ಸಾಲಿಗ್ರಾಮ : ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಮಾ.25 ರಂದು ನಾಮಪತ್ರ ಸಲ್ಲಿಸುವ ಹಿನ್ನೆಲೆ ಸಚಿವ ಸಾ.ರಾ.ಮಹೇಶ್ ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಸಿದರು.
ಇಲ್ಲಿನ ಶಾದಿಮಹಲ್ನಲ್ಲಿ ಶುಕ್ರವಾರ ನಡೆದ ಸಭೆಯ ಅಧ್ಯಕ್ಷ ತೆ ವಹಿಸಿದ್ದ ಅವರು,'' ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಭದ್ರಕೋಟೆಯಾಗಿದ್ದು, ಮಿತ್ರ ಪಕ್ಷ ಕಾಂಗ್ರೆಸ್ನ ಸಹಕಾರದಿಂದ ನಮ್ಮ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಹೆಚ್ಚಿನ ಅಂತರದಿಂದ ಜಯಗಳಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಎಲ್ಲಿಯೂ ಲೋಪವಾಗದಂತೆ ಒಗ್ಗಟ್ಟಿನಿಂದ ಮುಖ್ಯಮಂತ್ರಿಗಳ ಪುತ್ರನ ಗೆಲುವಿಗೆ ಶ್ರಮಿಸಿರಿ''ಎಂದು ಮನವಿ ಮಾಡಿದರು.
ಜೆಡಿಎಸ್ನ ಕೆಲ ಕಾರ್ಯಕರ್ತರು ಮಾತನಾಡಿ, ''ಕೆ.ಆರ್.ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ನ ಕಾರ್ಯಕರ್ತರು ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬೆಂಬಲ ನೀಡುವ ಮಾಹಿತಿಯಿದೆ. ಮೈತ್ರಿ ಧರ್ಮ ಉಲ್ಲಂಘಿಸುವ ಕಾಂಗ್ರೆಸ್ ಕಾರ್ಯಕರ್ತರನ್ನು ಮನವೊಲಿಸಬೇಕಿದೆ'' ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, '' ಕಾಂಗ್ರೆಸ್ ನಾಯಕರು ತಮ್ಮ ಕಾರ್ಯಕರ್ತರಿಗೆ ಈಗಾಗಲೆ ತಿಳಿವಳಿಕೆ ಹೇಳಿದ್ದು, ಜೆಡಿಎಸ್ ಅಭ್ಯರ್ಥಿಗೆ ಮಿತ್ರಪಕ್ಷ ದ ಕಾರ್ಯಕರ್ತರು ಮತ ನೀಡುವ ವಿಶ್ವಾಸವಿದೆ. ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಅಭ್ಯರ್ಥಿ ಗೆಲುವಿಗೆ ಸಂಪೂರ್ಣ ಸಹಕಾರ ನೀಡಿದರೆ, ನಮ್ಮ ಪಕ್ಷ ದ ಕಾರ್ಯಕರ್ತರು ಮೈಸೂರು-ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಹೆಚ್ಚು ಬೆಂಬಲ ನೀಡಲಿದ್ದಾರೆ''ಎಂದು ಪುನರುಚ್ಛರಿಸಿದರು.
''ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತಗಳೇನಾದರೂ ಪ್ರತಿಸ್ಪರ್ಧಿ ಸುಮಲತಾಗೆ ಹೆಚ್ಚು ಸಂಖ್ಯೆಯಲ್ಲಿ ಚಲಾವಣೆಯಾದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಪ್ರಮುಖ ಸ್ಪರ್ಧಾಕಾಂಕ್ಷಿಯೊಬ್ಬರಿಗೆ ಟಿಕೆಟ್ ನಿರಾಕರಿಸುವುದಾಗಿ ಕಾಂಗ್ರೆಸ್ ಹಿರಿಯ ನಾಯಕರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಮತಗಳು ನಮ್ಮ ಅಭ್ಯರ್ಥಿ ನಿಖಿಲ್ ಅವರಿಗೆ ಬೀಳುವ ವಿಶ್ವಾಸವಿದೆ''ಎಂದು ಹೇಳಿದರು.
ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮಿರ್ಲೆ ಧನಂಜಯ್, ಹೋಬಳಿ ಜೆಡಿಎಸ್ ಅಧ್ಯಕ್ಷ ತಿಮ್ಮೇಗೌಡ, ಪ್ರಧಾನ ಕಾರ್ಯದರ್ಶಿ ಲಾಲೂಸಾಬ್, ಮುಖಂಡರಾದ ಎಸ್.ಕೆ.ಮಧುಚಂದ್ರ, ಎಸ್.ಪಿ.ಆನಂದ್, ಖಿಜರ್ ಪಾಷಾ, ಮೆಡಿಕಲ್ ರಾಜಣ್ಣ, ಶ್ರೀನಿವಾಸಗೌಡ, ಏಜಾಷ್ಪಾಷಾ, ಎಸ್.ಎಂ.ಸೋಮಣ್ಣ, ಅಯಾಜ್ಪಾಷಾ, ಮೂಡಲ ಬೀಡು ರಘು ಶಿವಕುಮಾರ್, ರವಿಗೌಡ, ಗ್ರಾ.ಪಂ.ಮಾಜಿ ಅಧ್ಯಕ್ಷ ರಾದ ಸತೀಶ್, ಎಸ್.ವಿ.ನಟರಾಜ್, ಎಸ್.ಆರ್.ಪ್ರಕಾಶ್, ಪ್ರಭಾರ ಅಧ್ಯಕ್ಷೆ ಪಿಂಕಿಸ್ವಾಮಿ ಇತರರು ಇದ್ದರು.
ಇಲ್ಲಿನ ಶಾದಿಮಹಲ್ನಲ್ಲಿ ಶುಕ್ರವಾರ ನಡೆದ ಸಭೆಯ ಅಧ್ಯಕ್ಷ ತೆ ವಹಿಸಿದ್ದ ಅವರು,'' ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಭದ್ರಕೋಟೆಯಾಗಿದ್ದು, ಮಿತ್ರ ಪಕ್ಷ ಕಾಂಗ್ರೆಸ್ನ ಸಹಕಾರದಿಂದ ನಮ್ಮ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಹೆಚ್ಚಿನ ಅಂತರದಿಂದ ಜಯಗಳಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಎಲ್ಲಿಯೂ ಲೋಪವಾಗದಂತೆ ಒಗ್ಗಟ್ಟಿನಿಂದ ಮುಖ್ಯಮಂತ್ರಿಗಳ ಪುತ್ರನ ಗೆಲುವಿಗೆ ಶ್ರಮಿಸಿರಿ''ಎಂದು ಮನವಿ ಮಾಡಿದರು.
ಜೆಡಿಎಸ್ನ ಕೆಲ ಕಾರ್ಯಕರ್ತರು ಮಾತನಾಡಿ, ''ಕೆ.ಆರ್.ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ನ ಕಾರ್ಯಕರ್ತರು ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬೆಂಬಲ ನೀಡುವ ಮಾಹಿತಿಯಿದೆ. ಮೈತ್ರಿ ಧರ್ಮ ಉಲ್ಲಂಘಿಸುವ ಕಾಂಗ್ರೆಸ್ ಕಾರ್ಯಕರ್ತರನ್ನು ಮನವೊಲಿಸಬೇಕಿದೆ'' ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, '' ಕಾಂಗ್ರೆಸ್ ನಾಯಕರು ತಮ್ಮ ಕಾರ್ಯಕರ್ತರಿಗೆ ಈಗಾಗಲೆ ತಿಳಿವಳಿಕೆ ಹೇಳಿದ್ದು, ಜೆಡಿಎಸ್ ಅಭ್ಯರ್ಥಿಗೆ ಮಿತ್ರಪಕ್ಷ ದ ಕಾರ್ಯಕರ್ತರು ಮತ ನೀಡುವ ವಿಶ್ವಾಸವಿದೆ. ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಅಭ್ಯರ್ಥಿ ಗೆಲುವಿಗೆ ಸಂಪೂರ್ಣ ಸಹಕಾರ ನೀಡಿದರೆ, ನಮ್ಮ ಪಕ್ಷ ದ ಕಾರ್ಯಕರ್ತರು ಮೈಸೂರು-ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಹೆಚ್ಚು ಬೆಂಬಲ ನೀಡಲಿದ್ದಾರೆ''ಎಂದು ಪುನರುಚ್ಛರಿಸಿದರು.
''ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತಗಳೇನಾದರೂ ಪ್ರತಿಸ್ಪರ್ಧಿ ಸುಮಲತಾಗೆ ಹೆಚ್ಚು ಸಂಖ್ಯೆಯಲ್ಲಿ ಚಲಾವಣೆಯಾದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಪ್ರಮುಖ ಸ್ಪರ್ಧಾಕಾಂಕ್ಷಿಯೊಬ್ಬರಿಗೆ ಟಿಕೆಟ್ ನಿರಾಕರಿಸುವುದಾಗಿ ಕಾಂಗ್ರೆಸ್ ಹಿರಿಯ ನಾಯಕರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಮತಗಳು ನಮ್ಮ ಅಭ್ಯರ್ಥಿ ನಿಖಿಲ್ ಅವರಿಗೆ ಬೀಳುವ ವಿಶ್ವಾಸವಿದೆ''ಎಂದು ಹೇಳಿದರು.
ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮಿರ್ಲೆ ಧನಂಜಯ್, ಹೋಬಳಿ ಜೆಡಿಎಸ್ ಅಧ್ಯಕ್ಷ ತಿಮ್ಮೇಗೌಡ, ಪ್ರಧಾನ ಕಾರ್ಯದರ್ಶಿ ಲಾಲೂಸಾಬ್, ಮುಖಂಡರಾದ ಎಸ್.ಕೆ.ಮಧುಚಂದ್ರ, ಎಸ್.ಪಿ.ಆನಂದ್, ಖಿಜರ್ ಪಾಷಾ, ಮೆಡಿಕಲ್ ರಾಜಣ್ಣ, ಶ್ರೀನಿವಾಸಗೌಡ, ಏಜಾಷ್ಪಾಷಾ, ಎಸ್.ಎಂ.ಸೋಮಣ್ಣ, ಅಯಾಜ್ಪಾಷಾ, ಮೂಡಲ ಬೀಡು ರಘು ಶಿವಕುಮಾರ್, ರವಿಗೌಡ, ಗ್ರಾ.ಪಂ.ಮಾಜಿ ಅಧ್ಯಕ್ಷ ರಾದ ಸತೀಶ್, ಎಸ್.ವಿ.ನಟರಾಜ್, ಎಸ್.ಆರ್.ಪ್ರಕಾಶ್, ಪ್ರಭಾರ ಅಧ್ಯಕ್ಷೆ ಪಿಂಕಿಸ್ವಾಮಿ ಇತರರು ಇದ್ದರು.