ಆ್ಯಪ್ನಗರ

ಲಕ್ಷಾಂತರ ಮೌಲ್ಯದ ಮದ್ಯ ಕಳವು

ಮದ್ಯದಂಗಡಿಯ ಚಾವಣಿ ಮುರಿದು ಲಕ್ಷಾಂತರ ರೂ. ಮೌಲ್ಯದ ಮದ್ಯವನ್ನು ಕದ್ದು ಪರಾರಿಯಾಗಿರುವ ಘಟನೆ ತಾಲೂಕಿನ ತಗಡೂರು ಗ್ರಾಮದ ಹೊರವಲಯದಲ್ಲಿ ಜರುಗಿದೆ.

Vijaya Karnataka 5 Aug 2019, 5:00 am
ನಂಜನಗೂಡು: ಮದ್ಯದಂಗಡಿಯ ಚಾವಣಿ ಮುರಿದು ಲಕ್ಷಾಂತರ ರೂ. ಮೌಲ್ಯದ ಮದ್ಯವನ್ನು ಕದ್ದು ಪರಾರಿಯಾಗಿರುವ ಘಟನೆ ತಾಲೂಕಿನ ತಗಡೂರು ಗ್ರಾಮದ ಹೊರವಲಯದಲ್ಲಿ ಜರುಗಿದೆ.
Vijaya Karnataka Web theft of liquor
ಲಕ್ಷಾಂತರ ಮೌಲ್ಯದ ಮದ್ಯ ಕಳವು


ಎನ್‌.ಎಂ.ಕೃಷ್ಣ ಎಂಬುವರಿಗೆ ಸೇರಿದ ಮದ್ಯದಂಗಡಿಗೆ ಶನಿವಾರ ರಾತ್ರಿ ದಾಳಿಯಿಟ್ಟ ಖದೀಮರು ರೋಲಿಂಗ್‌ ಷೆಟರ್‌ ಬಾಗಿಲು ಒಡೆಯಲು ಮುಂದಾಗಿದ್ದಾರೆ. ಪ್ರಯತ್ನ ಫಲಿಸದೇ ಇದ್ದಾಗ ಚಾವಣಿಯ ಶೀಟ್‌ನ್ನು ಮುರಿದು ಒಳನುಗ್ಗಿ 61 ಬಾಕ್ಸ್‌ನಲ್ಲಿದ್ದ ಸುಮಾರು 2.25 ಲಕ್ಷ ರೂ. ಮೌಲ್ಯದ ಮದ್ಯ ಹಾಗೂ ಕೌಂಟರ್‌ನಲ್ಲಿದ್ದ 10 ಸಾವಿರ ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ. ಇನ್ನು ಕಳ್ಳತನ ನಡೆಸುವ ವೇಳೆ ಸಿಸಿ ಕ್ಯಾಮೆರಾವನ್ನು ಜಖಂಗೊಳಿಸಿದ್ದಾರೆ.

ಭಾನುವಾರ ಬೆಳಗ್ಗೆ ಅಂಗಡಿ ತೆರೆಯಲು ವ್ಯವಸ್ಥಾಪಕ ಕಿರಣ್‌ ಬಂದಾಗ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಡಿವೈಎಸ್ಪಿ ಸಿ.ಮಲ್ಲಿಕ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಶೇಖರ್‌, ಪಿಎಸ್‌ಐ ರವಿಕುಮಾರ್‌ ಭೇಟಿ ನೀಡಿದ್ದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತಪಾಸಣೆ ನಡೆಸಿದರು. ಘಟನೆ ಕುರಿತು ವ್ಯವಸ್ಥಾಪಕ ಕಿರಣ್‌ ದೊಡ್ಡಕವಲಂದೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ