ಆ್ಯಪ್ನಗರ

ನಾಡಿನಲ್ಲಿ ಬದುಕು ಕಟ್ಟಿದ ಕಾಡು ಹಕ್ಕಿ

ಸಾಧಕರ ರೈತರನ್ನು ಗುರುತಿಸಿ ವಿಜಯ ಕರ್ನಾಟಕವು 'ವಿಕ ಸೂಪರ್‌ ಸ್ಟಾರ್‌ ಪ್ರಶಸ್ತಿ' ನೀಡಿ ಗುರುತಿಸಿದೆ.

Vijaya Karnataka 14 Dec 2018, 5:00 am
ಸಾಧಕರ ರೈತರನ್ನು ಗುರುತಿಸಿ ವಿಜಯ ಕರ್ನಾಟಕವು 'ವಿಕ ಸೂಪರ್‌ ಸ್ಟಾರ್‌ ಪ್ರಶಸ್ತಿ' ನೀಡಿ ಗುರುತಿಸಿದೆ. ಇವರು ಸಾಧಕರಾಗಲು ಕಾರಣವಾದ ಕೃಷಿ ಚಟುವಟಿಕೆ, ಆರ್ಥಿಕ ಸಬಲರಾಗಲು ಅವರು ಕಂಡುಕೊಂಡ ಮಾರ್ಗ ಮುಂತಾದವುಗಳ ಬಗ್ಗೆ ಪರಿಚಯಿಸುವ ಸರಣಿ ಆರಂಭ.
Vijaya Karnataka Web vk super star raita
ನಾಡಿನಲ್ಲಿ ಬದುಕು ಕಟ್ಟಿದ ಕಾಡು ಹಕ್ಕಿ


ಮೈಸೂರು: ಇವರು ಎಚ್‌.ಡಿ.ಕೋಟೆ ತಾಲೂಕಿನ ಸೊಳ್ಳೇಪುರ ಹಾಡಿಯ ಬುಡಕಟ್ಟು ಜನಾಂಗದ ರೈತ ಮಹಿಳೆ ದಾಸಿ. ಹತ್ತು ವರ್ಷಗಳ ಹಿಂದೆ ಕಾಡುಬಿಟ್ಟು ನಾಡು ಸೇರಿದಾಗ ಕೃಷಿಯ ಬಗ್ಗೆ ಏನೂ ಗೊತ್ತಿರಲಿಲ್ಲ. ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಸುಂಕದಕಟ್ಟೆ ಆನೆ ಶಿಬಿರದ ಬಳಿ ವಾಸ್ತವ್ಯವಿದ್ದ ಇವರಿಗೆ ಪುನರ್ವಸತಿ ಕಲ್ಪಿಸಿದ ಸರಕಾರ 3 ಎಕರೆ ಜಮೀನು ಕೊಟ್ಟಿತು. 10 ಮಕ್ಕಳ ಕುಟುಂಬವನ್ನು ಸಲಹುವ ಕಾರಣಕ್ಕೆ ಮಣ್ಣಿನ ನಂಟು ಬೆಳೆಸಿಕೊಂಡರು. ನಂಬಿದ ಭೂ ತಾಯಿ ಕೈಬಿಡಲಿಲ್ಲ. ಈಗ 3 ಎಕರೆ ಜತೆಗೆ, 2 ಎಕರೆ ಜಮೀನನ್ನು ಗುತ್ತಿಗೆ ಪಡೆದಿದ್ದಾರೆ. ಒಂದೂವರೆ ಎಕರೆಯಲ್ಲಿ ರಾಸಾಯನಿಕ ಬಳಸದೆ 45 ಕ್ವಿಂಟಾಲ್‌ ಹಸಿ ಮೆಣಸಿನಕಾಯಿ ಬೆಳೆ ತೆಗೆಯುತ್ತಿದ್ದಾರೆ. 1 ಎಕರೆಯಲ್ಲಿ ಟೊಮೆಟೊ, ಅರ್ಧ ಎಕರೆಯಲ್ಲಿ ಬೀನ್ಸ್‌ ಬೆಳೆದಿದ್ದಾರೆ. ಕುರಿ, ಕೋಳಿ, ಮೇಕೆ ಜತೆಗೆ ಜೇನು ಸಾಕಣೆ ಸೇರಿ ಸಮಗ್ರಕೃಷಿ ಕೈಗೊಂಡಿರುವ ಶ್ರೀಮತಿ ದಾಸಿ, ತಮ್ಮ ನಾಲ್ವರು ಪುತ್ರರು, 6 ಪುತ್ರಿಯರ ತುಂಬು ಕುಟುಂಬಕ್ಕೆ ಬದುಕಿನ ದಾರಿ ಕಲ್ಪಿಸಿದ್ದಾರೆ.

ಪುತ್ರರಲ್ಲಿ ದಾಸಪ್ಪ, ಪತ್ನಿ ನಂದಿ ಕೃಷಿಯಲ್ಲಿ ನೆರವಾಗುತ್ತಿದ್ದಾರೆ. ಸ್ವಾವಲಂಬನೆಯ ಮಂತ್ರ ಜಪಿಸಿರುವ ಕುಟುಂಬಕ್ಕೆ ಸಾಲ ಪಡೆಯುವ ಅವಶ್ಯಕತೆ ಬಂದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ