ಆ್ಯಪ್ನಗರ

ಚಿನ್ನದಂಗಡಿಯಲ್ಲಿ 3ನೇ ಬಾರಿ ಕದಿಯಲು ಬಂದು ಸಿಕ್ಕಿಬಿದ್ದ ಕಳ್ಳ !

ಚಿನ್ನಾಭರಣದ ಅಂಗಡಿಯಲ್ಲಿ ಮಾಲೀಕನ ಕಣ್ತಪ್ಪಿಸಿ ಎರಡು ಬಾರಿ ಒಡವೆ ಅಪಹರಿಸಿದ್ದ ಆಸಾಮಿಯೊಬ್ಬ ಮೂರನೇ ಬಾರಿಯೂ ಯಾಮಾರಿಸಲು ಬಂದು ಸಿಕ್ಕಿ ಬಿದ್ದಿದ್ದಾನೆ.

Vijaya Karnataka 12 Jun 2019, 5:00 am
ಹುಣಸೂರು (ಮೈಸೂರು ಜಿಲ್ಲೆ): ಚಿನ್ನಾಭರಣದ ಅಂಗಡಿಯಲ್ಲಿ ಮಾಲೀಕನ ಕಣ್ತಪ್ಪಿಸಿ ಎರಡು ಬಾರಿ ಒಡವೆ ಅಪಹರಿಸಿದ್ದ ಆಸಾಮಿಯೊಬ್ಬ ಮೂರನೇ ಬಾರಿಯೂ ಯಾಮಾರಿಸಲು ಬಂದು ಸಿಕ್ಕಿ ಬಿದ್ದಿದ್ದಾನೆ.
Vijaya Karnataka Web the thief who came to steal 3 times in jewellery shop arrested
ಚಿನ್ನದಂಗಡಿಯಲ್ಲಿ 3ನೇ ಬಾರಿ ಕದಿಯಲು ಬಂದು ಸಿಕ್ಕಿಬಿದ್ದ ಕಳ್ಳ !


ತಾಲೂಕಿನ ಹನಗೋಡು ಹೋಬಳಿಯ ದೊಡ್ಡಹೆಜ್ಜೂರು ಗ್ರಾಮದ ಶಿವರಾಜು ಎಂಬುವವರ ಮಗ ಸಿದ್ದರಾಜು ಬಂಧಿತ ಆರೋಪಿ.

ನಗರದ ಜೆ.ಎಲ್‌.ಬಿ ರಸ್ತೆಯಲ್ಲಿರುವ ಪಾಯಲ್‌ ಜುವೆಲರ್ಸ್‌ಗೆ ಜೂ.6ರಂದು ಬಂದ ಸಿದ್ದರಾಜು ಒಡವೆ ಖರೀದಿಸುವ ನೆಪದಲ್ಲಿ ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು ಮೂರು ಚಿನ್ನದ ಡಾಲರ್‌ಗಳನ್ನು ಕದ್ಯೊಯ್ದಿದ್ದ. ಜೂ.8ರಂದು ಮತ್ತೆ ಬಂದು ನನಗೆ ಡಾಲರ್‌ ಬೇಡ ಉಂಗುರ ಕೊಳ್ಳುತ್ತೇನೆಂದು ಹೇಳಿದ್ದರಿಂದ ಸಿದ್ದರಾಜು ಮಾತನ್ನು ನಂಬಿದ ಅಂಗಡಿ ಮಾಲೀಕ ಉಂಗುರಗಳನ್ನು ತೋರಿಸಿದ್ದರು. ಈ ವೇಳೆ ಮಾಲೀಕ ಮುಖೇಶ್‌ ಗಮನ ಬೇರೆಡೆ ಸೆಳೆದು ಅಂದು ಸಹ ಎರಡು ಉಂಗುರಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ.

ಗಿರಾಕಿಗಳು ಹೊರ ಹೋದ ನಂತರ ಎರಡು ಉಂಗುರ ನಾಪತ್ತೆಯಾಗಿದ್ದನ್ನು ಗಮನಿಸಿದ ಮಾಲೀಕ ಮುಖೇಶ್‌. ಸಿದ್ದರಾಜುವಿನ ಮೇಲೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿ ಆತನ ಬರುವಿಕೆಗಾಗಿ ಕಾದಿದ್ದರು. ಎರಡು ದಿನಗಳ ಬಳಿಕ(ಜೂ.10ರಂದು) ಅದೇ ಅಂಗಡಿಗೆ ಬಂದ ಸಿದ್ದರಾಜುವನ್ನು ಮುಖೇಶ್‌ ಹಿಡಿದುಕೊಳ್ಳಲು ಯತ್ನಿಸಿದರೂ ತಪ್ಪಿಸಿಕೊಂಡು ಬೈಕಿನಲ್ಲಿ ಪರಾರಿಯಾಗಲು ಮುಂದಾಗುತ್ತಿದ್ದಂತೆ ಕೂಡಲೇ ಮುಖೇಶ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಮುಖ್ಯಪೇದೆ ಜಗದೀಶ್‌ ಹಾಗೂ ರವಿ ಅವರು ಸಿದ್ದರಾಜುವನ್ನು ಬೆನ್ನಟ್ಟಿ ಲಕ್ಷ್ಮೇವಿಲಾಸ್‌ ವೃತ್ತದ ಬಳಿ ಬಂಧಿಸಿದರು. ವಿಚಾರಣೆಗೊಳಪಡಿಸಿದ ವೇಳೆ ಕದ್ದಿದ್ದ ಆಭರಣಗಳನ್ನು ಹನಗೋಡಿನ ಗಿರವಿ ಅಂಗಡಿಯಲ್ಲಿ ಇಟ್ಟಿರುವುದನ್ನು ಒಪ್ಪಿಕೊಂಡ ಮೇರೆಗೆ, ಆತನ ಬೈಕ್‌ ಹಾಗೂ ಚಿನ್ನಾಭರಣವನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ