ಆ್ಯಪ್ನಗರ

ಹನಗೋಡು ಅಣೆಕಟ್ಟೆಯಿಂದ ಏಳು ಕೆರೆಗಳಿಗೆ ನೀರು

ಲಕ್ಷ ್ಮಣತೀರ್ಥ ನದಿಯ ಹನಗೋಡು ಅಣೆಕಟ್ಟೆಯಿಂದ ನಾಲೆಗೆ ನೀರು ಹರಿಸುತ್ತಿದ್ದು, ಈಗಾಗಲೇ ಏಳು ಕೆರೆಗಳಿಗೆ ನೀರು ತುಂಬಿಸಲಾಗಿದೆ...

Vijaya Karnataka 25 Jul 2019, 5:00 am
ಹುಣಸೂರು : ಲಕ್ಷ ್ಮಣತೀರ್ಥ ನದಿಯ ಹನಗೋಡು ಅಣೆಕಟ್ಟೆಯಿಂದ ನಾಲೆಗೆ ನೀರು ಹರಿಸುತ್ತಿದ್ದು, ಈಗಾಗಲೇ ಏಳು ಕೆರೆಗಳಿಗೆ ನೀರು ತುಂಬಿಸಲಾಗಿದೆ.
Vijaya Karnataka Web water from the hanagodu dam
ಹನಗೋಡು ಅಣೆಕಟ್ಟೆಯಿಂದ ಏಳು ಕೆರೆಗಳಿಗೆ ನೀರು


ಈ ಅಣೆಕಟ್ಟೆಯಿಂದ 42 ಕೆರೆಗಳಿಗೆ ನೀರು ತುಂಬಿಸುವ ಹಾಗೂ 28 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿಯಾಗಲಿದ್ದು, ನಾಲೆಯಲ್ಲಿ 450 ಕ್ಯೂಸೆಕ್‌ ನೀರು ಹರಿಸಲಾಗುತ್ತಿದ್ದು, ಕೆಂಚನಕೆರೆ, ಹೊನ್ನೇಗೌಡನಕಟ್ಟೆ, ಮಳ್ಳುಕೆರೆ, ಕೊಡಗಲಿಕೆರೆ, ಚಿಕ್ಕೇಗೌಡನಕಟ್ಟೆ ಹಾಗೂ ಹನುಮಂತಪುರ ನಾಲಾ ವ್ಯಾಪ್ತಿಯ ಮೂರು ಕೆರೆಗಳಿಗೆ ನೀರು ತುಂಬಿಸಲಾಗಿದೆ.

ಅಣೆಕಟ್ಟೆ ಮೇಲೆ 1200ಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಹರಿಯುತ್ತಿದ್ದು, ಇದೇ ರೀತಿ ಮಳೆ ಮುಂದುವರಿದಲ್ಲಿ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಲಿದೆ. ಹಾಗೂ ನಾಲೆಯಲ್ಲೂ ಹೆಚ್ಚು ನೀರು ಹರಿಸುವರು.

ಕೊಡಗಿನ ಬ್ರಹ್ಮಗಿರಿ ಅರಣ್ಯ ಪ್ರದೇಶ ಹಾಗೂ ನಾಗರಹೊಳೆ ಉದ್ಯಾನದಲ್ಲಿ ಉತ್ತಮ ಮಳೆಯಾಗಿ 25 ದಿನಗಳಿಂದ ಹನಗೋಡು ಅಣೆಕಟ್ಟೆ ಮೇಲೆ ನೀರು ಹರಿಯುತ್ತಿದ್ದರೂ ನಾಲೆಗಳಿಗೆ ನೀರು ಹರಿಸುತ್ತಿಲ್ಲವೆಂದು ರೈತ ಸಂಘ(ಪುಟ್ಟಣ್ಣಯ್ಯಬಣ) ಪ್ರತಿಭಟಿಸಿದ ಹಿನ್ನೆಲೆಯಲ್ಲಿ ವಾರದಿಂದ ನಾಲೆಯಲ್ಲಿ ಹಂತಹಂತವಾಗಿ ನೀರು ಹರಿಸಲಾಗುತ್ತಿದೆ.

ಆಧುನೀಕರಣ ನಾಲೆ: ಹಿಂದಿನ ಸಿದ್ದರಾಮಯ್ಯ ಸರಕಾರ ಹಾಗೂ ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್‌ ಅವರ ಅವಧಿಯಲ್ಲಿ 156 ಕೋಟಿ ರೂ. ವೆಚ್ಚದಲ್ಲಿ ಹನಗೋಡು ಅಣೆಕಟ್ಟೆ ಹಾಗೂ ನಾಲೆ ಆಧುನೀಕರಣ ಕಾಮಗಾರಿ ಮಂಜೂರಾಗಿದ್ದು, 16 ಕಿ.ಮೀ.ಯ ಮುಖ್ಯನಾಲೆ ಕಾಮಗಾರಿ ಪೂರ್ತಿಯಾಗಿದ್ದರೆ, ಇನ್ನು ಉದ್ದೂರು ಹಾಗೂ ಹನುಮಂತಪುರ, ನಲ್ಲೂರು ನಾಲಾ ಆಧುನೀಕರಣ ಕಾಮಗಾರಿ ಬಹುತೇಕ ಮುಗಿದಿದ್ದು, ಇನ್ನು ಕಾಮಗಾರಿ ಆಗಬೇಕಿದೆ. ಅಣೆಕಟ್ಟೆ ಹಾಗೂ ನಾಲೆ ಆಧುನೀಕರಣದಿಂದಾಗಿ ನೀರು ರಭಸವಾಗಿ ಹರಿಯುತ್ತಿದ್ದು, ಕೆರೆ ಕಟ್ಟೆಗಳು ಬೇಗನೆ ತುಂಬಲು ಸಹಕಾರಿಯಾಗಿದೆ.

ಕೆರೆ-ಕಟ್ಟೆಗೆ ಮಾತ್ರ ನೀರು:
ಲಕ್ಷ ್ಮಣತೀರ್ಥ ನದಿಯಲ್ಲಿ ನೀರಿನ ಹರಿವು ಕಡಿಮೆ ಪ್ರಮಾಣದಲ್ಲಿರುವುದರಿಂದ ಮೊದಲಿಗೆ ನಾಲಾ ನೀರನ್ನು ಕೆರೆ-ಕಟ್ಟೆಗಳಿಗೆ ಮಾತ್ರ ತುಂಬಿಸಲಾಗುತ್ತಿದೆ. ಈಗಾಗಲೆ ಹಾರಂಗಿ ಇಲಾಖೆ ವತಿಯಿಂದ ಸೂಚನೆ ನೀಡುವವರೆಗೆ ರೈತರು ಕೃಷಿ ಚಟುವಟಿಕೆ ನಡೆಸದಂತೆ, ಮುಂದಿನ ದಿನಗಳಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದಲ್ಲಿ ಮಾತ್ರ ವ್ಯವಸಾಯಕ್ಕೆ ನೀರು ನೀಡಲಾಗುವುದು, ಅಚ್ಚುಕಟ್ಟು ರೈತರು ಸಹಕರಿಸಬೇಕೆಂದು ಕರಪತ್ರದ ಮೂಲಕ ಮನವಿ ಮಾಡಿಕೊಳ್ಳಲಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದಲ್ಲಿ ನಾಲೆಗೆ ಮತ್ತಷ್ಟು ನೀರು ಹರಿಸಲಾಗುವುದು.
-ಕುಶುಕುಮಾರ್‌, ಎ.ಇ.ಇ.ಹಾರಂಗಿ,ಹನಗೋಡು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ