ಆ್ಯಪ್ನಗರ

ಲೋಕಹಿತಕ್ಕೆ ಮಾಡುವ ಹಿಂಸೆ ಪಾಪವಲ್ಲ: ಪೇಜಾವರ ಶ್ರೀ

ದೇಶ, ಧರ್ಮದ ಉಳಿವಿಗಾಗಿ, ಲೋಕಹಿತಕ್ಕಾಗಿ ಮಾಡುವಂತಹ ಹಿಂಸೆಯು ಪುಣ್ಯ ತಂದು ಕೊಡುವುದು ಹೊರತು ಪಾಪವನ್ನಲ್ಲ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದರು.

Vijaya Karnataka 22 Aug 2019, 5:00 am
ಮೈಸೂರು: ದೇಶ, ಧರ್ಮದ ಉಳಿವಿಗಾಗಿ, ಲೋಕಹಿತಕ್ಕಾಗಿ ಮಾಡುವಂತಹ ಹಿಂಸೆಯು ಪುಣ್ಯ ತಂದು ಕೊಡುವುದು ಹೊರತು ಪಾಪವನ್ನಲ್ಲ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದರು.
Vijaya Karnataka Web violence to the world is not a sin pejawara shree
ಲೋಕಹಿತಕ್ಕೆ ಮಾಡುವ ಹಿಂಸೆ ಪಾಪವಲ್ಲ: ಪೇಜಾವರ ಶ್ರೀ


ಮೈಸೂರಿನ ಸರಸ್ವತಿಪುರಂನಲ್ಲಿರುವ ಕೃಷ್ಣಧಾಮದಲ್ಲಿ ನಡೆಯುತ್ತಿರುವ ಪೇಜಾವರ ಮಠದ ಶ್ರೀಗಳ ಚಾತುರ್ಮಾಸ್ಯ ಹಿನ್ನೆಲೆಯಲ್ಲಿ ಬುಧವಾರ ಅವರು ಪ್ರವಚನ ನೀಡಿದರು.

''ಶಾಸ್ತ್ರಗಳು ಅಹಿಂಸೆಗೆ ಆದ್ಯತೆ ನೀಡಿದ್ದು, ಅನಾರೋಗ್ಯಕ್ಕೆ ತುತ್ತಾದಾಗ ವೈದ್ಯರು ಮಾಡುವ ಆಪರೇಷನ್‌ ದೇಹಕ್ಕೆ ಹಿಂಸೆಯನ್ನು ನೀಡಿದರೂ, ಅದು ಆರೋಗ್ಯದ ದೃಷ್ಟಿಯಿಂದ ಉತ್ತಮವಾದುದು. ಹಾಗೆಯೇ, ಲೋಕ ಹಿತಕ್ಕಾಗಿ ಮಾಡುವ ಹಿಂಸೆ, ಹಿಂಸೆಯಲ್ಲ. ಲೋಕಹಿತಕ್ಕಾಗಿ ಮಾಡುವ ಹಿಂಸೆಯು ಪುಣ್ಯವನ್ನು ತರುವುದು ಎಂದು ತಿಳಿಸಿವೆ'' ಎಂದರು.

''ಸೈನಿಕರು ದೇಶಕ್ಕಾಗಿ ಹೋರಾಡುವಾಗ ಹಿಂಸೆ ನಡೆಯುತ್ತದೆ. ಹಾಗಿದ್ದರೂ, ದೇಶ ರಕ್ಷಣೆಯ ದೃಷ್ಟಿಯಿಂದ ಅದು ಪುಣ್ಯದ ಕೆಲಸ. ರಾಗದ್ವೇಷವಿಲ್ಲದೇ ಮಾಡುವ ಹಿಂಸೆಯು ಪುಣ್ಯವನ್ನು ತಂದುಕೊಡುವುದು. ದುರುದ್ದೇಶಪೂರ್ವಕವಾಗಿ ಮಾಡಿದರೆ ಅದು ಪಾಪವನ್ನು ತಂದುಕೊಡುವುದು. ಕೊಲೆ ಮಾಡಿದವನಿಗೆ ಕಾನೂನಿನ ಮೂಲಕ ಶಿಕ್ಷೆ ವಿಧಿಸುವುದು ಸಮಾಜದ ಹಿತದೃಷ್ಟಿಯಿಂದ ಪುಣ್ಯದ ಕಾರ‍್ಯ'' ಎಂದು ಹೇಳಿದರು.

''ಲೋಕ ಹಿತಕ್ಕಾಗಿ ಮಾಡುವ ಹಿಂಸೆ ಪಾಪವಲ್ಲ ಎಂದು ಭಗವಂತ ಶ್ರೀ ಕೃಷ್ಣ ಅರ್ಜುನನಿಗೆ ಉಪದೇಶ ಮಾಡಿದ್ದಾರೆ. ಪಾಪ, ಪುಣ್ಯದ ಅರಿವು ಮುಖ್ಯ. ಉಳಿದೆಲ್ಲ ಪ್ರಾಣಿಗಳಿಗಿಂತ ಮನುಷ್ಯನ ಬದುಕು ಶ್ರೇಷ್ಠವಾಗಿದೆ. ಭಿನ್ನವಾಗಿ ಆಲೋಚಿಸುವ, ಬುದ್ಧಿಶಕ್ತಿಯುಳ್ಳ ಮನುಷ್ಯರಾದ ನಾವು ದೇವರನ್ನು ಪೂಜಿಸದಿದ್ದರೆ, ನಮ್ಮ ಸೃಷ್ಟಿಕರ್ತನಿಗೆ ಮೋಸ ಮಾಡಿದಂತಾಗುವುದು'' ಎಂದು ತಿಳಿಸಿದರು.

ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದರು, ''ಸಜ್ಜನರು ನಿರ್ಭಯವಾಗಿ ಬದುಕಬೇಕು. ಯಾವುದೇ ರೋಗಗಳು ಬಾಧಿಸಬಾರದು ಎಂದು ಪ್ರಾರ್ಥಿಸುವ ಹಾಗೆ ನಾವು ಕೂಡ ಯಾರಿಗೂ ತೊಂದರೆ ಕೊಡದಂತೆ ಬದುಕಬೇಕು. ಸಮಾಜದಲ್ಲಿ ಒಳ್ಳೆಯವರನ್ನು ಗುರುತಿಸುತ್ತೇವೆ. ಆದರೆ, ನಾವು ಒಳ್ಳೆಯರಾಗುವುದಕ್ಕೆ ಹಿಂದೇಟು ಹಾಕುತ್ತೇವೆ. ಇದು ಸರಿಯಾದ ನಡೆಯಲ್ಲ'' ಎಂದರು.

''ತಂದೆ-ತಾಯಿ ಒಳ್ಳೆಯವರಾಗಿದ್ದರೆ, ಮಕ್ಕಳೂ ಒಳ್ಳೆಯವರಾಗಿರುತ್ತಾರೆ. ಮಕ್ಕಳಲ್ಲಿ ಒಳ್ಳೆಯ ವಿಷಯಗಳನ್ನು ತುಂಬಲು ಸಾಧ್ಯವಾಗುವುದು'' ಎಂದು ಸಲಹೆ ನೀಡಿದರು.

ವಿದ್ವಾಂಸ ಕೃಷ್ಣಕುಮಾರಾಚಾರ್ಯ ಅವರು ಪ್ರವಚನ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ