ಆ್ಯಪ್ನಗರ

‘ಧನುಷ್ಕೋಟಿ’ಯಲ್ಲಿ ಜಲ ವೈಭವ

ಕಾವೇರಿ ಕಣಿವೆಯಲ್ಲಿ ಮುಂಗಾರು ಚುರುಕುಗೊಂಡ ಹಿನ್ನೆಲೆಯಲ್ಲಿ ಚುಂಚನಕಟ್ಟೆ ಸಮೀಪ ಧನುಷ್ಕೋಟಿ ಜಲಪಾತ ಮೈದುಂಬಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

Vijaya Karnataka 8 Aug 2019, 5:00 am
ಮಣಿಕಂಠ ಸಿ.ಆರ್‌.ಚುಂಚನಕಟ್ಟೆ
Vijaya Karnataka Web MYR-MYS 7 CKT P01


ಕಾವೇರಿ ಕಣಿವೆಯಲ್ಲಿ ಮುಂಗಾರು ಚುರುಕುಗೊಂಡ ಹಿನ್ನೆಲೆಯಲ್ಲಿ ಚುಂಚನಕಟ್ಟೆ ಸಮೀಪ ಧನುಷ್ಕೋಟಿ ಜಲಪಾತ ಮೈದುಂಬಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಮಡಿಕೇರಿಯಲ್ಲಿ ಮಳೆ ಹೆಚ್ಚಾಗುತ್ತಿದ್ದಂತೆ ಇಲ್ಲಿನ ಜಲಪಾತದಲ್ಲಿ ಕಾವೇರಿಯು ಭೋರ್ಗರೆದು ಧುಮ್ಮಿಕ್ಕಿ ಹರಿಯುತ್ತಿರುವ ರೌದ್ರ ರಮಣೀಯ ದೃಶ್ಯ ನೋಡುಗರನ್ನು ಮಂತ್ರಮುಗÜ್ಧರನ್ನಾಗಿಸುತ್ತದೆ. ಮಳೆಗಾಲದಲ್ಲಿ ಜಲಪಾತ ಸತತ ಮೂರು ತಿಂಗಳಿಗೂ ಹೆಚ್ಚು ಕಾಲ ಮೈದುಂಬಿರುತ್ತದೆ. ಸುಮಾರು 27 ಮೀಟರ್‌ ಎತ್ತರದ ಬಂಡೆಯ ಮೇಲಿಂದ ಧುಮ್ಮಿಕ್ಕಿ ಭೋರ್ಗರೆಯುತ್ತ ಹಾಲ್ನೊರೆಯಂತೆ ಹರಿಯುವ ಕಾವೇರಿಯ ಮನಮೋಹಕ ಜಲಧಾರೆ ಕುಟುಂಬ ಸಮೇತರಾಗಿ ಆಗಮಿಸುವ ಪ್ರವಾಸಿಗರಿಗಂತೂ ರಸದೌತಣ ನೀಡುತ್ತದೆ.

ಚುಂಚನಕಟ್ಟೆಗೆ ದಿನ ನಿತ್ಯ ಹಾಗೂ ವಾರಾಂತ್ಯ ರಜಾ ದಿನಗಳಲ್ಲಿ ರಾಜ್ಯದ ನಾನಾ ಭಾಗಗಳಿಂದ ಮತ್ತು ಹೊರ ರಾಜ್ಯದಿಂದಲೂ ನೂರಾರು ಪ್ರವಾಸಿಗರು ಆಗಮಿಸಿ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳುತ್ತಾರೆ. ಅಲ್ಲದೆ ಜಲಪಾತದ ರಮಣೀಯ ದೃಶ್ಯವನ್ನು ಕೆಲವರು ಮೊಬೈಲ್‌ ಕ್ಯಾಮೆರಾಗಳಲ್ಲಿ ಸೆರೆ ಹಿಡಿದರೆ, ಇನ್ನು ಕೆಲ ಕುಟುಂಬದ ಸದಸ್ಯರು, ಸ್ವೇಹಿತರು, ನವ ವಿವಾಹಿತರು ಹಾಗೂ ಯುವಕ, ಯುವತಿಯರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಾರೆ. ನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ದಾಂಗುಡಿ ಇಡುತ್ತಾ ಧನುಷ್ಕೋಟಿ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಧಾರ್ಮಿಕ ಕ್ಷೇತ್ರ: ಕೆ.ಆರ್‌.ನಗರ ತಾಲೂಕಿನ ಇತಿಹಾಸ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಹಾಗೂ ಪ್ರವಾಸಿಗರ ಪ್ರೇಕ್ಷಣೀಯ ಸ್ಥಳವಾಗಿರುವ ಚುಂಚನಕಟ್ಟೆ ಗ್ರಾಮದಲ್ಲಿ ತ್ರೇತಾಯುಗದ ಶ್ರೀಕೋದಂಡರಾಮನ ದೇಗುಲ, ಅದರಂಚಿನಲ್ಲೆ ಜೀವನದಿ ಕಾವೇರಿ ಹರಿಯುತ್ತಿದ್ದು, ಧನುಷ್ಕೋಟಿ ಜಲಪಾತ ಸಹ ತನ್ನದೆ ಆದ ಐತಿಹ್ಯವನ್ನು ಹೊಂದಿದೆ.


ಕೆ.ಆರ್‌.ನಗರ ತಾಲೂಕಿನ ಉತ್ತಮ ಪ್ರವಾಸಿ ತಾಣವಾಗಿರುವ ಚುಂಚನಕಟ್ಟೆ ಗ್ರಾಮದಲ್ಲಿ ದೇವಾಲಯ, ಜಾತ್ರೆ, ಜಲಪಾತ ಇವೆಲ್ಲ ಇತಿಹಾಸವನ್ನೇ ಹೇಳುತ್ತಿವೆ. 3 ವರ್ಷಗಳಿಂದ ಜಲಪಾತೋತ್ಸವ ಕಾರ‍್ಯಕ್ರಮ ನಡೆಸಲಾಗುತ್ತಿದೆ. ಸದ್ಯ ಗ್ರಾಮದ ಚಿತ್ರಣವನ್ನೇ ಪ್ರವಾಸೋದ್ಯಮ ಇಲಾಖೆ ಬದಲಿಸುತ್ತಿದೆ. ಹಲವು ಅಭಿವೃದ್ಧಿಯ ಹೈಟೆಕ್‌ ಕಾಮಗಾರಿಗಳ ಕಾರ‍್ಯ ಆರಂಭಿಸಿದ್ದು, ಮುಂದೊಂದು ದಿನ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲಿದೆ.
-ಪ್ರದೀಪ್‌ ಕುಮಾರ್‌, ಚುಂಚನಕಟ್ಟೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ