ಆ್ಯಪ್ನಗರ

ಸೆ.15ರಿಂದ ‘ತ್ರಿಮೂರ್ತಿ’ ದರ್ಶನ ಪ್ರವಾಸ

ಇಂಡಿಯನ್‌ ರೈಲ್ವೆ ಕ್ಯಾಟರಿಂಗ್‌ ಅಂಡ್‌ ಟೂರಿಸಂ ಕಾರ್ಪೊರೇಷನ್‌ ಲಿಮಿಟೆಡ್‌ (ಐಆರ್‌ಸಿಟಿಸಿ) ವತಿಯಿಂದ ಭಾರತ ದರ್ಶನ ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಪ್ಯಾಕೇಜು ಒಳಗೊಂಡಿರುವ ಪ್ರವಾಸದ ಯೋಜನೆ ಪ್ರಾರಂಭಿಸಿದೆ ಎಂದು ಸಂಸ್ಥೆಯ ಸ್ಥಳೀಯ ವ್ಯವಸ್ಥಾಪಕ ಇಮ್ರಾನ್‌ ಅಹ್ಮದ್‌ ತಿಳಿಸಿದರು.

Vijaya Karnataka 17 Aug 2018, 5:00 am
ಮೈಸೂರು : ಇಂಡಿಯನ್‌ ರೈಲ್ವೆ ಕ್ಯಾಟರಿಂಗ್‌ ಅಂಡ್‌ ಟೂರಿಸಂ ಕಾರ್ಪೊರೇಷನ್‌ ಲಿಮಿಟೆಡ್‌ (ಐಆರ್‌ಸಿಟಿಸಿ) ವತಿಯಿಂದ ಭಾರತ ದರ್ಶನ ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಪ್ಯಾಕೇಜು ಒಳಗೊಂಡಿರುವ ಪ್ರವಾಸದ ಯೋಜನೆ ಪ್ರಾರಂಭಿಸಿದೆ ಎಂದು ಸಂಸ್ಥೆಯ ಸ್ಥಳೀಯ ವ್ಯವಸ್ಥಾಪಕ ಇಮ್ರಾನ್‌ ಅಹ್ಮದ್‌ ತಿಳಿಸಿದರು.
Vijaya Karnataka Web trimurti darshan tour from september 15th
ಸೆ.15ರಿಂದ ‘ತ್ರಿಮೂರ್ತಿ’ ದರ್ಶನ ಪ್ರವಾಸ


ಸೆ.15ರಿಂದ 11 ದಿನಗಳ ತ್ರಿಮೂರ್ತಿ ದರ್ಶನ ಪ್ರವಾಸ ಆರಂಭವಾಗಲಿದ್ದು, ಪ್ರವಾಸದಲ್ಲಿ ಮಹಾಕಾಳೇಶ್ವರ, ಓಂಕಾರೇಶ್ವರ, ಜೈಪುರ, ಪುಷ್ಕರ್‌, ತ್ರಯಂಬಕೇಶ್ವರ, ಶಿರಡಿ, ಪಂಡರಾಪುರದ ಯಾತ್ರಾ ಸ್ಥಳಗಳ ಭೇಟಿ ನೀಡಲಾಗುವುದು. ಊಟ, ವಸತಿ ಪ್ರಯಾಣದ ಭತ್ಯೆ, ಪ್ರವೇಶ ದರ, ಪ್ರಯಾಣದ ವಿಮೆ ಒಳಗೊಂಡಂತೆ ಒಬ್ಬರಿಗೆ 10,820 ರೂ. ನಿಗದಿಪಡಿಸಲಾಗಿದೆ. ಇದರಂತೆ ಸೆ.11ರಂದು ಅಮೃತ್‌ ಸರ್‌-ಧರ್ಮಶಾಲಾ-ಕಾತ್ರ, ಅ.12ರಂದು ಅಂಡಮಾನ್‌, ಅ.16ರಂದು ಶಿಮ್ಲಾ ಮನಾಲಿ, ಚಂಡೀಗಢ ಮತ್ತು ಅಮೃತಸರ ಸೇರಿದಂತೆ ಪ್ರವಾಸ ಏರ್ಪಡಿಸಲಾಗಿದೆ,'' ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

''ಅಲ್ಲದೇ ಸೆ.28ರಂದು ಹೋಲಿಲ್ಯಾಂಡ್‌ (ಜೋರ್ಡಾನ್‌- ಇಸ್ರೇಲ್‌-ಈಜಿಪ್ಟ್‌), ಅ.12ರಂದು ಥಾಯ್‌ಲ್ಯಾಂಡ್‌, ಅ.13ರಂದು ಸಿಂಗಾಪುರ್‌ ಮತ್ತು ಮಲೇಷಿಯಾ ಹಾಗೂ ನ.21ರಂದು 6 ದಿನಗಳ ಶ್ರೀಲಂಕಾ ರಾಮಾಯಣ ಯಾತ್ರೆಯ ಅಂತಾರಾಷ್ಟ್ರೀಯ ವಿಮಾನ ಪ್ಯಾಕೇಜು ಪ್ರವಾಸಗಳನ್ನು ಏರ್ಪಡಿಸಲಾಗಿದೆ. ಯಾತ್ರೆಯಲ್ಲಿ ಪ್ರತಿ ಕೋಚ್‌ಗೆ ಒಬ್ಬ ವ್ಯವಸ್ಥಾಪಕ, ಪ್ರಾಥಮಿಕ ಚಿಕಿತ್ಸೆ, ಅವಶ್ಯವಿರುವವರಿಗೆ ವೈದ್ಯರು ಸಹ ಲಭ್ಯವಿರಲಿದ್ದಾರೆ. ಹಾಸನ, ಅರಸೀಕರೆ ಹಾಗೂ ಬೆಂಗಳೂರಿನಿಂದ ಪಿಕ್‌ ಅಪ್‌ ಪಾಯಿಂಟ್ಸ್‌ ಇವೆ,''ಎಂದು ತಿಳಿಸಿದರು.

''ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರಿಗೆ ಅತಿ ಕಡಿಮೆ ದರದಲ್ಲಿ ಉತ್ತಮ ಪ್ರವಾಸದ ಅನುಭವ ನೀಡಬೇಕೆನ್ನುವ ಉದ್ದೇಶದಿಂದ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ಈ ಪ್ರವಾಸದ ಲಾಭ ಪಡೆಯಲು ಮುಂಗಡ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದ್ದು, ವೈಬ್‌ಸೈಟ್‌ನಲ್ಲಿ ಬುಕ್ಕಿಂಗ್‌ ಮಾಡಬಹುದು. ಡಿಡಿಡಿ.ಜ್ಟ್ಚಿಠ್ಚಿಠಿಟ್ಠ್ಟಜಿsಞ.್ಚಟಞ.

ಪ್ರಾದೇಶಿಕ ವ್ಯವಸ್ಥಾಪಕ ಕಿಶೋರ್‌ ಸತ್ಯ, ವಲಯ ಅಧಿಕಾರಿ ಶಿವಕುಮಾರ್‌ ಇದ್ದರು.

ಮಾಹಿತಿಗೆ: ಮೈಸೂರು ರೈಲು ನಿಲ್ದಾಣ ದೂ. 0821-2426001, 9741421486, ಹುಬ್ಬಳ್ಳಿ ರೈಲು ನಿಲ್ದಾಣ ಮೊ. 9741421088, ಬೆಂಗಳೂರು ರೈಲು ನಿಲ್ದಾಣ ದೂ.080- 22960013, 9741429437.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ