ಆ್ಯಪ್ನಗರ

10 ಜನ ಮಂತ್ರಿಯಾದ್ರೆ ಉಳಿದವ್ರೇನು ಕಡುಬು ತಿಂತಾರಾ?: ಹೆಚ್ ಡಿಕೆ ವ್ಯಂಗ್ಯ

ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ 10 ಜನ ಮಂತ್ರಿಯಾದ್ರೆ ಬಿಜೆಪಿಯಲ್ಲಿ ಮಿಕ್ಕ 105 ಮಂದಿ ಏನು ಕಡುಬು ತಿಂತಾರಾ ಎಂದು ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯ ವಾಡಿದ್ದಾರೆ. ನಾರಾಯಣಗೌಡ ಆ ಪುಣ್ಯತ್ಮನಾದರೂ ಮಂಡ್ಯದ ಅಭಿವೃದ್ಧಿ ಮಾಡಲಿ ಎಂದು ಕುಹುಕವಾಡಿದರು.

Vijaya Karnataka Web 6 Feb 2020, 3:45 pm
ಮೈಸೂರು: ಉಪಚುನಾವಣೆಯಲ್ಲಿ ಗೆದ್ದು ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ 10 ಜನ ಮಂತ್ರಿಯಾದ್ರೆ ಬಿಜೆಪಿಯಲ್ಲಿ ಮಿಕ್ಕ 105 ಮಂದಿ ಏನು ಕಡುಬು ತಿಂತಾರಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
Vijaya Karnataka Web hd kumaraswamy


ಮೈಸೂರಿನಲ್ಲಿ ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿರುವ ಹೆಚ್ ಡಿಕೆ ನನಗೆ ಸಂಪುಟ ವಿಸ್ತರಣೆ ವಿಚಾರವಾಗಿ ಯಾವ ಆಮಂತ್ರಣ ಬಂದಿಲ್ಲ. ಆದ್ದರಿಂದ ನಾನು ಹೋಗಿಲ್ಲ. ಅದ್ಯಾರೋ ಅನರ್ಹರೋ, ಅರ್ಹರೋ ಹತ್ತು ಜನ ಸಚಿವರಾಗಿದ್ದಾರೆ. ಅವರಿಗೆ ಒಳ್ಳೆಯಾಗಲಿ ಅಂತ ನಾನು ಹಾರೈಸುತ್ತೇನೆ. ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಲಿ. ನಾರಾಯಣಗೌಡರು ಮಂಡ್ಯದ ಅಭಿವೃದ್ಧಿಯನ್ನೂ ಮಾಡಲಿ. ಯಾರು ಬೇಡ ಅಂತಾರೆ. ಮೊದಲು ಅಭಿವೃದ್ಧಿ ಮಾಡಿ‌ ತೋರಿಸಲಿ. ನಮ್ ಕೈಯಲ್ಲಂತೂ ಆಗಲಿಲ್ಲ, ಆ ಪುಣ್ಯತ್ಮನಾದರೂ ಮಾಡಲಿ. ಹೊಸ ಸಚಿವರು ಟೀಕೆ ಮಾಡುತ್ತಾರೋ, ಅಭಿವೃದ್ಧಿ ಮಾಡ್ತಾರೋ ಕಾದು ನೋಡೋಣ ಎಂದರು.

ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಈಗ ಯಾವುದೇ ಸಮಸ್ಯೆ ಇಲ್ಲ. ಮುಂದೆ ಏನಾಗುತ್ತೆ ಅಂತ ನೀವೇ ಕಾದು ನೋಡಿ ಎಂದು ಹೇಳಿದ್ದಾರೆ. 10 ಜನ ಸಚಿವರಾಗಿದ್ದಾರೆ. ಉಳಿದವರು ಸುಮ್ಮನೆ ಇರುತ್ತಾರಾ ? ಈಗ ಸಮಸ್ಯೆ ಇಲ್ಲ, ಮುಂದೆ ಏನಾಗುತ್ತೋ ಗೊತ್ತಿಲ್ಲ. ಭವಿಷ್ಯ ಹೇಳಲು ನಾನು ಜ್ಯೋತಿಷಿ ಅಂತು ಅಲ್ಲ. ನಮ್ಮ ಪಕ್ಷದಿಂದ ಹೊರ ಹೋದ ಶಾಸಕರಿಗೆ ತೃಪ್ತಿ ಆಗಿದೆ. ಅವರು ಈಗ ಸಂಪದ್ಭರಿತರಾಗಿದ್ದಾರೆ ಎಂದು ಆಪರೇಶನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿರುವವರಿಗೆ ಚಾಟಿ ಬೀಸಿದರು.

2008ರಲ್ಲಿ ಬಿಜೆಪಿ ಸರಕಾರದ ಜತೆ ಗುರುತಿಸಿಕೊಂಡಿದ್ದ ಪಕ್ಷೇತರರು:

ತಾವು ಇರುವ ಸರಕಾರವನ್ನು ಉಳಿಸಿಕೊಳ್ಳಬೇಕೆಂಬುದರಲ್ಲಿ ಸಿಎಂ ಬಿಎಸ್ವೈ ಪರಿಣತರು. ಸರಕಾರ ಬೀಳಿಸುವುದು, ರಚಿಸುವುದು ಅವರಿಗೆ ಕರಗತವಾಗಿದೆ. ಈ ಸರ್ಕಾರವನ್ನು ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ. ಬಿಎಸ್ವೈ ಕಷ್ಟಪಟ್ಟು ಆಸೆಯಿಂದ ಸಿಎಂ ಆಗಿದ್ದಾರೆ. ಅವರಿಂದ ಒಳ್ಳೆಯ ಆಡಳಿತ ನಿರೀಕ್ಷಿಸುತ್ತೇನೆ ಎಂದು ಕುಟುಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ