ಆ್ಯಪ್ನಗರ

ಹುಣಸೂರು: ರೈಲ್ವೆ ಹಳಿ ಬೇಲಿಯನ್ನೂ ಸಲೀಸಾಗಿ ದಾಟುತ್ತದೆ ಈ ಸಲಗ!

ಈ ಸಲಗವು ಬೇಕೆನಿಸಿದಾಗ ಆಹಾರವನ್ನು ಅರಸಿ ನಾಡಿಗೆ ನುಗ್ಗುತ್ತದೆ. ಈ ಪುಂಡಾನೆಗೆ ರೇಡಿಯೋ ಕಾಲರ್‌ ಅಳವಡಿಸಲಾಗಿದೆ. ಆದರೂ ಅರಣ್ಯ ಇಲಾಖೆ ಸಿಬ್ಬಂದಿಯ ಕಣ್ತಪ್ಪಿಸಿ ತಡೆಗೋಡೆ ದಾಟಿ ಹೊಟ್ಟೆತುಂಬಾ ತಿಂದುಂಡು ಮತ್ತೆ ಅದೇ ರೀತಿ ಬೇಲಿ ದಾಟಿ ಅರಣ್ಯ ಸೇರಿಕೊಳ್ಳುತ್ತಿದೆ.

Vijaya Karnataka 18 Nov 2021, 5:57 pm
ಹುಣಸೂರು (ಮೈಸೂರು): ಈ ಒಂಟಿಸಲಗಕ್ಕೆ ಗಟ್ಟಿ ಮುಟ್ಟಾದ ರೈಲ್ವೆ ಹಳಿ ಬೇಲಿಯೂ ಲೆಕ್ಕಕ್ಕಿಲ್ಲ. ನಾಗರಹೊಳೆ ಉದ್ಯಾನದಂಚಿನಲ್ಲಿ ನಿರ್ಮಿಸಿರುವ ಬೇಲಿಯನ್ನು ತನಗೆ ಬೇಕೆನಿಸಿದಾಗ ಸಲೀಸಾಗಿ ದಾಟಿ ನಾಡಿಗೆ ಬಂದು ಬೆಳೆ ತಿಂದು ಹೊಟ್ಟೆ ತುಂಬಿಸಿಕೊಂಡು ಮತ್ತೆ ಬೇಲಿ ದಾಟಿ ಕಾಡಿಗೆ ತೆರಳುತ್ತಾನೆ.
Vijaya Karnataka Web ಸಲಗ
ಸಲಗ


ನಾಗರಹೊಳೆ ಉದ್ಯಾನದ ವೀರನಹೊಸಳ್ಳಿ ವಲಯದ ವ್ಯಾಪ್ತಿಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಹುಣಸೂರು-ನಾಗರಹೊಳೆ ಮುಖ್ಯರಸ್ತೆಯ ಗುರುಪುರ ಟಿಬೆಟ್‌ ಕ್ಯಾಂಪ್‌ ಬಳಿಯ ಹಾಗೂ ನಾಗಾಪುರ ಪುನರ್ವಸತಿ ಕೇಂದ್ರದ ಎದುರಿನ ಉದ್ಯಾನದಂಚಿನಲ್ಲಿ ನಿರ್ಮಿಸಿರುವ ದೊಡ್ಡದಾದ ರೈಲ್ವೆ ಹಳಿ ಬೇಲಿಯನ್ನು ಕಾಡಾನೆ ಸಲೀಸಾಗಿ ದಾಟುತ್ತಿರುವ ದೃಶ್ಯವನ್ನು ಸ್ಥಳೀಯರು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಈಗ ವೈರಲ್‌ ಆಗಿದೆ.

ಚಾಮುಂಡಿಬೆಟ್ಟದಲ್ಲಿ ಮತ್ತೆ ಭೂ ಕುಸಿತ..! ಒಂದೇ ತಿಂಗಳ ಅವಧಿಯಲ್ಲಿ 4 ಬಾರಿ ಕುಸಿದ ಮಣ್ಣು

ಈ ಸಲಗವು ಚಾಕಚಕ್ಯತೆಯಿಂದ ಕಬ್ಬಿಣದ ತಡೆಗೋಡೆಯ ಮೇಲೆ ಮುಂಗಾಲನ್ನು ಇಟ್ಟು ಹತ್ತಿ ನಂತರ ಹೊಟ್ಟೆ ಸಹಾಯದಿಂದ ಹಿಂಬದಿಯ ಕಾಲುಗಳನ್ನು ಹೊರಚಾಚಿ ದಾಟುತ್ತಿರುವುದು ವಿಡಿಯೋದಲ್ಲಿದೆ. ಇತರೆ ಆನೆಗಳೂ ಈ ರೀತಿಯೇ ದಾಟಿ ಬರುವುದನ್ನು ಕಲಿತುಕೊಂಡಲ್ಲಿ ನಮ್ಮ ಪಾಡೇನು ಎಂದು ಕಾಡಂಚಿನ ಮಂದಿ ಆತಂಕ ವ್ಯಕ್ತಪಡಿಸಿದ್ದಾರೆ.

ಸಿಬ್ಬಂದಿ ಕಣ್ತಪ್ಪಿಸಿ ನುಸುಳುವ ಸಲಗ

ಸದಾ ಒಂಟಿಯಾಗಿಯೇ ಓಡಾಡುವ ಈ ಸಲಗವು ಬೇಕೆನಿಸಿದಾಗ ಆಹಾರವನ್ನು ಅರಸಿ ನಾಡಿಗೆ ನುಗ್ಗುತ್ತದೆ. ಈ ಪುಂಡಾನೆಗೆ ರೇಡಿಯೋ ಕಾಲರ್‌ ಅಳವಡಿಸಲಾಗಿದೆ. ಆದರೂ ಅರಣ್ಯ ಇಲಾಖೆ ಸಿಬ್ಬಂದಿಯ ಕಣ್ತಪ್ಪಿಸಿ ತಡೆಗೋಡೆ ದಾಟಿ ಹೊಟ್ಟೆತುಂಬಾ ತಿಂದುಂಡು ಮತ್ತೆ ಅದೇ ರೀತಿ ಬೇಲಿ ದಾಟಿ ಅರಣ್ಯ ಸೇರಿಕೊಳ್ಳುತ್ತಿದೆ. ಇದು ಅರಣ್ಯ ಇಲಾಖೆಯವರ ನಿದ್ದೆ ಗೆಡಿಸಿದೆ.

ಪುನೀತ್‌ಗೆ ಮುಡಿ ಸಮರ್ಪಿಸಿ ಅಭಿಮಾನಿಗಳ ಶ್ರದ್ಧಾಂಜಲಿ! ಅಪ್ಪುಗೆ ನಾನ್‌ವೆಜ್ ನೈವೇದ್ಯ

ಸೆರೆ ಹಿಡಿಯಲು ಆಗ್ರಹ

ಈ ಪುಂಡಾನೆಯು ಪ್ರತಿನಿತ್ಯ ಒಂದಲ್ಲ ಒಂದು ಕಡೆ ಕಾಡಿನಿಂದ ಹೊರ ಬಂದು ಉಪಟಳ ನೀಡುತ್ತಿದೆ. ಈಗಾಗಲೇ ಮಳೆಯಿಂದಾಗಿ ರೈತರು ಅಧಿಕ ಪ್ರಮಾಣದಲ್ಲಿಬೆಳೆ ಕಳೆದುಕೊಂಡಿದ್ದಾರೆ. ಈ ನಡುವೆ ಒಂಟಿ ಸಲಗ ಹಾವಳಿಯಿಂದ ಇದ್ದ ಬೆಳೆಯೂ ನಾಶವಾಗುತ್ತಿದೆ. ಹಾಗಾಗಿ ಕೂಡಲೇ ಅರಣ್ಯ ಇಲಾಖೆಯವರು ಪುಂಡಾನೆಯನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಉದ್ಯಾನದಂಚಿನ ಹಲವು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ