ಆ್ಯಪ್ನಗರ

ವಿದ್ಯಾರ್ಥಿಗಳಿಗೆ ವಿದ್ಯೆ ಜತೆಗೆ ಶ್ರದ್ಧೆ ಮುಖ್ಯ

ವಿದ್ಯಾರ್ಥಿಗಳಿಗೆ ವಿದ್ಯೆ ಜೊತೆಗೆ ಶ್ರದ್ಧೆ, ವಿನಯ ಮುಖ್ಯ ಎಂದು ಬೆಂಗಳೂರು ಹಿರಿಯ ಕೆಎಎಸ್ ಅಧಿಕಾರಿ ಬಿ.ಶಿವಸ್ವಾಮಿ ಹೇಳಿದರು.

Vijaya Karnataka 1 Oct 2019, 10:07 pm
ಬೆಟ್ಟದಪುರ: ವಿದ್ಯಾರ್ಥಿಗಳಿಗೆ ವಿದ್ಯೆ ಜೊತೆಗೆ ಶ್ರದ್ಧೆ, ವಿನಯ ಮುಖ್ಯ ಎಂದು ಬೆಂಗಳೂರು ಹಿರಿಯ ಕೆಎಎಸ್ ಅಧಿಕಾರಿ ಬಿ.ಶಿವಸ್ವಾಮಿ ಹೇಳಿದರು.
Vijaya Karnataka Web MYS01BTP1_45


ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2019-20ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ, ಕ್ರೀಡೆ, ಸಾಂಸ್ಕೃತಿಕ ಹಾಗೂ ರೆಡ್ ಕ್ರಾಸ್ ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘‘ವಿದ್ಯಾರ್ಥಿಗಳ ಸರ್ವತೋಮುಖ ಅಭಿವದ್ಧಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಬಹಳ ಮುಖ್ಯ, ಅಲ್ಲದೆ ತಮ್ಮಲ್ಲಿರುವ ಆತಂರಿಕ ಪ್ರತಿಭೆ ಗಳನ್ನು ಹೊರಹಾಕಲು ಇದೊಂದು ವೇದಿಕೆಯಾಗಿದೆ. ಗ್ರಾಮೀಣ ಪ್ರದೇಶ ದಲ್ಲಿ ಹಲವು ಪ್ರತಿಭೆಗಳನ್ನು ನಾವು ಕಾಣಬಹುದು. ಒಂದು ಸಮಾಜದ ಅಭಿವದ್ಧಿಗೆ ಶ್ರಮ ಪಡುವುದು ಎನ್ನೆಸ್ಸೆಸ್ ಅಭ್ಯರ್ಥಿಗಳಾಗಿರುತ್ತಾರೆ,’’ ಎಂದರು.

ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಎಸ್.ಜಿ.ಚೈತ್ರ ಮಾತನಾಡಿ,‘‘ರಾಷ್ಟ್ರೀಯ ಯೋಜನೆಯಿಂದ ಅನುಭವ ಪಡೆದ ವಿದ್ಯಾರ್ಥಿಗಳು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಾರೆ. ದೇಶದ ಅಭಿವದ್ಧಿಗೆ ಶ್ರಮ ಪಡುತ್ತಾರೆ. ಇದರಿಂದ ನಾಯಕತ್ವ ಗುಣ ಬೆಳೆಯುತ್ತದೆ,’’ ಎಂದರು.

ಸಾಂಸ್ಕೃತಿಕ ಕಾರ‌್ಯಕ್ರಮ: ಕಾರ‌್ಯಕ್ರಮ ದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ನತ್ಯ, ಜನಪದ ನತ್ಯ ಸೇರಿದಂತೆ ಹಲವು ಕಾರ‌್ಯಕ್ರಮಗಳು ಗಮನ ಸೆಳೆದವು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವತ್ತ ಜಂಟಿ ನಿರ್ದೇಶಕ ಟಿ.ಸಿ ವಸಂತರಾಜೇ ಅರಸ್, ವೈದ್ಯ ಡಾ.ಪ್ರಕಾಶ್‌ಬಾಬು, ಹೊಳೆನರಸೀಪುರ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ನಂದೀಶ್, ಎಚ್.ಡಿ.ಕೋಟೆ ತಾಲೂಕಿನ ಪಿಡಿಒ ರುಖ್ಮಾಂಗದ, ಬೆಟ್ಟದಪುರ ಪಿಡಿಒ ಎಂ.ಡಿ ಮಾಯಪ್ಪ, ಕಾಲೇಜಿನ ಎನ್ನೆಸ್ಸೆಸ್ ಘಟಕದ ಅಧಿಕಾರಿ ಡಾ. ಜಗದೀಶ್, ಸಹಾಯಕ ಪ್ರಾಧ್ಯಾಪಕ ಪಿ.ಎಸ್ ರಘು ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ