ಬಂದಂತಮ್ಮ ಕಾಳಮ್ಮ ದೇಗುಲದಲ್ಲಿ ಕಳವು
ದೇವಸ್ಥಾನದ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು, ನಗದು ಸೇರಿದಂತೆ 3.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ.
Vijaya Karnataka 30 Jan 2019, 5:00 am
ಮೈಸೂರು : ದೇವಸ್ಥಾನದ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು, ನಗದು ಸೇರಿದಂತೆ 3.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ.
ಕುವೆಂಪುನಗರದ ಬಂದಂತಮ್ಮ ಕಾಳಮ್ಮ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಕಳ್ಳತನವಾಗಿದೆ.
ರಾತ್ರಿ 1 ಗಂಟೆ ಸಮಯದಲ್ಲಿ ದೇಗುಲದ ಭದ್ರತಾ ಸಿಬ್ಬಂದಿ ಚೆನ್ನಪ್ಪ ಅವರು ಶೌಚಾಲಯಕ್ಕೆ ತೆರಳಿದ್ದಾಗ ಹೊರಗಿನಿಂದ ಚಿಲಕ ಹಾಕಿದ ಖದೀಮರು, ದೇವಸ್ಥಾನ ಬೀಗ ಹೊಡೆದು ಒಳ ನುಗ್ಗಿ, ಮೂರು ಕಾಣಿಕೆ ಹುಂಡಿ ಹೊಡೆದು ಅದರಲ್ಲಿದ್ದ 12 ಸಾವಿರ ರೂ. ನಗದು ಮತ್ತು ದೇವಿಯ ಮೈಮೇಲಿದ್ದ 75 ಗ್ರಾಂನ ಮಾಂಗಲ್ಯ ಸರ, 60 ಗ್ರಾಂನ ಚಿನ್ನದ ಸರವನ್ನು ಕದ್ದೊಯ್ದಿದ್ದಾರೆ. ಬಳಿಕ ಶೌಚಾಲಯದ ಚಿಲಕ ತೆಗೆದು ಪರಾರಿಯಾಗಿದ್ದಾರೆ. ಹೊರ ಬಂದ ಭದ್ರತಾ ಸಿಬ್ಬಂದಿ, ಕೂಗಿಕೊಳ್ಳುವಷ್ಟರಲ್ಲಿ ಕಳ್ಳರ ತಂಡ ಪರಾರಿಯಾಗಿದೆ.
ಸರಸ್ವತಿಪುರಂ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.
ದೇವಸ್ಥಾನಕ್ಕೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದರೂ ಅದು ಸರಿಯಾಗಿ ಕಾರ್ಯ ನಿರ್ವಹಿಸಿದೇ ಇದ್ದುದ್ದರಿಂದ ಕಳ್ಳರ ಪತ್ತೆ ಪೊಲೀಸರಿಗೆ ತೊಡಕಾಗಿದೆ.
ದೇವಸ್ಥಾನ ಅಧ್ಯಕ್ಷರಾದ ಕೊಪ್ಪಲು ರಾಜಣ್ಣ ನೀಡಿದ ದೂರಿನ ಮೇರೆಗೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುವೆಂಪುನಗರದ ಬಂದಂತಮ್ಮ ಕಾಳಮ್ಮ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಕಳ್ಳತನವಾಗಿದೆ.
ರಾತ್ರಿ 1 ಗಂಟೆ ಸಮಯದಲ್ಲಿ ದೇಗುಲದ ಭದ್ರತಾ ಸಿಬ್ಬಂದಿ ಚೆನ್ನಪ್ಪ ಅವರು ಶೌಚಾಲಯಕ್ಕೆ ತೆರಳಿದ್ದಾಗ ಹೊರಗಿನಿಂದ ಚಿಲಕ ಹಾಕಿದ ಖದೀಮರು, ದೇವಸ್ಥಾನ ಬೀಗ ಹೊಡೆದು ಒಳ ನುಗ್ಗಿ, ಮೂರು ಕಾಣಿಕೆ ಹುಂಡಿ ಹೊಡೆದು ಅದರಲ್ಲಿದ್ದ 12 ಸಾವಿರ ರೂ. ನಗದು ಮತ್ತು ದೇವಿಯ ಮೈಮೇಲಿದ್ದ 75 ಗ್ರಾಂನ ಮಾಂಗಲ್ಯ ಸರ, 60 ಗ್ರಾಂನ ಚಿನ್ನದ ಸರವನ್ನು ಕದ್ದೊಯ್ದಿದ್ದಾರೆ. ಬಳಿಕ ಶೌಚಾಲಯದ ಚಿಲಕ ತೆಗೆದು ಪರಾರಿಯಾಗಿದ್ದಾರೆ. ಹೊರ ಬಂದ ಭದ್ರತಾ ಸಿಬ್ಬಂದಿ, ಕೂಗಿಕೊಳ್ಳುವಷ್ಟರಲ್ಲಿ ಕಳ್ಳರ ತಂಡ ಪರಾರಿಯಾಗಿದೆ.
ಸರಸ್ವತಿಪುರಂ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.
ದೇವಸ್ಥಾನಕ್ಕೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದರೂ ಅದು ಸರಿಯಾಗಿ ಕಾರ್ಯ ನಿರ್ವಹಿಸಿದೇ ಇದ್ದುದ್ದರಿಂದ ಕಳ್ಳರ ಪತ್ತೆ ಪೊಲೀಸರಿಗೆ ತೊಡಕಾಗಿದೆ.
ದೇವಸ್ಥಾನ ಅಧ್ಯಕ್ಷರಾದ ಕೊಪ್ಪಲು ರಾಜಣ್ಣ ನೀಡಿದ ದೂರಿನ ಮೇರೆಗೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.