ಆ್ಯಪ್ನಗರ

ರಾಘವೇಂದ್ರ ಸ್ವಾಮಿ ಮಠಕ್ಕೆ ಪೇಜಾವರ ಶ್ರೀ ಭೇಟಿ

ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಹುಣಸೂರು ನಗರದ ಬ್ರಾಹ್ಮಣರ ಬಡಾವಣೆಯಲ್ಲಿರುವ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ಮೂಲದೇವರ ಮೂರ್ತಿಗೆ ಪೂಜೆ ಸಲ್ಲಿಸಿದರು.

Vijaya Karnataka 27 Oct 2018, 5:00 am
ಹುಣಸೂರು: ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಹುಣಸೂರು ನಗರದ ಬ್ರಾಹ್ಮಣರ ಬಡಾವಣೆಯಲ್ಲಿರುವ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ಮೂಲದೇವರ ಮೂರ್ತಿಗೆ ಪೂಜೆ ಸಲ್ಲಿಸಿದರು.
Vijaya Karnataka Web visit pajavar sri to raghavendra swami math
ರಾಘವೇಂದ್ರ ಸ್ವಾಮಿ ಮಠಕ್ಕೆ ಪೇಜಾವರ ಶ್ರೀ ಭೇಟಿ


ಕೇರಳ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಗುರುವಾರ ಬೆಳಗಿನ ಜಾವ ಆಗಮಿಸಿದ ಶ್ರೀಗಳು ಮೂಲದೇವರ ಮೂರ್ತಿಗೆ ವಿವಿಧ ಧಾರ್ಮಿಕ ಪೂಜೆಗಳನ್ನು ಭಕ್ತರ ಸಮ್ಮುಖದಲ್ಲಿ ನೆರವೇರಿಸಿದರು. ಮಠದ ಅರ್ಚಕ ನಾರಾಯಣ ಮೂರ್ತಿ, ಟ್ರಸ್ಟಿ ವಿದ್ಯಾಪ್ರಕಾಶ್‌, ವ್ಯವಸ್ಥಾಪಕ ವಾದಿರಾಜಭಟ್ಟ ಹಾಗೂ ಪೇಜಾವರ ಸ್ವಾಮಿಗಳ ಭಕ್ತವೃಂದದವರು ಪೂಜೆಯಲ್ಲಿ ಭಾಗಿಯಾದರು. ನೂರಾರು ಭಕ್ತರು ಮಠಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಶ್ರೀಗಳು, ಕೇರಳದ ಪ್ರವಾಹದ ಸಂತ್ರಸ್ತರಿಗೆ ಶ್ರೀಮಠದ ವತಿಯಿಂದ 14 ಲಕ್ಷ ರೂ.ಗಳ ಸಹಾಯಧನ ನೀಡಲಾಗಿದೆ. ಕೊಡಗಿನ ಸಂತ್ರಸ್ತರನ್ನು ಸಹ ಭೇಟಿ ಮಾಡಿದ್ದು, ಅಲಿಗೂ ಹತ್ತು ಲಕ್ಷ ರೂ. ಮೀಸಲಿಟ್ಟಿದ್ದೇವೆ. ಸರ್ಕಾರದ ಮೂಲಕವೇ ಪರಿಹಾರ ಧನ ನೀಡಬೇಕೆಂದು ಸುತ್ತೋಲೆಯಿರುವುದರಿಂದ ಅಲ್ಲಿನ ಪರಿಸ್ಥಿತಿಯನ್ನು ಗಮನಿಸಿ ಪರಿಹಾರ ಧನ ನೀಡಲಾಗುವುದೆಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ