ಆ್ಯಪ್ನಗರ

ಎಂಎಲ್‌ಎ ಎಲೆಕ್ಷನ್ನೇ ಸುಸ್ತಾಗಿದೆ, ಎಂಪಿ ಚುನಾವಣೆ ಸಹವಾಸ ಬೇಡ: ಜಿಟಿಡಿ

ಎಂಎಲ್‌ಎ ಚುನಾವಣೆ ಎದುರಿಸಿ ಸುಸ್ತಾಗಿದೆ. ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ನಾನಾಗಲಿ, ಮಗನಾಗಲಿ ಸ್ಪರ್ಧಿಸುವುದಿಲ್ಲ ಎಂದು ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

Vijaya Karnataka 5 Feb 2019, 5:00 am
ಮೈಸೂರು: ಎಂಎಲ್‌ಎ ಚುನಾವಣೆ ಎದುರಿಸಿ ಸುಸ್ತಾಗಿದೆ. ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ನಾನಾಗಲಿ, ಮಗನಾಗಲಿ ಸ್ಪರ್ಧಿಸುವುದಿಲ್ಲ ಎಂದು ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
Vijaya Karnataka Web tired to the mla election do not want mp election gtd
ಎಂಎಲ್‌ಎ ಎಲೆಕ್ಷನ್ನೇ ಸುಸ್ತಾಗಿದೆ, ಎಂಪಿ ಚುನಾವಣೆ ಸಹವಾಸ ಬೇಡ: ಜಿಟಿಡಿ


ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಪುತ್ರ ಜಿ.ಡಿ.ಹರೀಶ್‌ಗೌಡರನ್ನು ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಸುವಂತೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಮೂರು ತಿಂಗಳ ಹಿಂದೆಯೇ ಸೂಚಿಸಿದ್ದರು. ಆದರೆ ನಾನು ವಿಧಾನಸಭಾ ಚುನಾವಣೆ ಎದುರಿಸಿ ಸುಸ್ತಾಗಿದ್ದೇನೆ. ಸದ್ಯಕ್ಕೆ ಯಾವ ಚುನಾವಣೆಯ ಗೋಜಿಗೆ ಹೋಗುವುದಿಲ್ಲ ಎಂದು ತಿಳಿಸಿದ್ದೇನೆ,'' ಎಂದರು.

ಸಿದ್ದುಗೆ ಕ್ಷೇತ್ರದ ಮೇಲೆ ಪ್ರೀತಿ

ಸಿದ್ದರಾಮಯ್ಯ ಅವರು ಇಂದಿಗೂ ಚಾಮುಂಡೇಶ್ವರಿ ಕ್ಷೇತ್ರದ ಸೋಲನ್ನು ನೆನಪಿಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ''ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಮೇಲೆ ಎಲ್ಲಿಲ್ಲದ ಪ್ರೀತಿಯಿದೆ. ಈ ಕ್ಷೇತ್ರದಿಂದಲೇ ತಾಲೂಕು ಬೋರ್ಡ್‌ ಸದಸ್ಯರಾಗಿ, ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದರು. ಇದರಿಂದ ಕ್ಷೇತ್ರದೊಂದಿಗೆ ವೈಯಕ್ತಿಕ ಸಂಬಂಧವನ್ನು ಇಟ್ಟುಕೊಂಡಿದ್ದರು. ಆದರೆ ಬಾದಾಮಿ ಕ್ಷೇತ್ರದ ಜನರು ಗೆಲ್ಲಿಸಿದರು, ಚಾಮುಂಡೇಶ್ವರಿ ಕ್ಷೇತ್ರದ ಜನತೆ ಸೋಲಿಸಿದರೆಂಬ ಕೊರಗು ಅವರಲ್ಲಿದೆ. ಮಾತೃ ವಾತ್ಸಲ್ಯ ಕ್ಷೇತ್ರದ ಜನತೆ ಮೇಲಿದೆ. ಅದಕ್ಕಾಗಿ ಪದೇ ಪದೆ ಈ ಕ್ಷೇತ್ರದ ಸೋಲನ್ನು ನೆನಪಿಸಿಕೊಳ್ಳುತ್ತಿದ್ದಾರೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ