ಆ್ಯಪ್ನಗರ

ಗರ್ಭಿಣಿಯಾದ ವರಲಕ್ಷ್ಮೀ : ದಸರಾ ಉತ್ಸವದಿಂದ ಕೈ ಬಿಡುವ ಸಾಧ್ಯತೆ

ದಸರಾ ಗಜಪಡೆಯಲ್ಲಿದ್ದ ವರಲಕ್ಷ್ಮೀ ಆನೆ ಗರ್ಭಿಣಿಯಾಗಿದ್ದು, ಶಿಬಿರಕ್ಕೆ ವಾಪಸ್ ಕಳುಹಿಸಲು ಸಾಧ್ಯತೆ ಇದೆ.

Vijaya Karnataka Web 11 Sep 2019, 5:03 pm
ಮೈಸೂರು: ದಸರಾ ಗಜಪಡೆಯಲ್ಲಿದ್ದ ವರಲಕ್ಷ್ಮೀ ಆನೆ ಗರ್ಭಿಣಿಯಾಗಿದ್ದು, ಉತ್ಸವದಿಂದ ಕೈ ಬಿಡುವ ಸಾಧ್ಯತೆ ಇದೆ.
Vijaya Karnataka Web dasara


ನಗರದ ಪರಿಸರಕ್ಕೆ ಹೊಂದಿಕೊಳ್ಳದ ಕಾರಣ ಈಶ್ವರ ಆನೆಯನ್ನು ವಾಪಸ್ ಶಿಬಿರಕ್ಕೆ ಕಳುಹಿಸಲಾಗಿತ್ತು. ಈಗ ಗರ್ಭಿಣಿಯಾಗಿರುವ ವರಲಕ್ಷೀ ಆನೆಯನ್ನು ಸಹ ಶಿಬಿರಕ್ಕೆ ವಾಪಸ್‌ ಕಳುಹಿಸುವ ಸಾಧ್ಯತೆ ಇದೆ.

ದಸರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಸಂಭ್ರಮ ಕಳೆಗಟ್ಟಿದೆ. ಅಂಬಾರಿ ಹೊರುವ ಅರ್ಜುನ, ಅಭಿಮನ್ಯು, ಧನಂಜಯ, ಈಶ್ವರ, ವರಲಕ್ಷ್ಮೀ ಮತ್ತು ವಿಜಯ ಆ.26ರಂದೇ ನಗರಕ್ಕೆ ಆಗಮಿಸಿದ್ದವು.

ಜಗಳಗಂಟ ಈಶ್ವರ, ಕಿರಿಕ್ ರೋಹಿತ್‌ ದಸರಾದಿಂದ ಔಟ್‌

ಮೊದಲ ಬಾರಿ ದಸರಾದಲ್ಲಿಪಾಲ್ಗೊಂಡು ಸಂಭ್ರಮಿಸಬೇಕಿದ್ದ ಭವಿಷ್ಯದ ಅಂಬಾರಿ ಆನೆಗಳೆಂಬ ನಿರೀಕ್ಷೆ ಮೂಡಿಸಿದ್ದ ರೋಹಿತ್‌ ಹಾಗೂ ಈಶ್ವರ ತಮ್ಮ ತುಂಟಾಟದಿಂದಾಗಿ ನಾಡಹಬ್ಬವನ್ನು ಮಿಸ್‌ ಮಾಡಿಕೊಂಡಿವೆ. ಬರುವ ಮುನ್ನವೇ ಕಿರಿಕ್‌ ಮಾಡಿಕೊಂಡ ರೋಹಿತನನ್ನು ಲಾರಿ ಹತ್ತಿಸಲಿಲ್ಲ. ಬಂದ ನಂತರ ತುಂಟಾಟ ನಿಲ್ಲಿಸದ ಈಶ್ವರನನ್ನು ಇದೀಗ ಲಾರಿ ಹತ್ತಿಸಿ ಮತ್ತೆ ಶಿಬಿರಕ್ಕೆ ವಾಪಸ್‌ ಕರೆದೊಯ್ಯಲಾಗುತ್ತಿದೆ.

ದಸರಾ ಆನೆಗಳಲ್ಲಿ ಎರಡನೇ ಹಂತದ ನಾಯಕತ್ವ ಬೆಳೆಸುವ ಉದ್ದೇಶದಿಂದ ಈ ಬಾರಿ ನಾಲ್ಕು ಹೊಸ ಆನೆಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ