ಮಣಿಕಂಠ ಸಿ.ಆರ್.
ಚುಂಚನಕಟ್ಟೆ (ಮೈಸೂರು): ಲಾಕ್ಡೌನ್ ಸಡಿಲಿಕೆ ಬಳಿಕ ಇತಿಹಾಸ ಪ್ರಸಿದ್ಧ ಚುಂಚನಕಟ್ಟೆ ಈಗ ಜನರನ್ನು ಆಕರ್ಷಿಸುತ್ತಿದೆ. ಆದರೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಮಾಯವಾಗಿದೆ. ಇದರಿಂದ ಕೊರೊನಾ ಆತಂಕ ಎದುರಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುಂಚನಕಟ್ಟೆ ಗ್ರಾಮದಲ್ಲಿ ತೇತ್ರಾಯುಗದ ಶ್ರೀರಾಮ ದೇಗುಲ, ಅದರಂಚಲ್ಲಿ ಕಾವೇರಿ ನದಿ ಹರಿಯುತ್ತಿದ್ದು, ಧನುಷ್ಕೋಟಿ ಜಲಪಾತ ಧುಮ್ಮಿಕ್ಕುತ್ತಿದೆ. ಇಲ್ಲಿಗೆ ಸಾವಿರಾರು ಪ್ರವಾಸಿಗರು ಬರುತ್ತಿದ್ದಾರೆ. ಆದರೆ ಮಾಸ್ಕ್ ಧರಿಸದೆ ಮತ್ತು ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳುತ್ತಿಲ್ಲ. ಇದರಿಂದ ಕೊರೊನಾ ಸೋಂಕು ಹರಡುವ ಭೀತಿ ಮೂಡಿದೆ.
ಪ್ರವಾಸಿ ತಾಣ: ಮಳೆಗಾಲದಲ್ಲಿ ಕಾವೇರಿ ಧನುಷ್ಕೋಟಿ ಜಲಪಾತದ ರಮಣೀಯ ದೃಶ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಾ ಕುಟುಂಬದ ಸದಸ್ಯರು, ಸ್ನೇಹಿತರು, ನವ ವಿವಾಹಿತರು ಹಾಗೂ ಯುವಕ, ಯುವತಿಯರು ಸೆಲ್ಫಿ ತೆಗೆದುಕೊಂಡು ಆವರಣದಲ್ಲಿ ಸಂಭ್ರಮಿಸುವುದು ಸಾಮಾನ್ಯವಾಗಿದೆ.
ಅಶಿಸ್ತೇ ಕೊರೊನಾ ಮೂಲ..! ಸೋಂಕಿತರಲ್ಲಿ ಶೇ.50ರಷ್ಟು ಜನ ಮಾಸ್ಕ್ ಧರಿಸುತ್ತಿರಲಿಲ್ಲ..!
ಅಧಿಕಾರಿಗಳಿಗೆ ಸವಾಲ್: ಇಲ್ಲಿ ನಿಯಮ ಪಾಲನೆ ಮಾಹಿತಿ ನೀಡುವ ಇಲಾಖೆಯ ಯಾವೊಬ್ಬ ಸಿಬ್ಬಂದಿಯೂ ಇಲ್ಲ. ಮಕ್ಕಳು ಮತ್ತು ವೃದ್ಧರ ನಿರ್ಬಂಧ ಸೇರಿದಂತೆ ಸರಕಾರದ ನಿಯಮಗಳನ್ನು ಸ್ವಯಂ ಪ್ರೇರಿತರಾಗಿ ಪರಿಪಾಲಿಸುವುದು ಇಲ್ಲಿ ಕನಸಿನ ಮಾತಾಗಿದೆ. ಇನ್ನೊಂದೆಡೆ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷಿಸಿದರೆ ಸೋಂಕು ಹರಡುವ ಹಾಟ್ಸ್ಪಾಟ್ ಆಗುವುದರಲ್ಲಿ ಸಂಶಯವಿಲ್ಲಎಂಬುದು ಸ್ಥಳೀಯರ ಆತಂಕವಾಗಿದೆ.
ಬುಲೆಟ್ ನಾಪತ್ತೆ ಕೇಸ್ ತಂದ ಆಪತ್ತು..! ಪೊಲೀಸ್ ಪೇದೆಗೆ ಕೊರೊನಾ, 22 ಅಧಿಕಾರಿಗಳ ಕ್ವಾರಂಟೈನ್
ಪ್ರವಾಸಿ ಮಿತ್ರ ಇಲ್ಲ: ಪ್ರವಾಸಿಗರಿಗೆ ಇಲ್ಲಿನ ಸ್ಥಳ ಪುರಾಣ ಮಾಹಿತಿ, ಸಾರ್ವಜನಿಕರ ಸುರಕ್ಷತೆ, ಸ್ವಚ್ಛತೆ, ಭದ್ರತೆ ಸೇರಿದಂತೆ ಇನ್ನಿತರೆ ಅನುಕೂಲಕ್ಕಾಗಿ ಸಿಬ್ಬಂದಿ ನೇಮಿಸಲಾಗಿತ್ತು. ಆದರೆ ಐದಾರು ತಿಂಗಳಿನಿಂದ ಸಿಬ್ಬಂದಿ ಇಲ್ಲ. ಇದರಿಂದ ಪ್ರವಾಸಿಗರು ಸೌಲಭ್ಯಕ್ಕಾಗಿ ಪರದಾಡುವಂತಾಗಿದೆ.
ಇತ್ತೀಚಿಗೆ ಚುಂಚನಕಟ್ಟೆಗೆ ಬರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ ಬೆರಳೆಣಿಕೆಯಷ್ಟು ಮಂದಿ ಸರಕಾರದ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಕೆಲವರಿಗಂತೂ ಇದರ ಪರಿವೇ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತು ಮುಂದೆ ಆಗುವ ಅನಾಹುತವನ್ನು ತಪ್ಪಿಸಬೇಕಿದೆ ಎಂದು ಚುಂಚನಕಟ್ಟೆ ಗ್ರಾಮಸ್ಥ ಶೇಖರ್ ಸಿ.ವಿ. ಆಗ್ರಹಿಸಿದ್ದಾರೆ.
ಮೈಸೂರಿಗರಿಗೆ ಕೊರೊನಾಘಾತ: ಒಂದೇ ದಿನಕ್ಕೆ ದಾಖಲಾಯ್ತು 22 ಪ್ರಕರಣಗಳು
ಚುಂಚನಕಟ್ಟೆ (ಮೈಸೂರು): ಲಾಕ್ಡೌನ್ ಸಡಿಲಿಕೆ ಬಳಿಕ ಇತಿಹಾಸ ಪ್ರಸಿದ್ಧ ಚುಂಚನಕಟ್ಟೆ ಈಗ ಜನರನ್ನು ಆಕರ್ಷಿಸುತ್ತಿದೆ. ಆದರೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಮಾಯವಾಗಿದೆ. ಇದರಿಂದ ಕೊರೊನಾ ಆತಂಕ ಎದುರಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರವಾಸಿ ತಾಣ: ಮಳೆಗಾಲದಲ್ಲಿ ಕಾವೇರಿ ಧನುಷ್ಕೋಟಿ ಜಲಪಾತದ ರಮಣೀಯ ದೃಶ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಾ ಕುಟುಂಬದ ಸದಸ್ಯರು, ಸ್ನೇಹಿತರು, ನವ ವಿವಾಹಿತರು ಹಾಗೂ ಯುವಕ, ಯುವತಿಯರು ಸೆಲ್ಫಿ ತೆಗೆದುಕೊಂಡು ಆವರಣದಲ್ಲಿ ಸಂಭ್ರಮಿಸುವುದು ಸಾಮಾನ್ಯವಾಗಿದೆ.
ಅಶಿಸ್ತೇ ಕೊರೊನಾ ಮೂಲ..! ಸೋಂಕಿತರಲ್ಲಿ ಶೇ.50ರಷ್ಟು ಜನ ಮಾಸ್ಕ್ ಧರಿಸುತ್ತಿರಲಿಲ್ಲ..!
ಅಧಿಕಾರಿಗಳಿಗೆ ಸವಾಲ್: ಇಲ್ಲಿ ನಿಯಮ ಪಾಲನೆ ಮಾಹಿತಿ ನೀಡುವ ಇಲಾಖೆಯ ಯಾವೊಬ್ಬ ಸಿಬ್ಬಂದಿಯೂ ಇಲ್ಲ. ಮಕ್ಕಳು ಮತ್ತು ವೃದ್ಧರ ನಿರ್ಬಂಧ ಸೇರಿದಂತೆ ಸರಕಾರದ ನಿಯಮಗಳನ್ನು ಸ್ವಯಂ ಪ್ರೇರಿತರಾಗಿ ಪರಿಪಾಲಿಸುವುದು ಇಲ್ಲಿ ಕನಸಿನ ಮಾತಾಗಿದೆ. ಇನ್ನೊಂದೆಡೆ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷಿಸಿದರೆ ಸೋಂಕು ಹರಡುವ ಹಾಟ್ಸ್ಪಾಟ್ ಆಗುವುದರಲ್ಲಿ ಸಂಶಯವಿಲ್ಲಎಂಬುದು ಸ್ಥಳೀಯರ ಆತಂಕವಾಗಿದೆ.
ಬುಲೆಟ್ ನಾಪತ್ತೆ ಕೇಸ್ ತಂದ ಆಪತ್ತು..! ಪೊಲೀಸ್ ಪೇದೆಗೆ ಕೊರೊನಾ, 22 ಅಧಿಕಾರಿಗಳ ಕ್ವಾರಂಟೈನ್
ಪ್ರವಾಸಿ ಮಿತ್ರ ಇಲ್ಲ: ಪ್ರವಾಸಿಗರಿಗೆ ಇಲ್ಲಿನ ಸ್ಥಳ ಪುರಾಣ ಮಾಹಿತಿ, ಸಾರ್ವಜನಿಕರ ಸುರಕ್ಷತೆ, ಸ್ವಚ್ಛತೆ, ಭದ್ರತೆ ಸೇರಿದಂತೆ ಇನ್ನಿತರೆ ಅನುಕೂಲಕ್ಕಾಗಿ ಸಿಬ್ಬಂದಿ ನೇಮಿಸಲಾಗಿತ್ತು. ಆದರೆ ಐದಾರು ತಿಂಗಳಿನಿಂದ ಸಿಬ್ಬಂದಿ ಇಲ್ಲ. ಇದರಿಂದ ಪ್ರವಾಸಿಗರು ಸೌಲಭ್ಯಕ್ಕಾಗಿ ಪರದಾಡುವಂತಾಗಿದೆ.
ಇತ್ತೀಚಿಗೆ ಚುಂಚನಕಟ್ಟೆಗೆ ಬರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ ಬೆರಳೆಣಿಕೆಯಷ್ಟು ಮಂದಿ ಸರಕಾರದ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಕೆಲವರಿಗಂತೂ ಇದರ ಪರಿವೇ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತು ಮುಂದೆ ಆಗುವ ಅನಾಹುತವನ್ನು ತಪ್ಪಿಸಬೇಕಿದೆ ಎಂದು ಚುಂಚನಕಟ್ಟೆ ಗ್ರಾಮಸ್ಥ ಶೇಖರ್ ಸಿ.ವಿ. ಆಗ್ರಹಿಸಿದ್ದಾರೆ.
ಮೈಸೂರಿಗರಿಗೆ ಕೊರೊನಾಘಾತ: ಒಂದೇ ದಿನಕ್ಕೆ ದಾಖಲಾಯ್ತು 22 ಪ್ರಕರಣಗಳು