ಆ್ಯಪ್ನಗರ

ಪಿರಿಯಾಪಟ್ಟಣ: ಚೀನಾ ವಸ್ತು ಸುಟ್ಟು ಹಾಕಿ ಟಿಬೆಟಿಯನ್ನರ ಆಕ್ರೋಶ

ಈಗಾಗಲೇ ದೇಶದಲ್ಲಿ 5 ಪ್ರಮುಖ ಟಿಬೆಟನ್ ಎನ್‌ಜಿಒಗಳು ಈ ಆಂದೋಲನವನ್ನು ಚುರುಕುಗೊಳಿಸುವ ಕಾರ್ಯದಲ್ಲಿ ತೊಡಗಿವೆ. ಚೀನಾದಲ್ಲಿ 2022ರಲ್ಲಿ ಒಲಿಂಪಿಕ್‌ ಕ್ರೀಡಾಕೂಟವನ್ನು ನಡೆಸುವುದನ್ನು ಸಹ ನಾವು ಪ್ರಬಲವಾಗಿ ವಿರೋಧಿಸುತ್ತಿದ್ದೇವೆ ಎಂದು ತಿಳಿಸಿದರು.

Vijaya Karnataka Web 2 Oct 2020, 5:49 pm
ಮೈಸೂರು: ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಸುಡುವ ಮೂಲಕ ಭಾರತದೊಂದಿಗೆ ಗಡಿ ತಂಟೆ ಮಾಡುತ್ತಿರುವುದನ್ನು ವಿರೋಧಿಸಿ ಮತ್ತು ಕೊರೊನಾ ಪ್ರಪಂಚದಾದ್ಯಂತ ಹರಡಲು ಕಾರಣವಾಗಿರುವುದನ್ನು ಖಂಡಿಸಿದರು.
Vijaya Karnataka Web ಟಿಬೆಟಿಯನ್ನರ ಪ್ರತಿಭಟನೆ
ಟಿಬೆಟಿಯನ್ನರ ಪ್ರತಿಭಟನೆ


ಟಿಬೆಟನ್ ಮಾರುಕಟ್ಟೆ ಪ್ರದೇಶದಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಟಿಬೆಟ್ ಸಂಘಟನೆ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಘಟನೆಯ ಮುಖಂಡರಾದ ಸೋನಂ ಮಾತನಾಡಿ, ಚೀನಾ ವಸ್ತುಗಳನ್ನು ಬಹಿಷ್ಕರಿಸುವುದನ್ನು ಆನ್‌ಲೈನ್ ಆಂದೋಲನದ ಮೂಲಕ ಮತ್ತು ಅಂತರ ಕಾಯ್ದುಕೊಂಡು ಚೀನಾ ವಸ್ತುಗಳನ್ನು ಸುಟ್ಟು ಹಾಕುವ ಮೂಲಕ ನಮ್ಮ ವಿರೋಧವನ್ನು ದಾಖಲಿಸಲಾಗುತ್ತಿದೆ ಎಂದರು.

ಈಗಾಗಲೇ ದೇಶದಲ್ಲಿ 5 ಪ್ರಮುಖ ಟಿಬೆಟನ್ ಎನ್‌ಜಿಒಗಳು ಈ ಆಂದೋಲನವನ್ನು ಚುರುಕುಗೊಳಿಸುವ ಕಾರ್ಯದಲ್ಲಿ ತೊಡಗಿವೆ. ಚೀನಾದಲ್ಲಿ 2022ರಲ್ಲಿ ಒಲಿಂಪಿಕ್‌ ಕ್ರೀಡಾಕೂಟವನ್ನು ನಡೆಸುವುದನ್ನು ಸಹ ನಾವು ಪ್ರಬಲವಾಗಿ ವಿರೋಧಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ತೆಂಜಿನ್ ಡೋಲ್ಮಾ, ಫೆಮಾ ಪುರ್ಬು, ನ್ಯಾಮ್ಗಲ್ ಸೆರಿಂಗ್, ಯಂಗ್ ಡೋಪ್ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ