ಆ್ಯಪ್ನಗರ

ಉಳಿದ ಅಧಿಕಾರವಧಿ ಮುಗಿದರೆ ಸಾಕಾಗಿದೆ: ಮೈಸೂರಲ್ಲಿ ವಿ. ಶ್ರೀನಿವಾಸ್‌ ಪ್ರಸಾದ್‌ ಬೇಸರ

ಆರೋಗ್ಯ ಸರಿ ಇಲ್ಲದ ಕಾರಣ ಚುನಾಯಿತನಾದ ಬಳಿಕ ಇದೇ ಮೊದಲ ಬಹಿರಂಗ ಕಾರ್ಯಕ್ರಮವಾಗಿದೆ. ಮೂರೂವರೆ ವರ್ಷದ ಅಧಿಕಾರ ಪೂರೈಸಿದರೆ ಸಾಕಾಗಿದೆ ಎಂದು ಸಂಸದ ವಿ ಶ್ರೀನಿವಾಸ್‌ ಪ್ರಸಾದ್‌ ಬೇಸರ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ಮಾತನಾಡಿದ ಅವರು ನನಗೆ ರಾಜಕೀಯ, ಚುನಾವಣೆ ಸಾಕಾಗಿತ್ತು ಎಂದು ಹೇಳಿದರು.

Vijaya Karnataka Web 8 Jan 2021, 11:33 pm
ಮೈಸೂರು: ನನಗೆ ರಾಜಕೀಯ, ಚುನಾವಣೆ ಸಾಕಾಗಿತ್ತು. ಆದರೆ, ಈ ಬಾರಿ ಹಠ ಮತ್ತು ಛಲಕ್ಕಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದೆ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್‌ ಹೇಳಿದರು.
Vijaya Karnataka Web SRINIVAS PRASAD
ವಿ ಶ್ರೀನಿವಾಸ್‌ ಪ್ರಸಾದ್‌, ಸಂಸದ (ಸಂಗ್ರಹ ಚಿತ್ರ)


ರಾಮಕೃಷ್ಣ ನಗರದಲ್ಲಿರುವ ಸುಯೋಗ್‌ ಆಸ್ಪತ್ರೆಯ 2021ನೇ ವರ್ಷದ ಕ್ಯಾಲೆಂಡರ್‌ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನನ್ನ ಆರೋಗ್ಯ ಸರಿ ಇಲ್ಲದ ಕಾರಣ ಚುನಾಯಿತನಾದ ಬಳಿಕ ಇದೇ ಮೊದಲ ಬಹಿರಂಗ ಕಾರ್ಯಕ್ರಮವಾಗಿದೆ. ಮೂರೂವರೆ ವರ್ಷದ ಅಧಿಕಾರ ಪೂರೈಸಿದರೆ ಸಾಕಾಗಿದೆ ಎಂದು ಹೇಳಿದರು.

6ನೇ ಬಾರಿಗೆ ಸಂಸತ್ತಿಗೆ ಚುನಾಯಿತನಾಗಿದ್ದೇನೆ. ಆ ಮೂಲಕ ಯಾರು ನನ್ನಿಂದ ಏನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದರೊ ಅವರಿಗೆ ತಕ್ಕ ಉತ್ತರ ನೀಡಿದ್ದೇನೆ ಎಂದು ಸಿದ್ದರಾಮಯ್ಯ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ದಪ್ಪ ಚರ್ಮದ ಮನುಷ್ಯ, ಆತನಿಗೆ ಸಂಸ್ಕೃತಿ ಇಲ್ಲ: ಶ್ರೀನಿವಾಸ ಪ್ರಸಾದ್‌ ವಾಗ್ದಾಳಿನನಗೆ ಅಧಿಕಾರ ಮುಖ್ಯವಾಗಿರಲಿಲ್ಲ. ಏಕೆಂದರೆ ಈ ಹಿಂದೆಯೇ ಕೇಂದ್ರ ಹಾಗೂ ರಾಜ್ಯದ ಮಂತ್ರಿಯಾಗಿದ್ದೆ. 25 ವರ್ಷ ಹೊಸ ದಿಲ್ಲಿಯಲ್ಲಿದ್ದೆ. ಇಂದಿರಾಗಾಂಧಿ ಸೇರಿ ಹಲವು ದೊಡ್ಡ ನಾಯಕರ ಸಂಪರ್ಕವಿತ್ತು. ಹಾಗಾಗಿ ಸುದೀರ್ಘ ರಾಜಕೀಯದ ಸಂತೃಪ್ತಿ ಇದೆ. ಸ್ವಜನ ಪಕ್ಷಪಾತಿ, ಭ್ರಷ್ಟಾಚಾರಿ, ಕೆಲಸಕ್ಕೆ ಬಾರದವನು ಎಂದು ಯಾರೂ ದೂರಿಲ್ಲ. ರಾಜಕೀಯ ದುರುದ್ದೇಶದಿಂದ ಕೆಲವರು ಹೀಗೆ ಹೇಳಬಹುದು ಎಂದರು.
ಡಿಸಿ ಶರತ್‌ ವರ್ಗಾವಣೆ ಮುಖ್ಯಮಂತ್ರಿಗಳ ತಪ್ಪು ನಿರ್ಧಾರ: ಯಡಿಯೂರಪ್ಪ ವಿರುದ್ಧ ಶ್ರೀನಿವಾಸ್‌ ಪ್ರಸಾದ್‌ ಗರಂಇದು ನನ್ನ 14ನೇ ಚುನಾವಣೆ. 25ನೇ ವಯಸ್ಸಿಗೆ ಮೊದಲ ಎಲೆಕ್ಷನ್‌ ಎದುರಿಸಿದ್ದೆ. ಮೂರು ವರ್ಷದ ಬಳಿಕ ಚುನಾವಣೆಗೆ ಸ್ಪರ್ಧಿಸಿ 50 ವರ್ಷಗಳಾಗುತ್ತೆ. ಇದೆಲ್ಲ ಹೇಗೆ ಸಾಗಿ ಬಂತು ಎಂಬುದರ ಕುರಿತು ಸದ್ಯದಲ್ಲೇ ಪುಸ್ತಕ ಹೊರ ತರುತ್ತಿದ್ದೇನೆ. ದಿಲ್ಲಿಯಲ್ಲಿದ್ದ ನನ್ನ ಮನೆಗೆ ಒಂದು ದಿನವೂ ಬೀಗ ಹಾಕಲಿಲ್ಲ. ಅಲ್ಲಿಗೆ ಯಾರು ಬೇಕಾದರೂ ಬಂದು ವಾಸ್ತವ್ಯ ಹೂಡಬಹುದಿತ್ತು. ಒಂದು ರೀತಿ ಯೂತ್‌ ಹಾಸ್ಟೆಲ್‌ನಂತೆ ಮಾಡಿದ್ದೆ ಎಂದು ಸ್ಮರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ