ಆ್ಯಪ್ನಗರ

ವಿವಿಯಲ್ಲಿ ಬುದ್ಧ ಪೀಠ ಸ್ಥಾಪನೆಯಾಗಲಿ

ಮೈಸೂರು ವಿಶ್ವವಿದ್ಯಾಲಯದಲ್ಲಿ ಬುದ್ಧ ಪೀಠ ಸ್ಥಾಪಿಸಬೇಕೆಂಬ ಬಹುಜನರ ಬೇಡಿಕೆ ಇನ್ನೂ ಈಡೇರಲಿಲ್ಲ. ಸಂಬಂಧಪಟ್ಟವರು ಈ ಕುರಿತು ಗಮನ ಹರಿಸಿದರೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ಕೊಳ್ಳೇಗಾಲ ಶಾಸಕ ಎನ್‌. ಮಹೇಶ್‌ ಹೇಳಿದ್ದಾರೆ.

Vijaya Karnataka 17 Aug 2019, 5:00 am
ಮೈಸೂರು : ಮೈಸೂರು ವಿಶ್ವವಿದ್ಯಾಲಯದಲ್ಲಿ ಬುದ್ಧ ಪೀಠ ಸ್ಥಾಪಿಸಬೇಕೆಂಬ ಬಹುಜನರ ಬೇಡಿಕೆ ಇನ್ನೂ ಈಡೇರಲಿಲ್ಲ. ಸಂಬಂಧಪಟ್ಟವರು ಈ ಕುರಿತು ಗಮನ ಹರಿಸಿದರೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ಕೊಳ್ಳೇಗಾಲ ಶಾಸಕ ಎನ್‌. ಮಹೇಶ್‌ ಹೇಳಿದ್ದಾರೆ.
Vijaya Karnataka Web vivi yalli buddha pitha sthapaneyagali
ವಿವಿಯಲ್ಲಿ ಬುದ್ಧ ಪೀಠ ಸ್ಥಾಪನೆಯಾಗಲಿ


ವಿಶ್ವವಿದ್ಯಾಲಯದ ಗೌತಮ ಬುದ್ಧ ಉದ್ಯಾನದಲ್ಲಿ ಧಮ್ಮದೀಪ ಪ್ರತಿಷ್ಠಾನ, ವಿದ್ಯಾರ್ಥಿ ಬಳಗದ ನಾಲ್ಕನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಧ್ಯಾನ-ಗಾಯನ-ವಿಚಾರ ಕಾರ್ಯಕ್ರಮ 'ಬುದ್ಧ ಬೆಳೆದಿಂಗಳು'ವಿನಲ್ಲಿ ಅವರು ಮಾತನಾಡಿದರು.

''ಮೈಸೂರು ವಿಶ್ವವಿದ್ಯಾಲಯದಲ್ಲಿ ಬುದ್ಧ ಪೀಠ ಸ್ಥಾಪಿಸಬೇಕಾದ ಅಗತ್ಯ ಇದೆ. ಇದರಿಂದ ಬುದ್ಧನ ಕುರಿತು ವಿಚಾರಗಳನ್ನು ತಿಳಿದುಕೊಳ್ಳುವ ಹಾಗೂ ಅಧ್ಯಯನ ನಡೆಸುವ ಅವಕಾಶ ವಿದ್ಯಾರ್ಥಿಗಳಿಗೆ ಲಭಿಸಲಿದೆ. ಈ ಹಿಂದಿನ ಕುಲಪತಿ ಬುದ್ಧ ಪೀಠ ಸ್ಥಾಪನೆ ಕುರಿತು ಪ್ರಯತ್ನ ನಡೆಸಿದರೂ ಅದು ಈಡೇರಿಲಿಲ್ಲ. ಇದೀಗ ಈ ಪ್ರಯತ್ನವನ್ನು ಈಗಿನ ಕುಲಪತಿಗಳು ಹಾಗೂ ಸಂಬಂಧಿಸಿದವರು ಮುಂದುವರಿಸಲಿ. ಶಾಸಕನಾಗಿ ನಾನು ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ,'' ಎಂದರು.

''ಬೌದ್ಧ ಧರ್ಮದ ಆದರ್ಶ ಹಾಗೂ ಅದರ ಮೌಲ್ಯವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಆದರೆ, ಈ ಧರ್ಮವನ್ನು ಒಂದು ವರ್ಗಕ್ಕೆ ಮಾತ್ರ ಸೀಮಿತಗೊಳಿಸುವ ಪ್ರಯತ್ನ ನಡೆಯುತ್ತಿರುವುದು ಸರಿಯಲ್ಲ. ಇದರಲ್ಲಿರುವ ಉತ್ತಮ ವಿಚಾರಗಳ ಪ್ರಯೋಜನ ಎಲ್ಲರಿಗೂ ದೊರೆಯುವಂತೆ ನೋಡಿಕೊಳ್ಳಬೇಕು. ಜನ ಸಾಮಾನ್ಯರಿಗೆ ಬೌದ್ಧ ಧರ್ಮದ ಕುರಿತು ಮಾಹಿತಿ ನೀಡಬೇಕಿದೆ. ಈ ಧರ್ಮದ ಅನುಯಾಯಿಗಳು ಇತ್ತ ಗಮನ ಹರಿಸಬೇಕು. ಪ್ರಬುದ್ಧ ಭಾರತ ನಿರ್ಮಾಣಕ್ಕೆ ಬುದ್ಧ, ಅಂಬೇಡ್ಕರ್‌ ಮುಂತಾದವರ ಚಿಂತನೆ ಪ್ರಸ್ತುತವಾಗಿದೆ. ಈ ನಿಟ್ಟಿನಲ್ಲಿ ಧಮ್ಮದೀಪ ಪ್ರತಿಷ್ಠಾನ ಉತ್ತಮ ಕಾರ್ಯ ಮಾಡುತ್ತಿದ್ದು, ಅಭಿನಂದನೆ ಸಲ್ಲಿಸುತ್ತಿದ್ದೇನೆ,'' ಎಂದು ಹೇಳಿದರು.

''ಎಲ್ಲರಿಗೂ ಸಮಾನ ಅವಕಾಶ ದೊರೆಯಬೇಕಾದರೆ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಬೇಕಿದೆ. ಆಗ ಮಾತ್ರ ರಾಜಕೀಯ ಪ್ರಜಾಪ್ರಭುತ್ವ ಉಳಿಯುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನಹರಿಸಬೇಕು,'' ಎಂದು ಅವರು ಹೇಳಿದರು.

ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ.ಹೇಮಂತ್‌ ಕುಮಾರ್‌, ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ