3ರಂದು ಮೈಸೂರಿನಲ್ಲಿ ತುಳುನಾಟಕಗಳ ಗಮ್ಮತ್ತು
ಕರಾವಳಿ ಜಿಲ್ಲೆಗಳಲ್ಲಿ ತುಳು ನಾಟಕಗಳೆಂದರೆ ವಿಶೇಷ ಆಕರ್ಷಣೆ. ಹೊಸ ನಾಟಕ ಬಿಡುಗಡೆಯಾಯಿತೆಂದರೆ ಮನೆ ಮನೆಗಳಲ್ಲಿ ಅದರದ್ದೇ ಮಾತು. ಎಲ್ಲೇ ನಾಟಕ ಪ್ರದರ್ಶನವಾದರೂ ನಡೆದರೂ ಅಲ್ಲಿ ಜನ ಕಿಕ್ಕಿರಿದು ಸೇರುತ್ತಾರೆ. ತುಳುವಿನಲ್ಲಿ ಬಂದಿರುವ ಬಹುತೇಕ ಸಿನಿಮಾಗಳು ಕೂಡ ತುಳುನಾಟಕಗಳ ರೂಪಾಂತರ. ಅಷ್ಟರ ಮಟ್ಟಿಗೆ ತುಳುರಂಗಭೂಮಿ ಜನಮನ್ನಣೆ ಪಡೆದಿದೆ.
Vijaya Karnataka 2 Jun 2018, 5:00 am
ಹರಿಶ್ಚಂದ್ರ ದೇವರಮಾರು ಮೈಸೂರು
ಕರಾವಳಿ ಜಿಲ್ಲೆಗಳಲ್ಲಿ ತುಳು ನಾಟಕಗಳೆಂದರೆ ವಿಶೇಷ ಆಕರ್ಷಣೆ. ಹೊಸ ನಾಟಕ ಬಿಡುಗಡೆಯಾಯಿತೆಂದರೆ ಮನೆ ಮನೆಗಳಲ್ಲಿ ಅದರದ್ದೇ ಮಾತು. ಎಲ್ಲೇ ನಾಟಕ ಪ್ರದರ್ಶನವಾದರೂ ನಡೆದರೂ ಅಲ್ಲಿ ಜನ ಕಿಕ್ಕಿರಿದು ಸೇರುತ್ತಾರೆ. ತುಳುವಿನಲ್ಲಿ ಬಂದಿರುವ ಬಹುತೇಕ ಸಿನಿಮಾಗಳು ಕೂಡ ತುಳುನಾಟಕಗಳ ರೂಪಾಂತರ. ಅಷ್ಟರ ಮಟ್ಟಿಗೆ ತುಳುರಂಗಭೂಮಿ ಜನಮನ್ನಣೆ ಪಡೆದಿದೆ.
ತುಳು ನಾಟಕಗಳ ಜನಪ್ರಿಯತೆ ಎಷ್ಟರ ಮಟ್ಟಿಗೆ ಇದೆ ಎಂಬುದು ನಾಟಕ ಪ್ರದರ್ಶನವೊಂದಕ್ಕೆ ಹೋದಾಗಲೇ ವೇದ್ಯವಾಗುತ್ತದೆ. ಕಲಾವಿದರ ಪಂಚಿಂಗ್ ಡಯಲಾಗ್ಗಳೇ ತುಳು ನಾಟಕಗಳ ಪ್ರಮುಖ ಆಕರ್ಷಣೆ. ದೈನಂದಿನ ಜೀವನದ ಘಟನೆಗಳು, ಆಗುಹೋಗುಗಳನ್ನೇ ಕಥಾರೂಪಕ್ಕೆ ಇಳಿಸುವ ನಿರ್ದೇಶಕರು, ವೀಕ್ಷಕರನ್ನು ಮೂರು ಗಂಟೆಗಳ ಕಾಲ ಹಿಡಿದಿಡಲು ಬೇಕಾದ ಬಹುಪಾಲು ಕಥಾ ಹಂದರ ಹೆಣೆದಿರುತ್ತಾರೆ. ಹಾಸ್ಯದಲ್ಲೇ ತೇಲಿಸುವ ನಾಟಕ ಕೊನೆಯಲ್ಲಿ ಸಾಮಾಜಿಕ ಸಂದೇಶದೊಂದಿಗೆ ತಿರುವು ಪಡೆದುಕೊಳ್ಳುತ್ತದೆ. ಇನ್ನು ಕಲಾವಿದರ ಮನಮುಟ್ಟುವ ಅಭಿನಯ, ಸಂಭಾಷಣೆ, ಸಂಗೀತ ವಿಶೇಷವಾಗಿ ಗಮನಸೆಳೆಯುತ್ತದೆ. ಹಾಸ್ಯ ಕಲಾವಿದರ ವಿಭಿನ್ನ ಆಂಗಿಕ ನಟನೆ, ಚುರುಕಿನ ಸಂಭಾಷಣೆಗೆ ಹೊಟ್ಟೆ ಹುಣ್ಣಾಗುವಂತೆ ನಗದ ಕಲಾರಸಿಕರಿಲ್ಲ. ಹೀಗಾಗಿ ತುಳು ನಾಟಕಗಳ ಜನಪ್ರಿಯತೆ ಮುಂದೆ ಸಿನಿಮಾಗಳು ಕೂಡ ಮಂಕಾಗಿವೆ. ಇಂತಹ ಜನಪ್ರಿಯತೆಯ ಹಿನ್ನೆಲೆಯಿಂದಲೇ ತುಳು ನಾಟಕ ಕಲಾವಿದರಿಗೂ ಕರಾವಳಿ ಭಾಗದಲ್ಲಿ ವಿಶೇಷ ಮನ್ನಣೆ.
ತುಳು ರಂಗಭೂಮಿಯಲ್ಲಿ ಹತ್ತಾರು ನಾಟಕ ತಂಡಗಳಿವೆ. ತೆಲಿಕೆದ ಬೊಳ್ಳಿ ಎಂದೇ ಹೆಸರುವಾಸಿಯಾಗಿರುವ ದೇವದಾಸ್ ಕಾಪಿಕಾಡ್ ನೇತೃತ್ವದ ಚಾ ಪರ್ಕ ತಂಡ ವಿಶೇಷ ಜನ ಮನ್ನಣೆ ಪಡೆದ ತಂಡ. ಈ ತಂಡದ ಕಲಾವಿದರಿಂದಲೇ ಮೈಸೂರಿನ ದಕ್ಷಿಣ ಕನ್ನಡ ಜಿಲ್ಲಾ ಗೌಡ ಸಂಘ ವತಿಯಿಂದ ಮೈಸೂರಿನ ಕಲಾಮಂದಿರದಲ್ಲಿ ಜೂನ್ 3ರಂದು ತುಳು ಹಾಸ್ಯ ನಾಟಕಗಳಾದ ಕೊಡೆ ಬುಡ್ಪಾಲೆ (ಮಧ್ಯಾಹ್ನ 2 ಗಂಟೆಗೆ ) ಮತ್ತು ಬಂಗಾರ್ (ಸಂಜೆ 6 ಗಂಟೆಗೆ) ಎಂಬ ಎರಡು ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಖ್ಯಾತ ಹಾಸ್ಯ ಕಲಾವಿದ, ರಾಜ್ಯ ಪ್ರಶಸ್ತಿ ಪುರಸ್ಕೃತ ದೇವದಾಸ್ ಕಾಪಿಕಾಡ್ ಅವರು ಈ ನಾಟಕಗಳನ್ನು ರಚಿಸಿ, ನಟಿಸಿ, ನಿರ್ದೇಶನ ನೀಡಿದ್ದಾರೆ. ರಮಾ ಬಿ.ಸಿ.ರೋಡ್, ಬೋಜರಾಜ್ ವಾಮಂಜೂರು, ತಿಮ್ಮಪ್ಪ ಕುಲಾಲ, ಸತೀಶ್ ಬಂದಲೆ, ಸದಾಶಿವ ಅಮೀನ್, ರಿಚರ್ಡ್ ಪಿಂಟೋ ಮತ್ತೀತರ ಪ್ರಮುಖ ಕಲಾವಿದರು ರಂಗಭೂಮಿಕೆಯಲ್ಲಿದ್ದಾರೆ.
ಪ್ರವೇಶ ಟಿಕೆಟ್ಗಾಗಿ ಮೊ. 8147632535 ಅನ್ನು ಸಂಪರ್ಕಿಸಬಹುದು.
ತುಳುನಾಟಕಗಳನ್ನು ನೋಡಿದರೆ ಸಿಗುವ ಮಜಾನೇ ಬೇರೆ. ಪಂಚಿಂಗ್ ಡಯಲಾಗ್, ಹಾಸ್ಯವೇ ಪ್ರಧಾನವಾಗಿರುವ ಈ ನಾಟಕಗಳ ಕಥಾವಸ್ತುಗಳು ವಿಭಿನ್ನವಾಗಿರುತ್ತದೆ. ಹಾಗಾಗಿ ತುಳುವರು ಇಂತಹ ನಾಟಕಗಳನ್ನು ಯಾವುದೇ ಕಾರಣಕ್ಕೆ ಮಿಸ್ ಮಾಡುವುದಿಲ್ಲ.
-ಮೋಹನ್ ಗೌಡ ಕುಯಿಕ್ಕುಳಿ, ಮೈಸೂರು
ತುಳು ನಾಟಕಗಳ ಜನಪ್ರಿಯತೆಗೆ ತುಳು ಭಾಷೆಯ ಶ್ರೀಮಂತಿಕೆ ಒಂದು ಕಾರಣವಾದರೆ, ನುರಿತ ಕಲಾವಿದರ ಪಂಚಿಂಗ್ ಡಯಲಾಗ್, ಮನಮುಟ್ಟುವ ಅಭಿನಯಗಳು ಮತ್ತೊಂದು ಕಾರಣ. ಕನ್ನಡಕ್ಕಿಂತಲೂ ತುಳುರಂಗಭೂಮಿ ಹೆಚ್ಚು ಜನಮನ್ನಣೆ ಪಡೆದಿದೆ. ನನಗೂ ತುಳು ನಾಟಕಗಳನ್ನು ನೋಡುವುದೆಂದರೆ ತುಂಬಾ ಇಷ್ಟ.
-ಮೈಮ್ ರಮೇಶ್, ಹಿರಿಯ ರಂಗಕರ್ಮಿ
ಕರಾವಳಿ ಜಿಲ್ಲೆಗಳಲ್ಲಿ ತುಳು ನಾಟಕಗಳೆಂದರೆ ವಿಶೇಷ ಆಕರ್ಷಣೆ. ಹೊಸ ನಾಟಕ ಬಿಡುಗಡೆಯಾಯಿತೆಂದರೆ ಮನೆ ಮನೆಗಳಲ್ಲಿ ಅದರದ್ದೇ ಮಾತು. ಎಲ್ಲೇ ನಾಟಕ ಪ್ರದರ್ಶನವಾದರೂ ನಡೆದರೂ ಅಲ್ಲಿ ಜನ ಕಿಕ್ಕಿರಿದು ಸೇರುತ್ತಾರೆ. ತುಳುವಿನಲ್ಲಿ ಬಂದಿರುವ ಬಹುತೇಕ ಸಿನಿಮಾಗಳು ಕೂಡ ತುಳುನಾಟಕಗಳ ರೂಪಾಂತರ. ಅಷ್ಟರ ಮಟ್ಟಿಗೆ ತುಳುರಂಗಭೂಮಿ ಜನಮನ್ನಣೆ ಪಡೆದಿದೆ.
ತುಳು ನಾಟಕಗಳ ಜನಪ್ರಿಯತೆ ಎಷ್ಟರ ಮಟ್ಟಿಗೆ ಇದೆ ಎಂಬುದು ನಾಟಕ ಪ್ರದರ್ಶನವೊಂದಕ್ಕೆ ಹೋದಾಗಲೇ ವೇದ್ಯವಾಗುತ್ತದೆ. ಕಲಾವಿದರ ಪಂಚಿಂಗ್ ಡಯಲಾಗ್ಗಳೇ ತುಳು ನಾಟಕಗಳ ಪ್ರಮುಖ ಆಕರ್ಷಣೆ. ದೈನಂದಿನ ಜೀವನದ ಘಟನೆಗಳು, ಆಗುಹೋಗುಗಳನ್ನೇ ಕಥಾರೂಪಕ್ಕೆ ಇಳಿಸುವ ನಿರ್ದೇಶಕರು, ವೀಕ್ಷಕರನ್ನು ಮೂರು ಗಂಟೆಗಳ ಕಾಲ ಹಿಡಿದಿಡಲು ಬೇಕಾದ ಬಹುಪಾಲು ಕಥಾ ಹಂದರ ಹೆಣೆದಿರುತ್ತಾರೆ. ಹಾಸ್ಯದಲ್ಲೇ ತೇಲಿಸುವ ನಾಟಕ ಕೊನೆಯಲ್ಲಿ ಸಾಮಾಜಿಕ ಸಂದೇಶದೊಂದಿಗೆ ತಿರುವು ಪಡೆದುಕೊಳ್ಳುತ್ತದೆ. ಇನ್ನು ಕಲಾವಿದರ ಮನಮುಟ್ಟುವ ಅಭಿನಯ, ಸಂಭಾಷಣೆ, ಸಂಗೀತ ವಿಶೇಷವಾಗಿ ಗಮನಸೆಳೆಯುತ್ತದೆ. ಹಾಸ್ಯ ಕಲಾವಿದರ ವಿಭಿನ್ನ ಆಂಗಿಕ ನಟನೆ, ಚುರುಕಿನ ಸಂಭಾಷಣೆಗೆ ಹೊಟ್ಟೆ ಹುಣ್ಣಾಗುವಂತೆ ನಗದ ಕಲಾರಸಿಕರಿಲ್ಲ. ಹೀಗಾಗಿ ತುಳು ನಾಟಕಗಳ ಜನಪ್ರಿಯತೆ ಮುಂದೆ ಸಿನಿಮಾಗಳು ಕೂಡ ಮಂಕಾಗಿವೆ. ಇಂತಹ ಜನಪ್ರಿಯತೆಯ ಹಿನ್ನೆಲೆಯಿಂದಲೇ ತುಳು ನಾಟಕ ಕಲಾವಿದರಿಗೂ ಕರಾವಳಿ ಭಾಗದಲ್ಲಿ ವಿಶೇಷ ಮನ್ನಣೆ.
ತುಳು ರಂಗಭೂಮಿಯಲ್ಲಿ ಹತ್ತಾರು ನಾಟಕ ತಂಡಗಳಿವೆ. ತೆಲಿಕೆದ ಬೊಳ್ಳಿ ಎಂದೇ ಹೆಸರುವಾಸಿಯಾಗಿರುವ ದೇವದಾಸ್ ಕಾಪಿಕಾಡ್ ನೇತೃತ್ವದ ಚಾ ಪರ್ಕ ತಂಡ ವಿಶೇಷ ಜನ ಮನ್ನಣೆ ಪಡೆದ ತಂಡ. ಈ ತಂಡದ ಕಲಾವಿದರಿಂದಲೇ ಮೈಸೂರಿನ ದಕ್ಷಿಣ ಕನ್ನಡ ಜಿಲ್ಲಾ ಗೌಡ ಸಂಘ ವತಿಯಿಂದ ಮೈಸೂರಿನ ಕಲಾಮಂದಿರದಲ್ಲಿ ಜೂನ್ 3ರಂದು ತುಳು ಹಾಸ್ಯ ನಾಟಕಗಳಾದ ಕೊಡೆ ಬುಡ್ಪಾಲೆ (ಮಧ್ಯಾಹ್ನ 2 ಗಂಟೆಗೆ ) ಮತ್ತು ಬಂಗಾರ್ (ಸಂಜೆ 6 ಗಂಟೆಗೆ) ಎಂಬ ಎರಡು ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಖ್ಯಾತ ಹಾಸ್ಯ ಕಲಾವಿದ, ರಾಜ್ಯ ಪ್ರಶಸ್ತಿ ಪುರಸ್ಕೃತ ದೇವದಾಸ್ ಕಾಪಿಕಾಡ್ ಅವರು ಈ ನಾಟಕಗಳನ್ನು ರಚಿಸಿ, ನಟಿಸಿ, ನಿರ್ದೇಶನ ನೀಡಿದ್ದಾರೆ. ರಮಾ ಬಿ.ಸಿ.ರೋಡ್, ಬೋಜರಾಜ್ ವಾಮಂಜೂರು, ತಿಮ್ಮಪ್ಪ ಕುಲಾಲ, ಸತೀಶ್ ಬಂದಲೆ, ಸದಾಶಿವ ಅಮೀನ್, ರಿಚರ್ಡ್ ಪಿಂಟೋ ಮತ್ತೀತರ ಪ್ರಮುಖ ಕಲಾವಿದರು ರಂಗಭೂಮಿಕೆಯಲ್ಲಿದ್ದಾರೆ.
ಪ್ರವೇಶ ಟಿಕೆಟ್ಗಾಗಿ ಮೊ. 8147632535 ಅನ್ನು ಸಂಪರ್ಕಿಸಬಹುದು.
ತುಳುನಾಟಕಗಳನ್ನು ನೋಡಿದರೆ ಸಿಗುವ ಮಜಾನೇ ಬೇರೆ. ಪಂಚಿಂಗ್ ಡಯಲಾಗ್, ಹಾಸ್ಯವೇ ಪ್ರಧಾನವಾಗಿರುವ ಈ ನಾಟಕಗಳ ಕಥಾವಸ್ತುಗಳು ವಿಭಿನ್ನವಾಗಿರುತ್ತದೆ. ಹಾಗಾಗಿ ತುಳುವರು ಇಂತಹ ನಾಟಕಗಳನ್ನು ಯಾವುದೇ ಕಾರಣಕ್ಕೆ ಮಿಸ್ ಮಾಡುವುದಿಲ್ಲ.
-ಮೋಹನ್ ಗೌಡ ಕುಯಿಕ್ಕುಳಿ, ಮೈಸೂರು
ತುಳು ನಾಟಕಗಳ ಜನಪ್ರಿಯತೆಗೆ ತುಳು ಭಾಷೆಯ ಶ್ರೀಮಂತಿಕೆ ಒಂದು ಕಾರಣವಾದರೆ, ನುರಿತ ಕಲಾವಿದರ ಪಂಚಿಂಗ್ ಡಯಲಾಗ್, ಮನಮುಟ್ಟುವ ಅಭಿನಯಗಳು ಮತ್ತೊಂದು ಕಾರಣ. ಕನ್ನಡಕ್ಕಿಂತಲೂ ತುಳುರಂಗಭೂಮಿ ಹೆಚ್ಚು ಜನಮನ್ನಣೆ ಪಡೆದಿದೆ. ನನಗೂ ತುಳು ನಾಟಕಗಳನ್ನು ನೋಡುವುದೆಂದರೆ ತುಂಬಾ ಇಷ್ಟ.
-ಮೈಮ್ ರಮೇಶ್, ಹಿರಿಯ ರಂಗಕರ್ಮಿ