ಆ್ಯಪ್ನಗರ

ರಂಗಭೂಮಿ ಬದುಕಿನ ಮಾರ್ಗ ಕಲಿಸುತ್ತದೆ: ಪ್ರಸನ್ನ

ಇಂದಿನ ಮಕ್ಕಳು ಪಠ್ಯ ಪುಸ್ತಕ ಬಿಟ್ಟು ಶೈಕ್ಷಣಿಕ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಹೇಳಿದರು.

ವಿಕ ಸುದ್ದಿಲೋಕ 15 Jul 2017, 9:00 am

-ಸುಬ್ಬಣ್ಣ ಸ್ಮರಣಾರ್ಥ ಅಂತಾರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ

Vijaya Karnataka Web theater teaches the way to life prasanna
ರಂಗಭೂಮಿ ಬದುಕಿನ ಮಾರ್ಗ ಕಲಿಸುತ್ತದೆ: ಪ್ರಸನ್ನ

ಮೈಸೂರು: ಇಂದಿನ ಮಕ್ಕಳು ಪಠ್ಯ ಪುಸ್ತಕ ಬಿಟ್ಟು ಶೈಕ್ಷಣಿಕ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಹೇಳಿದರು.

ರಾಮಕೃಷ್ಣನಗರದ ನಟನ ರಂಗ ಶಾಲೆ ವತಿಯಿಂದ ಮೂರು ದಿನಗಳ ಕಾಲ ಆಯೋಜಿಸಿರುವ 'ಸುಬ್ಬಣ್ಣ ಸ್ಮರಣಾರ್ಥ ಅಂತಾರಾಷ್ಟ್ರೀಯ ನಾಟಕೋತ್ಸವ'ವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

'' ಬದುಕಿಗೂ, ಮನರಂಜನೆಗೂ ವ್ಯತ್ಯಾಸವಿಲ್ಲದಂತಾಗಿದೆ. ರಂಗಮಂದಿರ ಕಟ್ಟುವುದರಿಂದ ಆಗುವ ಉಪಯೋಗಗಳೇನು ಎಂದು ಜನರು ಪ್ರಶ್ನಿಸುವ ಸ್ಥಿತಿ ತಲುಪಿದೆ. ಮಕ್ಕಳು ರಂಗಭೂಮಿಯಲ್ಲಿ ತೊಡಗಿಸಿಕೊಂಡರೆ ಬದುಕನ್ನು ನೋಡಲು, ಕಲಿಯಲು ಹಾಗೂ ಅನುಭವಿಸಲು ಸಾಧ್ಯವಾಗುತ್ತದೆ. ಕಲೆಯಿಂದ ಜೀವನದಲ್ಲಿ ಉತ್ಸಾಹ ಮೂಡುತ್ತದೆ. ಶೈಕ್ಷಣಿಕ ರಂಗಭೂಮಿಯಿಂದ ಹವ್ಯಾಸಿ ರಂಗಭೂಮಿ ಬೆಳೆದಿದ್ದು, ಇಂದು ಎಲ್ಲರೂ ಕನ್ನಡ ರಂಭೂಮಿಯತ್ತ ತಿರುಗಿ ನೋಡುವಂತಾಗಿದೆ,'' ಎಂದು ಹೇಳಿದರು.

''ಟಿವಿ, ಮೊಬೈಲ್‌ಗಳಲ್ಲಿ ಸಿಗುವ ಮನರಂಜನೆಗಳಿಂದ ಮನಸ್ಸು ಹಾಳಾಗುತ್ತದೆ. ಕ್ರಿಯಾಶೀಲತೆ ಕ್ಷೀಣಿಸುತ್ತದೆ. ಇಂದು ಅನೇಕ ಲೇಖಕರು, ನಾಟಕಕಾರರು, ಚಿತ್ರಕಾರರು ತಮ್ಮ ವೃತ್ತಿಯನ್ನು ಬಿಟ್ಟು ಬದುಕಿನತ್ತ ಆಸಕ್ತಿ ತೋರುತ್ತಿದ್ದಾರೆ. ಕಲೆಯಲ್ಲಿ ತೊಡಗಿದವರು ತಮ್ಮ ವೈಯುಕ್ತಿಕ ಬದುಕನ್ನೇ ಮರೆತು ಹೋಗುತ್ತಾರೆ. ಬದುಕಿಗೆ ಮೊದಲ ಆದ್ಯತೆ ನೀಡಬೇಕು. ಇದಕ್ಕೆಲ್ಲ ಶೈಕ್ಷಣಿಕ ರಂಗಭೂಮಿ ಸರಿಯಾದ ದಾರಿ ತೋರಿಸುತ್ತದೆ,'' ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ 'ಡೈರಿ ಆಫ್‌ ಎ ಕಾಕ್ರೋಚ್‌' ಎಂಬ ಇಂಗ್ಲಿಷ್‌ ನಾಟಕ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ನಟ ಮಂಡ್ಯ ರಮೇಶ್‌, ರಂಗಾಯಣ ನಿರ್ದೇಶಕಿ ಬಾಗೀರಥಿ ಬಾಯಿ ಕದಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಎಂ.ಎಸ್‌.ಅರ್ಚನಾ, ನಾಟಕಕಾರ ಡಿ.ಎಸ್‌.ಚೌಗುಲರ, ಮಂಡ್ಯ ರಮೇಶ್‌ ಅವರ ತಂದೆ ಎಲ್‌.ಸುಬ್ರಹ್ಮಣ್ಯ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ