ಆ್ಯಪ್ನಗರ

ಬೆಳಗ್ಗೆ ಕದ್ದ ಮಧ್ಯಾಹ್ನ ಸಿಕ್ಕಿಬಿದ್ದ

ಮನೆಯೊಳಗೆ ನುಗ್ಗಿ ವೃದ್ಧೆ ಬಾಯಿಯನ್ನು ಬಟ್ಟೆಯಿಂದ ಮುಚ್ಚಿ ಆಕೆಯ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಖದೀಮನನ್ನು ಘಟನೆ ನಡೆದ ಐದು ಗಂಟೆಯೊಳಗೆ ಲಕ್ಷ್ಮೇಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

Vijaya Karnataka 22 Aug 2019, 5:00 am
ಮೈಸೂರು: ಮನೆಯೊಳಗೆ ನುಗ್ಗಿ ವೃದ್ಧೆ ಬಾಯಿಯನ್ನು ಬಟ್ಟೆಯಿಂದ ಮುಚ್ಚಿ ಆಕೆಯ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಖದೀಮನನ್ನು ಘಟನೆ ನಡೆದ ಐದು ಗಂಟೆಯೊಳಗೆ ಲಕ್ಷ್ಮೇಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web trapped in the afternoon
ಬೆಳಗ್ಗೆ ಕದ್ದ ಮಧ್ಯಾಹ್ನ ಸಿಕ್ಕಿಬಿದ್ದ


ಬನ್ನಿಮಂಟಪದ ನಿವಾಸಿ, ಹಣ್ಣಿನ ವ್ಯಾಪಾರಿ ರೆಹಮಾನ್‌ ಷರೀಫ್‌(28) ಬಂಧಿತನಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನ್ಯಾಯಾಲಯದ ಆವರಣದ ಬಳಿ ಹಣ್ಣಿನ ವ್ಯಾಪಾರಿ ಮಾಡಿಕೊಂಡಿರುವ ರೆಹಮಾನ್‌, ಚಾಮರಾಜ ಜೋಡಿ ರಸ್ತೆಯ ಮನುವನ ಪಾರ್ಕ್‌ ಬಳಿಯ ಪ್ರಭಾ ಎಂಬುವರ ಮನೆಯಲ್ಲಿ ಅವರ ತಾಯಿ ನಾಗರತ್ನ (87) ಅವರ ಮನೆಗೆ ನುಗ್ಗಿ ಚಿನ್ನಾಚರಣ ಕದ್ದು , ಪೊಲೀಸರ ಕಾರ್ಯಾಚರಣೆಯಿಂದ ಕೆಲವೇ ಗಂಟೆಗಳಲ್ಲಿ ಸಿಕ್ಕಿ ಬಿದ್ದಿದ್ದಾನೆ.

ಮನೆಯಲ್ಲಿ ನಾಗರತ್ನ ಅವರ ಹೊರತಾಗಿ ಉಳಿದವರೆಲ್ಲ ಬೆಳಗ್ಗೆ ವಾಕಿಂಗ್‌ ಹೋಗಿರುವುದನ್ನು ತಿಳಿದುಕೊಂಡಿದ್ದ ರೆಹಮಾನ್‌,ಬುಧವಾರ ಬೆಳಗ್ಗೆ 8.45ರ ವೇಳೆ ಮನೆಗೆ ನುಗ್ಗಿ ನಾಗರತ್ನ ಅವರ ಬಾಯಿಯನ್ನು ಬಟ್ಟೆಯಿಂದ ಬಿಗಿಯಾಗಿ ಮುಚ್ಚಿದ್ದಾನೆ. ಬಳಿಕ ಅವರ ಕೈಯಲ್ಲಿ ಇದ್ದ 100 ಗ್ರಾಂ ತೂಕದ 7 ಚಿನ್ನದ ಬಳೆಗಳನ್ನು ಆತನೇ ಬಿಚ್ಚಿಕೊಂಡು, ಅವರನ್ನು ದೂಡಿ ಪರಾರಿಯಾಗಿದ್ದ.

ಘಟನೆಯಿಂದ ಗಾಬರಿಗೊಂಡ ನಾಗರತ್ನ ಅವರು ನೆರೆಯವರಿಗೆ ವಿಷಯ ತಿಳಿಸಿದ್ದು, ಬಳಿಕ ಕುಟುಂಬದವರು ಬಂದಿದ್ದಾರೆ. ತಕ್ಷಣ ನಾಗರತ್ನ ಅವರ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ರಸ್ತೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು, ಈ ವೇಳೆ ಆ ರಸ್ತೆಯಲ್ಲಿ ಓಡಾಡಿದ ರೆಹಮಾನ್‌ ಮೇಲೆ ಅನುಮಾನ ಬಂದಿದೆ. ಆತನ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾಗ ರೆಹಮಾನ್‌ ಬಲ್ಲಾಳ್‌ ಸರ್ಕಲ್‌ನಲ್ಲಿ ಹಣ್ಣಿನ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ತಕ್ಷಣ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದು ಒಪ್ಪಿಕೊಂಡಿದ್ದಾನೆ.

ಬಂಧಿತನಿಂದ 4 ಲಕ್ಷ ಮೌಲ್ಯದ 7 ಚಿನ್ನದ ಬಳೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪತ್ತೆ ಕಾರ್ಯಾಚರಣೆಯಲ್ಲಿ ಲಕ್ಷ್ಮಿಪುರಂ ಪೊಲೀಸ್‌ ಇನ್ಸ್‌ಪೆಕ್ಟರ್‌ ಗಂಗಾಧರ್‌, ಪ್ರೋಬೆಷನರಿ ಪಿಎಸ್‌ಐ ಮಲ್ಲವ್ವ ಎಸ್‌.ಬಂಡಿ, ಎಎಸ್‌ಐ ಗೌರಿಶಂಕರಸ್ವಾಮಿ ಹಾಗೂ ಸಿಬ್ಬಂದಿಗಳಾದ ಎಚ್‌.ಸಿ ಉಮೇಶ್‌, ಪುಟ್ಟಸ್ವಾಮಿ, ಪಿಸಿಗಳಾದ ಸುದೀಪ್‌ ಕುಮಾರ್‌, ಮಧು, ಕಾರ್ತಿಕ್‌, ಸಿದ್ದಪ್ಪಾಜಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ