* ಮನ ಸೆಳೆದ ಆಯ್ದಕ್ಕಿ ಲಕ್ಕಮ್ಮ, ಬಸವಣ್ಣ, ಅಲ್ಲಮ ಪ್ರಭು ವಚನಗಳ ಗಾಯನ
ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ವಚನ ಸಂಗೀತೋತ್ಸವಕ್ಕೆ ಶನಿವಾರವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಚಾಮುಂಡಿ ಬೆಟ್ಟದ ತಪ್ಪಲಿನ ಸುತ್ತೂರು ಮಠದ ಆವರಣದಲ್ಲಿ ನಡೆದ ಎರಡನೇ ದಿನದ ವಚನ ಗಾಯನದಲ್ಲಿ ಮೊದಲಿಗೆ ಬಾಗಲಕೋಟೆಯ ಆನಂದಕುಮಾರ ಕಂಬಳಿಹಾಳ ಅವರು ಆಯ್ದಕ್ಕಿ ಲಕ್ಕಮ್ಮ, ಮೇದಾರ ಕೇತಯ್ಯ, ಕೆಂಭಾವಿ ಭೋಗಯ್ಯ ಮೊದಲಾದವರ ವಚನವನ್ನು ಪ್ರಸ್ತುತ ಪಡಿಸಿದರು. ಇದೇ ವೇಳೆ ಆಸಕ್ತರು ವಚನಗಳ ಸಾರವನ್ನು ಸಂಗೀತದ ಮೂಲಕ ಅರಿಯುವ ಯತ್ನ ಮಾಡಿದರು.
ಬಳಿಕ ಕಲಬುರ್ಗಿಯ ಶಂಕರ್ ಹೂಗಾರ ಅವರು ಸಿದ್ದರಾಮೇಶ್ವರ, ಅಲ್ಲಮ ಪ್ರಭು, ಮೇದಾರ ಕೇತಯ್ಯ ಅವರ ವಚನಗಳನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದರು. ಇದೇ ವೇಳೆ ಮಾನ್ವಿಯ ಅಂಬಯ್ಯ ನುಲಿ ಅವರು ಗಜೇಶ ಮಸಣಯ್ಯ, ಸತ್ಯಕ್ಕ, ಕಾಳವ್ವೆ, ಅಂಬಿಗರ ಚೌಡಯ್ಯ, ಸುರದ ನಾಗಣ್ಣ ಮೊದಲಾದವರ ವಚನಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಸಂಗೀತಾಸಕ್ತರ ಮನ ಗೆದ್ದರು.
ಮಧ್ಯಾಹ್ನದ ಬಳಿಕ ಶ್ವೇತಾಕುಮಾರಿ ಅವರಿಂದ ಬಸವಣ್ಣ, ಅಕ್ಕಮಹಾದೇವಿ ಅವರ ವಚನ, ವೀರಭದ್ರಯ್ಯ ಹಿರೇಮಠ ಅವರಿಂದ ಜೇಡರ ದಾಸಿಮಯ್ಯ, ಚನ್ನಬಸವಣ್ಣ, ಅಲ್ಲಮಪ್ರಭು ದೇವರ ವಚನಗಳು ಪ್ರಸ್ತುತಗೊಂಡವು. ಇದೇ ವೇಳೆ ಸಂಜೆ ಬೆಂಗಳೂರಿನ ಪ್ರಯೋಗ ತಂಡದಿಂದ ‘ಅಂಬಿಗರ ಚೌಡಯ್ಯ’ ವಚನ ರೂಪಕ ಪ್ರಸ್ತುತಗೊಂಡಿತು. ಬಳಿಕ ಸುಮಾ ವಿಜಯ ಮತ್ತು ತಂಡದಿಂದ ವಚನ ವೈಭವ ನೃತ್ಯರೂಪಕ, ಡಾ.ಎಂ.ಎಂ.ಕಲಬುರ್ಗಿ ಅವರ ರಚನೆಯ ನಾಟಕ ‘ಕೆಟ್ಟಿತ್ತು ಕಲ್ಯಾಣ’ ಪ್ರದರ್ಶನಗೊಂಡಿತು.
ವಚನ ಸಂಗೀತೋತ್ಸವದ ಕೊನೆಯ ದಿನವಾದ ಭಾನುವಾರ ಬೆ.11ರಿಂದ ವಚನ ಗಾಯನ, ಸಂಜೆ ನೃತ್ಯ ರೂಪಕ, ನಾಟಕ ಪ್ರಸ್ತುತಗೊಳ್ಳಲಿದೆ.
ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ವಚನ ಸಂಗೀತೋತ್ಸವಕ್ಕೆ ಶನಿವಾರವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಚಾಮುಂಡಿ ಬೆಟ್ಟದ ತಪ್ಪಲಿನ ಸುತ್ತೂರು ಮಠದ ಆವರಣದಲ್ಲಿ ನಡೆದ ಎರಡನೇ ದಿನದ ವಚನ ಗಾಯನದಲ್ಲಿ ಮೊದಲಿಗೆ ಬಾಗಲಕೋಟೆಯ ಆನಂದಕುಮಾರ ಕಂಬಳಿಹಾಳ ಅವರು ಆಯ್ದಕ್ಕಿ ಲಕ್ಕಮ್ಮ, ಮೇದಾರ ಕೇತಯ್ಯ, ಕೆಂಭಾವಿ ಭೋಗಯ್ಯ ಮೊದಲಾದವರ ವಚನವನ್ನು ಪ್ರಸ್ತುತ ಪಡಿಸಿದರು. ಇದೇ ವೇಳೆ ಆಸಕ್ತರು ವಚನಗಳ ಸಾರವನ್ನು ಸಂಗೀತದ ಮೂಲಕ ಅರಿಯುವ ಯತ್ನ ಮಾಡಿದರು.
ಬಳಿಕ ಕಲಬುರ್ಗಿಯ ಶಂಕರ್ ಹೂಗಾರ ಅವರು ಸಿದ್ದರಾಮೇಶ್ವರ, ಅಲ್ಲಮ ಪ್ರಭು, ಮೇದಾರ ಕೇತಯ್ಯ ಅವರ ವಚನಗಳನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದರು. ಇದೇ ವೇಳೆ ಮಾನ್ವಿಯ ಅಂಬಯ್ಯ ನುಲಿ ಅವರು ಗಜೇಶ ಮಸಣಯ್ಯ, ಸತ್ಯಕ್ಕ, ಕಾಳವ್ವೆ, ಅಂಬಿಗರ ಚೌಡಯ್ಯ, ಸುರದ ನಾಗಣ್ಣ ಮೊದಲಾದವರ ವಚನಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಸಂಗೀತಾಸಕ್ತರ ಮನ ಗೆದ್ದರು.
ಮಧ್ಯಾಹ್ನದ ಬಳಿಕ ಶ್ವೇತಾಕುಮಾರಿ ಅವರಿಂದ ಬಸವಣ್ಣ, ಅಕ್ಕಮಹಾದೇವಿ ಅವರ ವಚನ, ವೀರಭದ್ರಯ್ಯ ಹಿರೇಮಠ ಅವರಿಂದ ಜೇಡರ ದಾಸಿಮಯ್ಯ, ಚನ್ನಬಸವಣ್ಣ, ಅಲ್ಲಮಪ್ರಭು ದೇವರ ವಚನಗಳು ಪ್ರಸ್ತುತಗೊಂಡವು. ಇದೇ ವೇಳೆ ಸಂಜೆ ಬೆಂಗಳೂರಿನ ಪ್ರಯೋಗ ತಂಡದಿಂದ ‘ಅಂಬಿಗರ ಚೌಡಯ್ಯ’ ವಚನ ರೂಪಕ ಪ್ರಸ್ತುತಗೊಂಡಿತು. ಬಳಿಕ ಸುಮಾ ವಿಜಯ ಮತ್ತು ತಂಡದಿಂದ ವಚನ ವೈಭವ ನೃತ್ಯರೂಪಕ, ಡಾ.ಎಂ.ಎಂ.ಕಲಬುರ್ಗಿ ಅವರ ರಚನೆಯ ನಾಟಕ ‘ಕೆಟ್ಟಿತ್ತು ಕಲ್ಯಾಣ’ ಪ್ರದರ್ಶನಗೊಂಡಿತು.
ವಚನ ಸಂಗೀತೋತ್ಸವದ ಕೊನೆಯ ದಿನವಾದ ಭಾನುವಾರ ಬೆ.11ರಿಂದ ವಚನ ಗಾಯನ, ಸಂಜೆ ನೃತ್ಯ ರೂಪಕ, ನಾಟಕ ಪ್ರಸ್ತುತಗೊಳ್ಳಲಿದೆ.