ಆ್ಯಪ್ನಗರ

ಯುವಕ ನೇಣಿಗೆ ಶರಣು

ಪಟ್ಟಣದ ಯುವಕನೊಬ್ಬ ಇಲ್ಲಿನ ಚಾಮರಾಜ ಬಲದಂಡೆ ನಾಲೆಯ ಕೆಳಭಾಗದ ಖಾಸಗಿ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡನು.

Vijaya Karnataka 15 Aug 2019, 10:08 pm
ಕೃಷ್ಣರಾಜನಗರ : ಪಟ್ಟಣದ ಯುವಕನೊಬ್ಬ ಇಲ್ಲಿನ ಚಾಮರಾಜ ಬಲದಂಡೆ ನಾಲೆಯ ಕೆಳಭಾಗದ ಖಾಸಗಿ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡನು.
Vijaya Karnataka Web the young man surrenders
ಯುವಕ ನೇಣಿಗೆ ಶರಣು


ಪಟ್ಟಣದ 7ನೇ ರಸ್ತೆ ನಿವಾಸಿ ಬಾಳೆಹಣ್ಣು ವ್ಯಾಪಾರಿ ಕೃಷ್ಣ ಎಂಬುವವರ ಮಗ ವೆಂಕಟೇಶ್‌(25) ಮೃತ. ವೃತ್ತಿಯಲ್ಲಿ ಚಾಲಕನಾಗಿದ್ದ ವೆಂಕಟೇಶ ಅವಿವಾಹಿತನಾಗಿದ್ದ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

ಪಟ್ಟಣದ ಹಾಸನ ರಸ್ತೆಯ ನಡುವೆ ಹಾದುಹೋಗಿರುವ ಚಾಮರಾಜ ಬಲದಂಡೆ ನಾಲೆಯ ಕೆಳಗಿರುವ ತನ್ನ ಗದ್ದೆಯಲ್ಲಿನ ನೀರು ನೋಡಲು ಗದ್ದೆಯ ಮಾಲೀಕ ಬೆಳಗ್ಗೆ ಎದ್ದು ಎಂದಿನಂತೆ ಹೋದಾಗ ತನ್ನ ಗದ್ದೆಯಲ್ಲಿರುವ ಹುಣಸೆ ಮರದಲ್ಲಿ ಮೃತದೇಹವೊಂದು ನೇತಾಡುತ್ತಿರುವುದನ್ನು ಕಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಪೊಲೀಸರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ನೋಡಿದಾಗ ವ್ಯಕ್ತಿ ಗುರುತು ಪತ್ತೆಯಾಗಿ ಮನೆಯವರಿಗೆ ತಿಳಿಸಲಾಯಿತು. ಮೃತದೇಹದ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು. ಮೃತ ವೆಂಕಟೇಶನ ತಂದೆ ನೀಡಿದ ದೂರಿನ ಮೇರೆಗೆ ಕೆಆರ್‌ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ