ನಾಗರಾಜ್ ನವೀಮನೆ ಮೈಸೂರು
ಹುಲಿಗಳ ಆವಾಸ ಸ್ಥಾನವನ್ನು ವಿಸ್ತರಣೆ ಮಾಡುವ ಉದ್ದೇಶದಿಂದ ನಾಗರಹೊಳೆ ಅಭಯಾರಣ್ಯದಲ್ಲಿ 'ಬಫರ್ ಜೋನ್' ಪ್ರದೇಶವನ್ನು ಕಾಡಿಗೆ ಸೇರಿಸಿಕೊಳ್ಳಲಾಗುತ್ತಿದ್ದು, ಆ ಮೂಲಕ ಹುಲಿಗಳ ಸಂರಕ್ಷಣೆಗೆ ಹೆಚ್ಚು ನಿಗಾ ವಹಿಸಲಾಗುತ್ತಿದೆ.
ಹುಲಿ ಸಂಖ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನ ಪಡೆದಿದೆ. ಇದನ್ನು ಕಾಯ್ದುಕೊಳ್ಳುವ ಜತೆಗೆ ವನ್ಯಜೀವಿಗಳ ಸಂರಕ್ಷಣೆ ದೃಷ್ಟಿಯಿಂದ ನಾಗರಹೊಳೆ, ಮಲೆ ಮಹದೇಶ್ವರ ಅರಣ್ಯ ಪ್ರದೇಶ ಮತ್ತು ಭದ್ರಾ ಅರಣ್ಯ ಪ್ರದೇಶದಲ್ಲಿ ಹುಲಿಗಳ ಸರಹದ್ದು ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಾಡಿನ ಪಕ್ಕದಲ್ಲಿರುವ 'ಬಫರ್ ಜೋನ್' ಅನ್ನು ಅಭಿವೃದ್ಧಿಪಡಿಸುವ ಮೂಲಕ ಹುಲಿಗಳ ಸರಹದ್ದು ವಿಸ್ತರಿಸುವ ಯೋಜನೆ ಈಗಾಗಲೇ ಕಾರ್ಯಗತವಾಗಿದೆ. ಅಲ್ಲದೆ, ಕಳ್ಳಬೇಟೆ ತಡೆ ಶಿಬಿರ (ಆ್ಯಂಟಿ ಪೌಚಿಂಗ್ ಕ್ಯಾಂಪ್)ವನ್ನು ಮತ್ತಷ್ಟು ಚುರುಕುಗೊಳಿಸಿ, ಹುಲಿಗಳ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.
''ಹುಲಿ ಸಂತತಿ ವೃದ್ಧಿಸಬೇಕಾದರೆ ಅವುಗಳ ಆವಾಸ ಸ್ಥಾನ ಚೆನ್ನಾಗಿರಬೇಕು. ಜತೆಗೆ ಉತ್ತಮ ಆಹಾರ ಸಿಗುವಂತಿರಬೇಕು. ಸಸ್ಯಾಹಾರಿ ಪ್ರಾಣಿಗಳಾದ ಜಿಂಕೆ, ಕಡವೆ, ಕಾಟಿ ಹಾಗೂ ನೀರು ಚೆನ್ನಾಗಿ ಸಿಕ್ಕಿದರೆ ಹುಲಿಗಳು ನಿರಾಳವಾಗಿ ಬದುಕು ಸಾಗಿಸುತ್ತವೆ. ಸಸ್ಯಹಾರಿ ಪ್ರಾಣಿಗಳ ಸಂಖ್ಯೆ ಹೆಚ್ಚಾಗಬೇಕಾದರೆ ಹುಲ್ಲುಗಾವಲು ಪ್ರದೇಶ ದ್ವಿಗುಣಗೊಳ್ಳಬೇಕು. ಲಂಟಾನ ತೆಗೆದು ಹುಲ್ಲನ್ನು ಹೆಚ್ಚು ಬೆಳೆಸಬೇಕು. ಈ ಕೆಲಸವನ್ನು ನಾಗರಹೊಳೆಯಲ್ಲಿ ಮಾಡಲಾಗುತ್ತಿದೆ. ಈ ಹಿಂದೆ 10 ಚದರ ಕಿಲೋ ಮೀಟರ್ನಲ್ಲಿ ಒಂದು ಹುಲಿ ಇರುತ್ತಿತ್ತು. ಆದರೆ, ಈಗ 6 ಚದರ ಕಿಲೋ ಮೀಟರ್ಗೆ ಬಂದಿಳಿದಿದೆ. ಇದನ್ನು 'ಹೈ ಡೆನ್ಸಿಟಿ' ಏರಿಯಾ ಎಂದು ಕರೆಯಲಾಗುತ್ತದೆ. ಹಲವು ವರ್ಷಗಳಿಂದಲೂ ಇದೇ ಪರಿಸ್ಥಿತಿ ಇದೆ. ಹುಲಿಗಳ ಸಂತತಿ ಹೆಚ್ಚಾದಂತೆ ಅವುಗಳ ಆವಾಸಸ್ಥಾನವೂ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ 200 ಚದರ ಕಿಲೋ ಮೀಟರ್ ವ್ಯಾಪ್ತಿಯ ಬಫರ್ ಜೋನ್ ಏರಿಯಾವನ್ನು ನಾಗರಹೊಳೆ ಅರಣ್ಯ ಸಂರಕ್ಷಿತ ಪ್ರದೇಶಕ್ಕೆ ಸೇರಿಸುವ ಯೋಜನೆ ಕಾರ್ಯಗತವಾಗುತ್ತಿದೆ,'' ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕರಾದ ನಾರಾಯಣಸ್ವಾಮಿ ತಿಳಿಸಿದರು.
ವನ್ಯಜೀವಿ ಸಂಘರ್ಷ ಕಡಿಮೆ: ಅರಣ್ಯದಂಚಿನ ಪ್ರದೇಶವನ್ನು ಈ ರೀತಿ ಕಾಡಿನೊಳಗೆ ಸೇರಿಸಿಕೊಳ್ಳುವುದರಿಂದ ಮಾನವ ಮತ್ತು ವನ್ಯಜೀವಿಗಳ ಸಂಘರ್ಷವನ್ನು ಕಡಿಮೆ ಮಾಡಬಹುದು. ಅರಣ್ಯದಂಚಿನ ಪ್ರದೇಶದಲ್ಲಿರುವ ಖಾಸಗಿ ಭೂ ಮಾಲೀಕರು ಹಾಗೂ ಗ್ರಾಮಸ್ಥರಿಗೆ ಇದರಿಂದ ಪರಿಣಾಮ ಉಂಟಾಗುವುದಿಲ್ಲ. ಸದ್ಯ ಹುಣಸೂರಿನ ವೀರನಹೊಸಳ್ಳಿ, ಸೊಳ್ಳೆಪುರ ಹಾಗೂ ಆನೆಚೌಕೂರಿನ ಕೆಲ ಪ್ರದೇಶಗಳನ್ನು ಕಾಡಿನ ಪರಿಧಿಯೊಳಗೆ ಸೇರಿಸಿಕೊಳ್ಳಲಾಗುತ್ತಿದೆ. ಇದು ವನ್ಯಜೀವಿ ಸಮತೋಲನ ನಿರ್ವಹಣೆಗೆ ಸಹಕಾರಿಯಾಗಲಿದೆ. ದೊಡ್ಡಹಾರ್ವೆ (36.07 ಚದರ ಕಿ.ಮೀ), ಅನೆಚೌಕೂರು (36.76 ಚದರ ಕಿ.ಮೀ), ಮುದ್ದನಹಳ್ಳಿ (16.81 ಚದರ ಕಿ.ಮೀ), ಮೌಕಲ್ (33.08 ಚದರ. ಕಿಮೀ) ಮತ್ತು ದೇವ್ಮಾಚಿ (36.96 ಚದರ ಕಿಮೀ) ಪ್ರದೇಶವನ್ನು ಕಾಡಿನೊಳಗೆ ಸೇರಿಸಿಕೊಂಡರೆ ಹುಲಿಗಳ ಸಂತತಿ ಮತ್ತು ಸಂರಕ್ಷಣೆಗೆ ಅನುಕೂಲವಾಗಲಿದೆ.
ಏನಿದು ಬಫರ್ ಜೋನ್? : ಬಫರ್ ಜೋನ್ ಎಂದರೆ ಅರಣ್ಯದ ಪಕ್ಕದಲ್ಲಿರುವ ಕಾಡು ಎಂದರ್ಥ. ಈ ಕಿರು ಕಾಡುಗಳನ್ನು ತೋಟಗಾರಿಕೆ, ನೀರು ಸಂಗ್ರಹ ಮಾಡಲಷ್ಟೇ ಬಳಕೆ ಮಾಡಲಾಗುತ್ತಿರುತ್ತದೆ. ಇದನ್ನು ಕಾಡಿನ ಸರಹದ್ದಿನೊಳಗೆ ತಂದರೆ ವನ್ಯಜೀವಿಗಳ ಆವಾಸ ಸ್ಥಾನ ವಿಸ್ತರಣೆ ಮಾಡಬಹುದು. ನಾಗರಹೊಳೆಯ ಹುಣಸೂರು, ಪಿರಿಯಾಪಟ್ಟಣದ ಕೆಲ ಕಾಡುಗಳು ಅರಣ್ಯಕ್ಕೆ ಅಂಟಿಕೊಂಡಿವೆ. ವಿರಾಜಪೇಟೆ ಬಳಿ ಆನೆಚೌಕೂರು ಸೇರಿದಂತೆ ವಿವಿಧ ಪ್ರದೇಶ ಸೇರಿಕೊಂಡಿದೆ.
ಬಂಡೀಪುರದಲ್ಲಿ 124 ಚದರ ಕಿ.ಮೀ. ಬಫರ್ ಜೋನ್ ಇದೆ. 820 ಚದರ ಕಿ.ಮೀ ಕೋರ್ ಅರಣ್ಯ ಪ್ರದೇಶವಿದೆ. ಹೊಸದಾಗಿ ಬಂಡೀಪುರದಲ್ಲಿ ಬಫರ್ ಜೋನ್ ಮಾಡುತ್ತಿಲ್ಲ. ಹುಲಿ ಪ್ರದೇಶವನ್ನು ನಿರ್ವಹಣೆ ಮಾಡಬೇಕು. ಆನೆ, ಜಿಂಕೆ, ಕಡವೆಗಳು ಸೇರಿದಂತೆ ಸಸ್ಯಹಾರಿ ಪ್ರಾಣಿಗಳು ಹುಲ್ಲನ್ನೇ ಆಶ್ರಯಿಸಿರುತ್ತವೆ. ಹಾಗಾಗಿ ಹುಲ್ಲುಗಾವಲು ಪ್ರದೇಶವನ್ನು ದ್ವಿಗುಣಗೊಳಿಸಬೇಕು.
-ಟಿ.ಬಾಲಚಂದ್ರ, ಹುಲಿ ಯೋಜನೆ ನಿರ್ದೇಶಕರು, ಬಂಡೀಪುರ
ಇಂದು ಶೇ.40ರಷ್ಟು ಹುಲಿಗಳು ಕಾಡಿನಿಂದ ಹೊರಗೆ ಬದುಕುತ್ತಿವೆ. ಹಾಗಾಗಿ ಕಾಡಿನ ಹೊರಗೆ ಇರುವ ಅರಣ್ಯ ದ್ವೀಪಗಳನ್ನು ಮತ್ತೆ ಕಾಡಿಗೆ ಸೇರಿಸಬೇಕು. ಈ ರೀತಿಯಾದರೆ ಕಾಡಿನಿಂದ ನಾಡಿಗೆ ಬರುವ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಹುಣಸೂರು ಸುತ್ತಮುತ್ತ ಪಿರಿಯಾಪಟ್ಟಣ, ಬಂಡೀಪುರದ ಸುತ್ತ ನುಗು, ನಂಜನಗೂಡು, ಹೆಡಿಯಾಲ, ಮೊಳೆಯೂರು ಇದೆ. ಈ ಪ್ರದೇಶವನ್ನು ಸಂರಕ್ಷಣೆ ಮಾಡಬೇಕಿದೆ.
-ರಾಜಕುಮಾರ್, ವನ್ಯಜೀವಿ ತಜ್ಞರು.
ಹುಲಿಗಳ ಆವಾಸ ಸ್ಥಾನವನ್ನು ವಿಸ್ತರಣೆ ಮಾಡುವ ಉದ್ದೇಶದಿಂದ ನಾಗರಹೊಳೆ ಅಭಯಾರಣ್ಯದಲ್ಲಿ 'ಬಫರ್ ಜೋನ್' ಪ್ರದೇಶವನ್ನು ಕಾಡಿಗೆ ಸೇರಿಸಿಕೊಳ್ಳಲಾಗುತ್ತಿದ್ದು, ಆ ಮೂಲಕ ಹುಲಿಗಳ ಸಂರಕ್ಷಣೆಗೆ ಹೆಚ್ಚು ನಿಗಾ ವಹಿಸಲಾಗುತ್ತಿದೆ.
ಹುಲಿ ಸಂಖ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನ ಪಡೆದಿದೆ. ಇದನ್ನು ಕಾಯ್ದುಕೊಳ್ಳುವ ಜತೆಗೆ ವನ್ಯಜೀವಿಗಳ ಸಂರಕ್ಷಣೆ ದೃಷ್ಟಿಯಿಂದ ನಾಗರಹೊಳೆ, ಮಲೆ ಮಹದೇಶ್ವರ ಅರಣ್ಯ ಪ್ರದೇಶ ಮತ್ತು ಭದ್ರಾ ಅರಣ್ಯ ಪ್ರದೇಶದಲ್ಲಿ ಹುಲಿಗಳ ಸರಹದ್ದು ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಾಡಿನ ಪಕ್ಕದಲ್ಲಿರುವ 'ಬಫರ್ ಜೋನ್' ಅನ್ನು ಅಭಿವೃದ್ಧಿಪಡಿಸುವ ಮೂಲಕ ಹುಲಿಗಳ ಸರಹದ್ದು ವಿಸ್ತರಿಸುವ ಯೋಜನೆ ಈಗಾಗಲೇ ಕಾರ್ಯಗತವಾಗಿದೆ. ಅಲ್ಲದೆ, ಕಳ್ಳಬೇಟೆ ತಡೆ ಶಿಬಿರ (ಆ್ಯಂಟಿ ಪೌಚಿಂಗ್ ಕ್ಯಾಂಪ್)ವನ್ನು ಮತ್ತಷ್ಟು ಚುರುಕುಗೊಳಿಸಿ, ಹುಲಿಗಳ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.
''ಹುಲಿ ಸಂತತಿ ವೃದ್ಧಿಸಬೇಕಾದರೆ ಅವುಗಳ ಆವಾಸ ಸ್ಥಾನ ಚೆನ್ನಾಗಿರಬೇಕು. ಜತೆಗೆ ಉತ್ತಮ ಆಹಾರ ಸಿಗುವಂತಿರಬೇಕು. ಸಸ್ಯಾಹಾರಿ ಪ್ರಾಣಿಗಳಾದ ಜಿಂಕೆ, ಕಡವೆ, ಕಾಟಿ ಹಾಗೂ ನೀರು ಚೆನ್ನಾಗಿ ಸಿಕ್ಕಿದರೆ ಹುಲಿಗಳು ನಿರಾಳವಾಗಿ ಬದುಕು ಸಾಗಿಸುತ್ತವೆ. ಸಸ್ಯಹಾರಿ ಪ್ರಾಣಿಗಳ ಸಂಖ್ಯೆ ಹೆಚ್ಚಾಗಬೇಕಾದರೆ ಹುಲ್ಲುಗಾವಲು ಪ್ರದೇಶ ದ್ವಿಗುಣಗೊಳ್ಳಬೇಕು. ಲಂಟಾನ ತೆಗೆದು ಹುಲ್ಲನ್ನು ಹೆಚ್ಚು ಬೆಳೆಸಬೇಕು. ಈ ಕೆಲಸವನ್ನು ನಾಗರಹೊಳೆಯಲ್ಲಿ ಮಾಡಲಾಗುತ್ತಿದೆ. ಈ ಹಿಂದೆ 10 ಚದರ ಕಿಲೋ ಮೀಟರ್ನಲ್ಲಿ ಒಂದು ಹುಲಿ ಇರುತ್ತಿತ್ತು. ಆದರೆ, ಈಗ 6 ಚದರ ಕಿಲೋ ಮೀಟರ್ಗೆ ಬಂದಿಳಿದಿದೆ. ಇದನ್ನು 'ಹೈ ಡೆನ್ಸಿಟಿ' ಏರಿಯಾ ಎಂದು ಕರೆಯಲಾಗುತ್ತದೆ. ಹಲವು ವರ್ಷಗಳಿಂದಲೂ ಇದೇ ಪರಿಸ್ಥಿತಿ ಇದೆ. ಹುಲಿಗಳ ಸಂತತಿ ಹೆಚ್ಚಾದಂತೆ ಅವುಗಳ ಆವಾಸಸ್ಥಾನವೂ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ 200 ಚದರ ಕಿಲೋ ಮೀಟರ್ ವ್ಯಾಪ್ತಿಯ ಬಫರ್ ಜೋನ್ ಏರಿಯಾವನ್ನು ನಾಗರಹೊಳೆ ಅರಣ್ಯ ಸಂರಕ್ಷಿತ ಪ್ರದೇಶಕ್ಕೆ ಸೇರಿಸುವ ಯೋಜನೆ ಕಾರ್ಯಗತವಾಗುತ್ತಿದೆ,'' ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕರಾದ ನಾರಾಯಣಸ್ವಾಮಿ ತಿಳಿಸಿದರು.
ವನ್ಯಜೀವಿ ಸಂಘರ್ಷ ಕಡಿಮೆ: ಅರಣ್ಯದಂಚಿನ ಪ್ರದೇಶವನ್ನು ಈ ರೀತಿ ಕಾಡಿನೊಳಗೆ ಸೇರಿಸಿಕೊಳ್ಳುವುದರಿಂದ ಮಾನವ ಮತ್ತು ವನ್ಯಜೀವಿಗಳ ಸಂಘರ್ಷವನ್ನು ಕಡಿಮೆ ಮಾಡಬಹುದು. ಅರಣ್ಯದಂಚಿನ ಪ್ರದೇಶದಲ್ಲಿರುವ ಖಾಸಗಿ ಭೂ ಮಾಲೀಕರು ಹಾಗೂ ಗ್ರಾಮಸ್ಥರಿಗೆ ಇದರಿಂದ ಪರಿಣಾಮ ಉಂಟಾಗುವುದಿಲ್ಲ. ಸದ್ಯ ಹುಣಸೂರಿನ ವೀರನಹೊಸಳ್ಳಿ, ಸೊಳ್ಳೆಪುರ ಹಾಗೂ ಆನೆಚೌಕೂರಿನ ಕೆಲ ಪ್ರದೇಶಗಳನ್ನು ಕಾಡಿನ ಪರಿಧಿಯೊಳಗೆ ಸೇರಿಸಿಕೊಳ್ಳಲಾಗುತ್ತಿದೆ. ಇದು ವನ್ಯಜೀವಿ ಸಮತೋಲನ ನಿರ್ವಹಣೆಗೆ ಸಹಕಾರಿಯಾಗಲಿದೆ. ದೊಡ್ಡಹಾರ್ವೆ (36.07 ಚದರ ಕಿ.ಮೀ), ಅನೆಚೌಕೂರು (36.76 ಚದರ ಕಿ.ಮೀ), ಮುದ್ದನಹಳ್ಳಿ (16.81 ಚದರ ಕಿ.ಮೀ), ಮೌಕಲ್ (33.08 ಚದರ. ಕಿಮೀ) ಮತ್ತು ದೇವ್ಮಾಚಿ (36.96 ಚದರ ಕಿಮೀ) ಪ್ರದೇಶವನ್ನು ಕಾಡಿನೊಳಗೆ ಸೇರಿಸಿಕೊಂಡರೆ ಹುಲಿಗಳ ಸಂತತಿ ಮತ್ತು ಸಂರಕ್ಷಣೆಗೆ ಅನುಕೂಲವಾಗಲಿದೆ.
ಏನಿದು ಬಫರ್ ಜೋನ್? : ಬಫರ್ ಜೋನ್ ಎಂದರೆ ಅರಣ್ಯದ ಪಕ್ಕದಲ್ಲಿರುವ ಕಾಡು ಎಂದರ್ಥ. ಈ ಕಿರು ಕಾಡುಗಳನ್ನು ತೋಟಗಾರಿಕೆ, ನೀರು ಸಂಗ್ರಹ ಮಾಡಲಷ್ಟೇ ಬಳಕೆ ಮಾಡಲಾಗುತ್ತಿರುತ್ತದೆ. ಇದನ್ನು ಕಾಡಿನ ಸರಹದ್ದಿನೊಳಗೆ ತಂದರೆ ವನ್ಯಜೀವಿಗಳ ಆವಾಸ ಸ್ಥಾನ ವಿಸ್ತರಣೆ ಮಾಡಬಹುದು. ನಾಗರಹೊಳೆಯ ಹುಣಸೂರು, ಪಿರಿಯಾಪಟ್ಟಣದ ಕೆಲ ಕಾಡುಗಳು ಅರಣ್ಯಕ್ಕೆ ಅಂಟಿಕೊಂಡಿವೆ. ವಿರಾಜಪೇಟೆ ಬಳಿ ಆನೆಚೌಕೂರು ಸೇರಿದಂತೆ ವಿವಿಧ ಪ್ರದೇಶ ಸೇರಿಕೊಂಡಿದೆ.
ಬಂಡೀಪುರದಲ್ಲಿ 124 ಚದರ ಕಿ.ಮೀ. ಬಫರ್ ಜೋನ್ ಇದೆ. 820 ಚದರ ಕಿ.ಮೀ ಕೋರ್ ಅರಣ್ಯ ಪ್ರದೇಶವಿದೆ. ಹೊಸದಾಗಿ ಬಂಡೀಪುರದಲ್ಲಿ ಬಫರ್ ಜೋನ್ ಮಾಡುತ್ತಿಲ್ಲ. ಹುಲಿ ಪ್ರದೇಶವನ್ನು ನಿರ್ವಹಣೆ ಮಾಡಬೇಕು. ಆನೆ, ಜಿಂಕೆ, ಕಡವೆಗಳು ಸೇರಿದಂತೆ ಸಸ್ಯಹಾರಿ ಪ್ರಾಣಿಗಳು ಹುಲ್ಲನ್ನೇ ಆಶ್ರಯಿಸಿರುತ್ತವೆ. ಹಾಗಾಗಿ ಹುಲ್ಲುಗಾವಲು ಪ್ರದೇಶವನ್ನು ದ್ವಿಗುಣಗೊಳಿಸಬೇಕು.
-ಟಿ.ಬಾಲಚಂದ್ರ, ಹುಲಿ ಯೋಜನೆ ನಿರ್ದೇಶಕರು, ಬಂಡೀಪುರ
ಇಂದು ಶೇ.40ರಷ್ಟು ಹುಲಿಗಳು ಕಾಡಿನಿಂದ ಹೊರಗೆ ಬದುಕುತ್ತಿವೆ. ಹಾಗಾಗಿ ಕಾಡಿನ ಹೊರಗೆ ಇರುವ ಅರಣ್ಯ ದ್ವೀಪಗಳನ್ನು ಮತ್ತೆ ಕಾಡಿಗೆ ಸೇರಿಸಬೇಕು. ಈ ರೀತಿಯಾದರೆ ಕಾಡಿನಿಂದ ನಾಡಿಗೆ ಬರುವ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಹುಣಸೂರು ಸುತ್ತಮುತ್ತ ಪಿರಿಯಾಪಟ್ಟಣ, ಬಂಡೀಪುರದ ಸುತ್ತ ನುಗು, ನಂಜನಗೂಡು, ಹೆಡಿಯಾಲ, ಮೊಳೆಯೂರು ಇದೆ. ಈ ಪ್ರದೇಶವನ್ನು ಸಂರಕ್ಷಣೆ ಮಾಡಬೇಕಿದೆ.
-ರಾಜಕುಮಾರ್, ವನ್ಯಜೀವಿ ತಜ್ಞರು.