ಆ್ಯಪ್ನಗರ

ಪ್ರಯಾಣಿಕರ ಉಸ್ತುವಾರಿಗೆ ‘ಟ್ರೈನ್‌ ಕ್ಯಾಪ್ಟನ್‌’ ನೇಮಕ

ದೂರ ಚಲಿಸುವ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಪ್ರಯಾಣಿಕರ ಸಮಸ್ಯೆ ಆಲಿಸಲು, ಮೇಲುಸ್ತುವಾರಿ ವಹಿಸಲು ರೈಲ್ವೆ ಇಲಾಖೆ ‘ಟ್ರೈನ್‌ ಕ್ಯಾಪ್ಟನ್‌’ಗಳನ್ನು ನೇಮಿಸಿದೆ.

Vijaya Karnataka Web 14 Jul 2018, 8:05 am
ಮೈಸೂರು: ದೂರ ಚಲಿಸುವ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಪ್ರಯಾಣಿಕರ ಸಮಸ್ಯೆ ಆಲಿಸಲು, ಮೇಲುಸ್ತುವಾರಿ ವಹಿಸಲು ರೈಲ್ವೆ ಇಲಾಖೆ ‘ಟ್ರೈನ್‌ ಕ್ಯಾಪ್ಟನ್‌’ಗಳನ್ನು ನೇಮಿಸಿದೆ.
Vijaya Karnataka Web train


ಕ್ಯಾಪ್ಟನ್‌ಗಳು ತಾವು ಸಂಚರಿಸುವ ರೈಲುಗಾಡಿಗೆ ಸಂಬಂಧಿಸಿದ ನಾನಾ ವಿಭಾಗಗಳ ಅಂದರೆ ಮೆಕ್ಯಾನಿಕಲ್‌, ಎಲೆಕ್ಟ್ರಿಕಲ್‌, ಆಪರೇಷನ್ಸ್‌, ಸೆಕ್ಯುರಿಟಿ, ಕ್ಯಾಟರಿಂಗ್‌ ಮತ್ತು ಹೌಸ್‌ ಕೀಪಿಂಗ್‌ ಸರ್ವಿಸಸ್‌ ಸಿಬ್ಬಂದಿ ಸಂಪರ್ಕ ಹೊಂದಿರುತ್ತಾರೆ. ರೈಲು ಪ್ರಯಾಣದ ಅವಧಿಯಲ್ಲಿ ಪ್ರಯಾಣಿಕರಿಂದ ಬರುವ ದೂರುಗಳಿಗೆ ಸ್ಪಂದಿಸುತ್ತಾರೆ. ಹಿರಿಯ ಟಿಕೆಟ್‌ ತಪಾಸಣಾ ಮೇಲ್ವಿಚಾರಣಾ ಸದಸ್ಯರೊಬ್ಬರನ್ನು ಟ್ರೈನ್‌ ಕ್ಯಾಪ್ಟನ್‌ ಆಗಿ ನೇಮಿಸಲಾಗಿರುತ್ತದೆ.

ಸ್ವರ್ಣಜಯಂತಿ ಎಕ್ಸ್‌ಪ್ರೆಸ್‌, ವಾರಕೊಮ್ಮೆ ಸಂಚರಿಸುವ ಮೈಸೂರು-ದಾದರ್‌ ಶರಾವತಿ ಎಕ್ಸ್‌ ಪ್ರೆಸ್‌ ಹಾಗೂ ವಾರಕ್ಕೆರಡು ಬಾರಿ ಸಂಚರಿಸುವ ಮೈಸೂರು-ಅಜ್ಮೀರ್‌ ಎಕ್ಸ್‌ಪ್ರೆಸ್‌ನಲ್ಲಿ ‘ಕ್ಯಾಪ್ಟನ್‌’ ಸೇವೆ ಒದಗಿಸಲಾಗುತ್ತದೆ.

‘ಟ್ರೈನ್‌ ಕ್ಯಾಪ್ಟನ್‌’ ವಿಶಿಷ್ಟ ಬ್ಯಾಡ್ಜ್‌ ಮತ್ತು ಮೊಬೈಲ್‌ ಫೋನ್‌ನೊಂದಿಗೆ ರೈಲಿನಲ್ಲಿರುವ ಎಲ್ಲಾ ಸಿಬ್ಬಂದಿ ಸಂಪರ್ಕ ವಿವರ ಹೊಂದಿದ್ದು, ಶೀಘ್ರವಾಗಿ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂದು ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗರ್ಗ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರು ವಿಭಾಗದಲ್ಲಿ ಜು. 6ರಂದು ಮೈಸೂರು-ನಿಜಾಮುದ್ದೀನ್‌ ಸ್ವರ್ಣ ಜಯಂತಿ ಸೂಪರ್‌ ಫಾಸ್ಟ್‌ (ವಾರದ ಎಕ್ಸ್‌ ಪ್ರೆಸ್‌) ರೈಲಿನಲ್ಲಿ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿಯಲ್ಲಿ ಜಾರಿಗೊಳಿಸಿದ ಪ್ರಥಮ ರೈಲು ಇದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ