ಆ್ಯಪ್ನಗರ

ಚಿನ್ನಾಭರಣ ಮಾರಾಟ ಮಾಡುವುದಾಗಿ ವಂಚನೆ; ಮೈಸೂರಿನಲ್ಲಿ ಇಬ್ಬರು ಖದೀಮರ ಬಂಧನ

ಕುರುಪುಸ್ವಾಮಿ ಎಂಬುವವರು ತಮಿಳುನಾಡಿನ ಕೊಯಮತ್ತೂರಿನಲ್ಲಿ ಚಿನ್ನದ ಆಭರಣ ಗಳನ್ನು ತಯಾರಿಸುವ ವ್ಯವಹಾರ ಮಾಡಿಕೊಂಡಿದ್ದು, ಮೈಸೂರಿನಲ್ಲಿ ಚಿನ್ನದ ಆಭರಣಗಳನ್ನು ಮಾರಲು ಅ. 6ರಂದು ಮೈಸೂರಿಗೆ ಬಂದಿದ್ದರು. ಚಿನ್ನಾಭರಣಗಳನ್ನು ಮಾರಾಟ ಮಾಡಿಸಿಕೊಡುವುದಾಗಿ ಮರುಳು ಮಾತನಾಡಿ ಕುರುಪು ಸ್ವಾಮಿ ಅವರಿಂದ ಚಿನ್ನಾಭರಣಗಳನ್ನು ಪಡೆದು ಕೊಂಡಿದ್ದು, ಮಾರಾಟ ಮಾಡಿಸದೇ, ವಾಪಸ್‌ ಕೊಡದೇ ಮೋಸ ಮಾಡಿದ್ದರು.

Vijaya Karnataka Web 20 Oct 2020, 12:44 pm
ಮೈಸೂರು: ಚಿನ್ನಾಭರಣಗಳನ್ನು ಮಾರಾಟ ಮಾಡಿಸಿಕೊಡುವುದಾಗಿ ಹೇಳಿ ಚಿನ್ನ ಪಡೆದು ಮೋಸ ಮಾಡಿದ್ದ ಇಬ್ಬರು ಖದೀಮರನ್ನು ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web Police.
Picture used for representational purpose only


ಬಂಧಿತರಿಂದ 10 ಲಕ್ಷ ರೂ. ಮೌಲ್ಯದ 192 ಗ್ರಾಂ ತೂಕದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಕ್ಕಸಾಲಿಗರಾದ ಕೊಡಗಿನ ಸೋಮಶೇಖರ್‌(61), ಕೊಳ್ಳೇಗಾಲದ ರಘು(67) ಬಂಧಿತರಾಗಿದ್ದು, ಆರೋಪಿಗಳು ಚಿನ್ನಾಭರಣಗಳನ್ನು ಮಾರಾಟ ಮಾಡಿಸಿಕೊಡುವುದಾಗಿ ಹೇಳಿ ಚಿನ್ನ ಪಡೆದು ಮೋಸ ಮಾಡಿದ್ದರು. ಸದ್ಯ ಖದೀಮರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನೆರೆ ಪೀಡಿತರಿಗೆ ಸಾಂತ್ವನ ಹೇಳಿ ಕನ್ನಡದಲ್ಲೇ ದಸರಾ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ಕುರುಪುಸ್ವಾಮಿ ಎಂಬುವವರು ತಮಿಳುನಾಡಿನ ಕೊಯಮತ್ತೂರಿನಲ್ಲಿ ಚಿನ್ನದ ಆಭರಣ ಗಳನ್ನು ತಯಾರಿಸುವ ವ್ಯವಹಾರ ಮಾಡಿಕೊಂಡಿದ್ದು, ಮೈಸೂರಿನಲ್ಲಿ ಚಿನ್ನದ ಆಭರಣಗಳನ್ನು ಮಾರಲು ಅ. 6ರಂದು ಮೈಸೂರಿಗೆ ಬಂದಿದ್ದರು. ಮೈಸೂರಿನಲ್ಲಿ ಆರೋಪಿಗಳ ಪರಿಚಯವಾಗಿದೆ. ಚಿನ್ನಾಭರಣಗಳನ್ನು ಮಾರಾಟ ಮಾಡಿಸಿಕೊಡುವುದಾಗಿ ಮರುಳು ಮಾತನಾಡಿ ಕುರುಪು ಸ್ವಾಮಿ ಅವರಿಂದ ಚಿನ್ನಾಭರಣಗಳನ್ನು ಪಡೆದು ಕೊಂಡಿದ್ದು, ಮಾರಾಟ ಮಾಡಿಸದೇ, ವಾಪಸ್‌ ಕೊಡದೇ ಮೋಸ ಮಾಡಿದ್ದರು.

ಐತಿಹಾಸಿಕ ನಾಡಹಬ್ಬಕ್ಕೆ ಚಾಲನೆ; ಮೈಸೂರು ದಸರಾದಲ್ಲಿ ಆರು ಮಂದಿ ಕೊರೊನಾ ವಾರಿಯರ್ಸ್‌

ಈ ಕುರಿತು ಎಚ್ಚೆತ್ತ ಕುರುಪು ಸ್ವಾಮಿ ದೇವರಾಜ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ಕೊಂಡ ದೇವರಾಜ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ದೇವರಾಜ ಪೊಲೀಸ್‌ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಪ್ರಸನ್ನ ಕುಮಾರ್‌, ಎಸ್‌ಐ. ರಾಜು, ಎ.ಎಸ್‌.ಐ. ಉದಯ ಕುಮಾರ್‌, ಸಿಬ್ಬಂದಿ ಸೋಮಶೆಟ್ಟಿ, ವೇಣುಗೋಪಾಲ್‌, ಚಂದ್ರು, ನಂದೀಶ್‌, ವೀರೇಶ್‌ ಬಾಗೇವಾಡಿ ಕಾರ್ಯಾಚರಣೆಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ