ಆ್ಯಪ್ನಗರ

ಬಣ್ಣದ ಗೀಳು ಇದ್ದವರಿಗೆ ಬದುಕಿನಲ್ಲಿ ಗೋಳು ಇರಲ್ಲ

ಬಣ್ಣದ ಗೀಳು ಇದ್ದವರಿಗೆ ಬದುಕಿನಲ್ಲಿ ಗೋಳು ಇರುವುದಿಲ್ಲ ಎಂದು ಹಿರಿಯ ಚಲನಚಿತ್ರ ನಟ ರಮೇಶ್‌ ಭಟ್‌ ಅಭಿಪ್ರಾಯಪಟ್ಟರು.

Vijaya Karnataka 15 Nov 2018, 5:00 am
ಮೈಸೂರು : ಬಣ್ಣದ ಗೀಳು ಇದ್ದವರಿಗೆ ಬದುಕಿನಲ್ಲಿ ಗೋಳು ಇರುವುದಿಲ್ಲ ಎಂದು ಹಿರಿಯ ಚಲನಚಿತ್ರ ನಟ ರಮೇಶ್‌ ಭಟ್‌ ಅಭಿಪ್ರಾಯಪಟ್ಟರು.
Vijaya Karnataka Web those with color craze do not have a problem in life
ಬಣ್ಣದ ಗೀಳು ಇದ್ದವರಿಗೆ ಬದುಕಿನಲ್ಲಿ ಗೋಳು ಇರಲ್ಲ


ನಗರದ ಸರಸ್ವತಿಪುರಂ ಜೆಎಸ್‌ಎಸ್‌ ಮಹಿಳಾ ಕಾಲೇಜಿನಲ್ಲಿ ಬುಧವಾರ ಜೆಎಸ್‌ಎಸ್‌ ಮಹಾವಿದ್ಯಾಪೀಠ, ಜೆಎಸ್‌ಎಸ್‌ ಕಲಾ ಮಂಟಪ ಸಂಯುಕ್ತಾಶ್ರಯದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ 'ಜೆಎಸ್‌ಎಸ್‌ ರಂಗೋತ್ಸವ-2018' ಉದ್ಘಾಟಿಸಿ ಮಾತನಾಡಿದರು.

''ನಾನು ಹೆಚ್ಚು ಮಾತುಗಾರನಲ್ಲ. ಅಲ್ಲದೇ ಹೆಚ್ಚು ಕಲಿತವನು ಅಲ್ಲ. ಆದರೆ ಬಾಲ್ಯದಲ್ಲಿ ನನಗಿದ್ದ ನಾಟಕದ ಆಸಕ್ತಿ, ಅಭಿನಯ ನನ್ನ ಬದುಕಿನ ದಿಕ್ಕನ್ನೇ ಬದಲಿಸಿತು. ಅಭಿನಯ ನನ್ನ ಕೈ ಹಿಡಿಯಿತು. ಹೆಚ್ಚು ಅಂಕಗಳಿಸದೇ ಫೇಲಾಗುತ್ತಿದ್ದ ನನ್ನನ್ನು ಶಿಕ್ಷಕರು, ನೋಡಲು ಚೆನ್ನಾಗಿದ್ದಾನೆ, ನಾಟಕ ಮಾಡುತ್ತೇನೆ ಎಂದು ಬೆನ್ನು ತಟ್ಟಿ ಪಾಸು ಮಾಡಿದರು. ಹೀಗೆ ಶಿಕ್ಷಕರು ನನಗೆ ಪ್ರೋತ್ಸಾಹ ನೀಡಿದ್ದರಿಂದ ಸಿನಿಮಾ ರಂಗದಲ್ಲಿ ಈ ಮಟ್ಟಿಗೆ ಬೆಳೆಯಲು ಸಹಾಯ ಮಾಡಿತು,'' ಎಂದು ನೆನಪಿಸಿಕೊಂಡರು.

''ಪ್ರತಿಯೊಬ್ಬರು ತಾನು ಯಾರು, ತನ್ನ ಸಾಮರ್ಥ್ಯ‌ವೇನು ಎಂಬುದನ್ನು ಪ್ರಚುರ ಪಡಿಸುವ ಮೂಲಕ ಎಲ್ಲರನ್ನು ಸೆಳೆಯಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಕೇವಲ ವಿದ್ಯೆಯಿಂದ ಮಾತ್ರ ಪ್ರಭಾವಿ ವ್ಯಕ್ತಿಯಾಗಲು ಅಥವಾ ಸೆಲಬ್ರಿಟಿಯಾಗಲು ಸಾಧ್ಯವಿಲ್ಲ, ಅದಕ್ಕೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಕೂಡ ಮುಖ್ಯ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು,'' ಎಂದು ಸಲಹೆ ನೀಡಿದರು.

''ಶಿಕ್ಷಣದಿಂದ ಎಂತಹ ಒಳ್ಳೆಯ ಕೆಲಸ, ಸಂಬಳವನ್ನು ಪಡೆಯಬಹುದು. ಆದರೆ ಪಠ್ಯೇತರ ಚಟುವಟಿಕೆಗಳಾದ ನಾಟಕ, ಸಂಗೀತ, ನೃತ್ಯದಂತಹ ಕಲೆಗಳು ನಮ್ಮ ಬದುಕಿನ ಸ್ಥಾನಮಾನವನ್ನು ಹೆಚ್ಚಿಸಲಿದ್ದು, ಗೌರವಕ್ಕೆ ಪಾತ್ರರಾಗುವಂತೆ ಮಾಡಲಿವೆ. ಆದ್ದರಿಂದ ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಹೆಚ್ಚಿನ ಆಸಕ್ತಿ ವಹಿಸಿ ಕಲಿಯುವ ಮೂಲಕ ಯಶಸ್ಸು ಸಾಧಿಸಬೇಕು,'' ಎಂದು ಸಲಹೆ ನೀಡಿದರು.

ಜೆಎಸ್‌ಎಸ್‌ ಮಹಾ ವಿದ್ಯಾಪೀಠದ ಕಾರ್ಯದರ್ಶಿ ಪ್ರೊ.ಮೊರಬದ ಮಲ್ಲಿಕಾರ್ಜುನ, ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ಡಾ.ಡಿ.ಎಂ.ಮಹೇಂದ್ರ ಮೂರ್ತಿ, ಆರ್‌.ಎಸ್‌.ಕುಮಾರ್‌, ಚಂದ್ರಶೇಖರಾಚಾರ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ