ಆ್ಯಪ್ನಗರ

ನಗರದಲ್ಲಿ ವರಮಹಾಲಕ್ಷ್ಮಿ ಸಂಭ್ರಮ

ನಗರದಲ್ಲಿ ಹೆಂಗೆಳೆಯರು ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

Vijaya Karnataka 25 Aug 2018, 5:00 am
ಮೈಸೂರು : ನಗರದಲ್ಲಿ ಹೆಂಗೆಳೆಯರು ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
Vijaya Karnataka Web varamalakshmi celebration in the city
ನಗರದಲ್ಲಿ ವರಮಹಾಲಕ್ಷ್ಮಿ ಸಂಭ್ರಮ


ಪ್ರತಿವರ್ಷ ಶ್ರಾವಣ ಮಾಸದ ಎರಡನೇ ಶುಕ್ರವಾರ ಮಹಾಲಕ್ಷ್ಮೇಯನ್ನು ತಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸಿ ಶ್ರದ್ಧಾ ಭಕ್ತಿಯಿಂದ ಪೂಜಿಸುವ ಪ್ರತೀತಿ ಇದೆ. ಈ ಹಬ್ಬಕ್ಕೆ ದೇವಸ್ಥಾನಕ್ಕೆ ತೆರಳುವುದಕ್ಕಿಂತ ಹೆಚ್ಚಾಗಿ ತಮ್ಮ ಮನೆಯಲ್ಲೇ ಲಕ್ಷ್ಮೇ ವಿಗ್ರಹವನ್ನು ಸ್ಥಾಪಿಸಿ, ಆಭರಣ ತೊಡಿಸಿ, ದೇವಿಗೆ ಇಷ್ಟವಾದ ಸೀರೆ ಉಡಿಸಿ, ಹೂವಿನಿಂದ ಅಲಂಕರಿಸಿ ಪೂಜಿಸುತ್ತಾರೆ. ಅದರಂತೆ ನಗರದಲ್ಲಿ ಮಹಿಳೆಯರು ತಮ್ಮ ಸಂಪ್ರದಾಯದಂತೆ ದೇವಿಗೆ ಪೂಜಿ ಸಲ್ಲಿಸಿದರು. ತಮ್ಮ ಕಷ್ಟವನ್ನು ನಿವಾರಿಸಿ ಸಕಲ ಐಶ್ವರ್ಯ ಉಂಟುಮಾಡುವಂತೆ ದೇವಿಯಲ್ಲಿ ಪ್ರಾರ್ಥಿಸಿದರು.

ಲಕ್ಷ್ಮಿ ಪೂಜೆ ಮಾಡುವ ಪ್ರತಿ ಮನೆಯಲ್ಲಿ ಕಳಸ ಇಟ್ಟು ಲಕ್ಷ್ಮೇ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಣ ಆಭರಣಗಳನ್ನು ಇಟ್ಟು ಸಂಭ್ರಮದಿಂದ ಆರಾಧನೆ ಮಾಡಲಾಯಿತು. ಸಂಜೆ ಮುತ್ತೈದೆಯರನ್ನು ಮನೆಗಳಿಗೆ ಆಹ್ವಾನಿಸಿ ಬಾಗಿನ ಕೊಟ್ಟು ಆಶೀರ್ವಾದ ಪಡೆದರು. ಅಲ್ಲದೆ ನಗರದಲ್ಲಿರುವ ಲಕ್ಷ್ಮೇ ದೇವಸ್ಥಾನಗಳಾದ ಕೆ.ಜಿ.ಕೊಪ್ಪಲಿನ ಚಾಮುಂಡಿ ಸೇರಿದಂತೆ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಿತು. ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.


ವಿಶೇಷ ಪೂಜೆ: ಮೈಸೂರಿನಲ್ಲಿರುವ ಕನಕದಾಸ ನಗರದಲ್ಲಿರುವ ಏಕೈಕ ಲಕ್ಷ್ಮೇ ದೇವಸ್ಥಾನದಲ್ಲಿ ಪ್ರಾತಃ ಕಾಲದಲ್ಲ ಧಾರ್ಮಿಕ ಪೂಜಾ ಕೈಂಕರ್ಯ ಜರುಗಿತು. ನಾನಾ ಅಭಿಷೇಕದ ನಂತರ ವಿವಿಧ ಪುಷ್ಪಗಳಿಂದ ದೇವಯನ್ನು ಅಲಂಕರಿಸಲಾಯಿತು. ನಂತರ ಮಹಾಮಂಗಳಾರತಿ ಮಾಡಲಾಯಿತು. ನಂತರ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.

ಲಕ್ಷ್ಮಿ ಅಲಂಕಾರ: ಬೆಳ್ಳಿ ಚೊಂಬು ಅಥವಾ ಮನೆಯಲ್ಲಿರುವ ಕಳಸದಲ್ಲಿ ಒಂದು ಪಾಶ್ರ್ವದಲ್ಲಿ ಕುಂಕುಮದಿಂದ ದೇವಿಗೆ ಆಭರಣ ತೋಡಿಸಿ ನಂದಿಬಟ್ಟಲು ಹೂವಿನ ರಸದಿಂದ ಕಾಡಿಗೆಯನ್ನು ತಯಾರಿಸಿ ದೇವಿಯ ಕಣ್ಣುಗಳಿಗೆ ಲೇಪಿಸಿ ಕಳಸದ ಮೇಲೆ ತೆಂಗಿನ ಕಾಯಿಯನ್ನು ಇಡಲಾಯಿತು. ನಂತರ ದೇವಿ ಮುಖವಾಡ ಕೂರಿಸಿ ಮಂಟಪವನ್ನು ಮಾಡಿ ಅದರಲ್ಲಿ ನಾನಾ ಬಗೆಯ ಸೀರೆ ಮತ್ತು ಆಭರಣಗಳಿಂದ ಅಲಂಕೃತವಾದ ದೇವಿಯನ್ನು ಹೂವು ಹಣ್ಣುಗಳಿಂದ ಅಲಂಕಾರಗೊಳಿಸಿ ಸಂಭ್ರಮದಿಂದ ಮಹಿಳೆಯರು ಆಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ