ಆ್ಯಪ್ನಗರ

ಇಂದಿನ ಹೂಡಿಕೆ ನಾಳಿನ ಉಳಿತಾಯ

ಇಂದು ದುಡಿದ ಹಣದಲ್ಲಿ ನಾಳೆಯ ನೆಮ್ಮದಿಯ ಜೀವನಕ್ಕಾಗಿ, ಮಕ್ಕಳ ಭವಿಷ್ಯಕ್ಕಾಗಿ ಉಳಿತಾಯ ಮಾಡಬೇಕೆಂಬುದು ಪ್ರತಿಯೊಬ್ಬರ ಹೆಬ್ಬಯಕೆ. ಆದರೆ, ಉಳಿತಾಯ ಹೇಗೆ ಮಾಡಬೇಕು? ಎಲ್ಲಿ, ಹೇಗೆ ಹೂಡಿಕೆ ಮಾಡಬೇಕು? ಎಲ್ಲಿ ಹೂಡಿಕೆ ಮಾಡಿದರೆ ನಮ್ಮ ಹಣ ಸೇಫ್‌? ಎಂಬುದು ಹಣ ಹೂಡಿಕೆ ಮಾಡುವ ಪ್ರತಿಯೊಬ್ಬರ ಪ್ರಶ್ನೆಯಾಗಿದೆ.

Vijaya Karnataka 29 Oct 2018, 10:02 pm
ಮೈಸೂರು: ಇಂದು ದುಡಿದ ಹಣದಲ್ಲಿ ನಾಳೆಯ ನೆಮ್ಮದಿಯ ಜೀವನಕ್ಕಾಗಿ, ಮಕ್ಕಳ ಭವಿಷ್ಯಕ್ಕಾಗಿ ಉಳಿತಾಯ ಮಾಡಬೇಕೆಂಬುದು ಪ್ರತಿಯೊಬ್ಬರ ಹೆಬ್ಬಯಕೆ. ಆದರೆ, ಉಳಿತಾಯ ಹೇಗೆ ಮಾಡಬೇಕು? ಎಲ್ಲಿ, ಹೇಗೆ ಹೂಡಿಕೆ ಮಾಡಬೇಕು? ಎಲ್ಲಿ ಹೂಡಿಕೆ ಮಾಡಿದರೆ ನಮ್ಮ ಹಣ ಸೇಫ್‌? ಎಂಬುದು ಹಣ ಹೂಡಿಕೆ ಮಾಡುವ ಪ್ರತಿಯೊಬ್ಬರ ಪ್ರಶ್ನೆಯಾಗಿದೆ.
Vijaya Karnataka Web todays investment is tomorrows savings
ಇಂದಿನ ಹೂಡಿಕೆ ನಾಳಿನ ಉಳಿತಾಯ


ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೂ ಮಾರುಕಟ್ಟೆ ಏರಿಳಿತದಿಂದ ಏನಾಗುತ್ತದೆಯೋ ಎಂಬ ಆತಂಕವೂ ಇದೆ. ಹೀಗಾಗಿ ಹೂಡಿಕೆಗೆ ಮ್ಯೂಚುಯಲ್‌ ಫಂಡ್‌ ಸುರಕ್ಷಿತ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.

ಮ್ಯೂಚುಯಲ್‌ ಫಂಡ್‌ನಲ್ಲಿ ಪ್ರತಿ ತಿಂಗಳು ಹೂಡಿಕೆಗೆ ಅವಕಾಶ ಇದೆಯೇ? ಎಷ್ಟು ಮೊತ್ತವನ್ನು ಹೂಡಿಕೆ ಮಾಡಬಹುದು? ಎಂಬ ಪ್ರಶ್ನೆಗಳು ಎಲ್ಲರಲ್ಲೂ ಉದ್ಭವಿಸುತ್ತದೆ. ಈ ಹಿನ್ನೆಲೆಯಲ್ಲಿ ಹೂಡಿಕೆ ಕುರಿತಾದ ಅವಕಾಶಗಳ ಮಾಹಿತಿ ಒದಗಿಸಲು 'ವಿಜಯ ಕರ್ನಾಟಕ' ಪತ್ರಿಕೆಯು ಆದಿತ್ಯ ಬಿರ್ಲಾ ಸನ್‌ ಲೈಫ್‌ ಮ್ಯೂಚುಯಲ್‌ ಫಂಡ್‌ ಸಹಯೋಗದೊಂದಿಗೆ ಆರ್ಥಿಕ ಸಂವಾದ ಕಾರ‍್ಯಕ್ರಮ ಏರ್ಪಡಿಸಿದೆ.

ನ.3ರಂದು ಶನಿವಾರ ಮೈಸೂರಿನ ದೇವರಾಜ ಮೊಹಲ್ಲಾ ಬಳಿ ಇರುವ ದಿ ಕೋರಂ ಹೋಟೆಲ್‌ನಲ್ಲಿ 'ಇಂದಿನ ಹೂಡಿಕೆ ನಾಳಿನ ಉಳಿತಾಯ' ಕಾರ್ಯಾಗಾರವು ಸಂಜೆ 6 ರಿಂದ 8 ಗಂಟೆವರೆಗೆ ನಡೆಯಲಿದೆ. ತಜ್ಞರು ಪಾಲ್ಗೊಂಡು ಸಣ್ಣ ಹೂಡಿಕೆ ಯೋಜನೆಗಳ ಉಪಯೋಗದ ಕುರಿತು ಉಪಯುಕ್ತ ಮಾಹಿತಿ, ಮಾರ್ಗದರ್ಶನ ನೀಡುವರು.

ಗಳಿಸಿದ ಹಣವನ್ನು ಹೂಡಿಕೆ ಮಾಡಿ ಮತ್ತಷ್ಟು ಬೆಳೆಸುವ ಹಾಗೂ ನಾಳೆಗಾಗಿ ಹಣ ಉಳಿಸಲು ಬಯಸುವವರು ಕಾರ‍್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಉಚಿತ ಪ್ರವೇಶವಿರುತ್ತದೆ.

ಯಾವಾಗ?: ನ.3ರಂದು

ಕಾರ್ಯಾಗಾರ ನಡೆಯುವ ಸ್ಥಳ:

ಸ್ಥಳ: ದಿ ಕೋರಂ ಹೋಟೆಲ್‌

ವಿನೋಬಾ ರಸ್ತೆ, ಕಲಾಮಂದಿರ ಸಮೀಪ, ದೇವರಾಜ ಮೊಹಲ್ಲಾ

ಮೈಸೂರು- 570008

ಸಮಯ: ಸಂಜೆ 6 ರಿಂದ ರಾತ್ರಿ 8 ರವರೆಗೆ

ನೋಂದಣಿ ಮಾಡಲು ಮಿಸ್‌ ಕಾಲ್‌ ಕೊಡಿ: 01246194186

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ