟೆ ಸೆರೆ ಸಿಕ್ಕಿದ್ದ ಚಿರತೆಯನ್ನು ಕೊಂಡೊಯ್ಯಲು ಅವಕಾಶ ಮಾಡಿಕೊಟ್ಟರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ